Wednesday, July 22, 2009

ಇಂಟರ್ ಸಿಟಿ ಟ್ರೈನಿನಲ್ಲೊಬ್ಬ "ಕನ್ನಡ ಪುಸ್ತಕೋದ್ಯಮಿ"


ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ...
ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನನ ಕುತೂಹಲಿ.
ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು ಐದು ನಿಮಿಷದಲ್ಲಿಯೋ ಒಂದೇ ಕುಟುಂಬದವರೇನೋ ಅನ್ನುವಷ್ಟರ ಮಟ್ಟಿಗೆ ಒಂದಾಗಿಬಿಟ್ಟಿರುತ್ತಾರೆ. ಟ್ರೈನಿನಲ್ಲಿ ಮಾರಲು ಬರುವ ವ್ಯಕ್ತಿಗಳು ತಿನ್ನಲು ವಿವಿಧ ಬಗೆಯ ತಿಂಡಿ ತಿನಿಸುಗಳು, ಆ ಸ್ಥಳದ ವಿಶೇಷ ತಿನಿಸು, ಹಣ್ಣು-ಹಂಪಲುಗಳನ್ನು ಮಾರುತ್ತಾರೆ.
ವಿಷಯ ಅದಲ್ಲ ಇಲ್ಲಿ.
ನನಗೆ ತಿಳಿದಂತೆ ಟ್ರೈನಿನಲ್ಲಿ ಅತಿ ಹೆಚ್ಚು ತಿನಿಸುಗಳಿಗೋ, ಇಲ್ಲವೆ ಭಿಕ್ಷಾಟನೆ ಹೆಚ್ಚಿರುತ್ತದೆ. ಒಮ್ಮೊಮ್ಮೆ ಅತಿ ಎನ್ನುವಷ್ಟು.
ಅದರೆ ನಾನು ಚಿಕ್ಕಮಗಳೂರು ಪಕ್ಕದ ಕಡೂರಿನಿಂದ ಹರಿಹರಕ್ಕೆ ಇಂಟರ್ ಸಿಟಿ ಟ್ರೈನಿನಲ್ಲಿ ಪ್ರಯಾಣಿಸುವಾಗ ಕಂಡದ್ದು ಸ್ವಲ್ವ ಅಚ್ಚರಿ ತಂದಿತು. ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ದಿನಪತ್ರಿಕೆಗಳನ್ನು ಹಿಡಿದು ಪೇಪರ್... ಪೇಪರ್ ಅಂತ ಕೂಗಿ ಮಾರುವವರಿದ್ದಾರೆ.
ಆದರೆ ತನ್ನ ಎರಡೂ ಕೈಗಳಲ್ಲಿ ಎದೆತುಂಬಿಕೊಳ್ಳುವಷ್ಟು ಪುಸ್ತಕಗಳನ್ನು ಒಂದು ಬೋಗಿಯ ಜನಕ್ಕೆ ಏನೂ ಮಾತಾಡದೆ ಅವರ ಕೈಗೆ ಪುಸ್ತಕಗಳನ್ನು ಕೊಟ್ಟು ಮುಂದೆ ಹೋಗುವುದು. ಆ ಪುಸ್ತಕಗಳನ್ನು ಅವರು ತಮ್ಮ ಅಕ್ಕಪಕ್ಕದವರಿಗೆ ಕೋಡುತ್ತಾರೆ, ಇಲ್ಲವೆ ಆಸಕ್ತರು ತಾವೇ ತೆಗೆದುಕೊಂಡು ನೋಡುತ್ತಾರೆ. ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳುತ್ತಾರೆ. ಮಿಕ್ಕುಳಿದ ಪುಸ್ತಕಗಳನ್ನು ಅದೇ ರೀತಿ ಮುಂದಿನ ಬೋಗಿಗೆ ಪಾಸ್ ಮಾಡುವುದು. ಹೆಚ್ಚಿಗೆ ಮಾತೇ ಇಲ್ಲ. ಪುಸ್ತಕ... ಪುಸ್ತಕ.. ಬುಕ್ ಬುಕ್... ಅಂತ ತಮ್ಮದೇ ಸ್ಟೈಲ್ ನಲ್ಲಿ ಕೂಗುವ ಪ್ರಮೇವವೇ ಇಲ್ಲ. ಅದು ನನಗೆ ನಿಜವಾಗಿಯೂ ಸಂತೋಷ ಆಯಿತು.
ಅದರಲ್ಲಿ ಆತನು ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದುದು ನನಗೆ ಇನ್ನು ಸಂತಸ ತಂದಿತು.
ಆಗ ಕೂತೂಹಲದಿಂದ ನನ್ನ ಬೋಗಿಗೆ ಬಂದಾಗ ಮಾತಿಗೆಳೆದೆ. ಮಾತಾಡಲಾರಾಂಭಿಸಿದೆ.
ನಾನು ಕೊಂಚ ಎಕ್ಡೈಟ್ ಆಗಿ
ಯಾಕೆ ಪುಸ್ತಕಗಳನ್ನು ಮಾರುತ್ತಿದ್ದೀಯಾ? ಬೇರೆ ಏನಾದರೂ ಮಾರಬಹುದಲ್ಲ. ಹೆಚ್ಚು ದುಡ್ಡು ಸಿಗುತ್ತಲ್ಲ ಅಂದೆ.
ಇಲ್ಲ ಸಾರ್. ನಾನು ಸುಮಾರು ಏಳು ವರುಷಗಳಿಂದಲೂ ಇದೇ ಮಾರುತ್ತಿದ್ದೇನೆ. ಎಲ್ಲರೂ ತಿಂಡಿ, ತಿನಿಸುಗಳನ್ನು ಮಾರುತ್ತಾರೆ. ನಾನು ಪುಸ್ತಕಗಳನ್ನು ಮಾರಬಹುದಲ್ವಾ ಅಂದುಕೊಂಡು ಮಾರಲು ಶುರು ಮಾಡಿದೆ.
ನಾನು 7ನೇ ಕ್ಲಾಸಿಗೆ ಓದು ಬಿಟ್ಟೆ. ದುಡಿಯಲೂ ಬೇರೇ ಏನೂ ತೋಚಲಿಲ್ಲ. ಇದನ್ನೇ ವೃತ್ತಿ ಮಾಡಿಕೊಂಡೆ.
ಇದರಲ್ಲಿ ಲಾಭ ಬರುತ್ತಾ? ಅಂತ ಕೂಡಲೇ ಪ್ರಶ್ನೆ ಮಾಡಿದೆ.
ಪರವಾಗಿಲ್ಲ. ದಿನಕ್ಕೆ ನೂರು, ನೂರೈವತ್ತು ಉಳಿಯುತ್ತೆ ಅಂದ.
ನನಗೆ ಕೂತೂಹಲ ತಡಯಲಾಗಲಿಲ್ಲ... ನಾನು ಲೋಕಲ್ ನ್ಯೂಸ್ ಪೇಪರ್ ರಿಪೋರ್ಟರ್. ನಿನ್ನದೊಂದು ಪೋಟೋ ತೆಗೀಲಾ ಅಂದೆ.
ಕೂಡಲೇ ನನ್ನ ಕತೆ ಮುಗೀತು. ಸಾರ್. ದಯವಿಟ್ಟು ಬೇಡ... ಸಾರ್. ಪೇಪರ್ಗೆ ಬಂದು ನನ್ನ ಈ ವೃತ್ತಿಗೂ ಕುಂದು ತರಬೇಡಿ ಅಂತ ಕೈಯಲ್ಲಿದ್ದ ಪುಸ್ತಕಗಳನ್ನು ಕಸಿದುಕೊಂಡ.
ದಯವಿಟ್ಟು ಕ್ಷಮಿಸಿ. ಮಾತಾಡಿ ಆದ್ರೆ ಫೋಟೋ ಬೇಡ ಅಂದ.

ನನಗಾಗ ನಿಜವಾಗಿಯೂ ಅಯ್ಯೋ ಅನಿಸಿತು. ಬದುಕು ಎಷ್ಟು ದುರ್ಬರ. ಸುಮಾರು ಏಳು ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದ ಪುಸ್ತಕೋದ್ಯಮಿ ಜೀವನದ ಅಭದ್ರತೆ ಪ್ರತಿ ದಿನವೂ ಕಾಡುತ್ತೆ. (ರೈಲ್ವೆಯಲ್ಲಿ ಆ ರೀತಿ ಪರ್ಮಿಶನ್ ಇಲ್ಲದೇ ಮಾರುವ ಹಾಗಿಲ್ಲ ಅಂತೆ!)
ನಿಜ ಹೇಳಿ ಪುಸ್ತಕವನ್ನು ನೋಡಿ, ಓದಿ ಕೊಂಡುಕೊಳ್ಳಲು ಹಿಂದು ಮುಂದು ನೋಡುವ ಈ ಕಾಲದಲ್ಲಿ ಪುಸ್ತಕಗಳನ್ನು ಮಾರಿಯೇ ಜೀವನ ಸಾಗಿಸುವವನು ನನಗೆ ಶ್ರೇಷ್ಠ ಅನಿಸ ತೊಡಗಿದ. ಜೀವನದಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಬದುಕುತ್ತಾರೆ. ಆದರೆ ಈ ರೀತಿ ತನ್ನ ಬದುಕನ್ನು ಕಟ್ಟಿಕೊಳ್ಳುವವರು ಕೆಲವರು ಮಾತ್ರ!
ನೀವೆಂದಾದರೆ ಬೆಂಗಳೂರು-ಹುಬ್ಬಳ್ಳಿ ಇಂಟರ್ಸಿಟಿ ರೈಲಿನಲ್ಲಿ ಆ ಪುಸ್ತಕೋದ್ಯಮಿ ಸಿಕ್ಕರೆ ನನ್ನ ನಮನ ತಿಳಿಸಿ!!!

Wednesday, May 20, 2009

ಮುಖಪುಟ ಹೇಗಿದೆ?





ದೂರಶಿಕ್ಷಣ ಕೇಂದ್ರದ ಕನ್ನಡ 'ದರ್ಶಿನಿ', ಇಂಗ್ಲಿಶ್ 'ಅನ್ ಇನ್ ಸೈಟ್' ಪರಿಚಯ ಕೈಪಿಡಿಯನ್ನು ಡಾ. ನಂಜುಂಡಪ್ಪ ವರದಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ಶಶೀಲ್ ಜಿ ನಮೋಶಿ, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಬಿಎ ವಿವೇಕ ರೈ ಮತ್ತು ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೆ ಬಿ ಶ್ರೀನಿವಾಸ ಬಿಡುಗಡೆ ಮಾಡಿದರು.

Friday, January 16, 2009

ಸಕ್ಕರೆ ನಗುವಿನ ಅಕ್ಕರೆಯ ಗೆಳತಿ 'ಸೌಮ್ಯ'ಳ ಕವನ, ಪತ್ರಗಳು


ಪ್ರಾರ್ಥನೆ
ಜೀವನದಂಗಳದಲ್ಲಿ
ಪ್ರೇಮದಾಟವನ್ನು
ಆಡುವ ಮುಂಚೆ
ಸೋಲು-ಗೆಲುವುಗಳ
ಪರಮಾರ್ಶಿಸಬೇಕಾಗಿ
ಕಳಕಳಿಯ ಕೋರಿಕೆ

ಪ್ರೇಮಿ
ತನುಮನವೆಲ್ಲಾ ವ್ಯಾಪಿಸಿ
ಅಣುಅಣುವಿನಲ್ಲೂ
ನೋವೇ ತುಂಬಿ
ಬದುಕಿನಿಂದ ದೂರವಾಗಿ
ನೋವಿನ ತರಂಗವನ್ನೇ ಮೀಟುತ್ತಿರು
ಎಂದು ವಿಷಾದ ಗೀತೆಯ
ಉಡುಗೊರೆ ಕೊಟ್ಟು ಹೋದವ

ತರ್ಪಣ
ಬಾಂಧವ್ಯಗಳ ಜೊತೆ
ಬಂಧುವಿನಂತೆ ನಟಿಸಿ
ಆಟದ ವಸ್ತುವಿನಂತೆ
ನನ್ನ ಬಳಸಿಕೊಳ್ಳಲು ಬಯಸಿ
ಮುಗ್ಧ ಭಾವನೆಗಳ ಕೊಂದ
ನಿನ್ನ ಮನಸಿಗೆ ಅಶ್ರುನಮನ

ವಿನಂತಿ
ಎದೆಯಾಳದಿಂದ ಹೊರಹೊಮ್ಮುವ
ನಿಟ್ಟುಸಿರಿನ ಬಿಸಿ
ನಿನ್ನ ಸುಡುವ ಮುನ್ನ
ಹುಡುಗಾಟದಲ್ಲಿ ನೀನು
ನನ್ನೆದೆಯಲ್ಲಿಟ್ಟ ನೆನಪಿನ
ಗುರುತನ್ನು ಕಾಣದಂತೆ ಅಳಿಸಿಬಿಡು

ನಾಚಿಕೆ
ಸೂರ್ಯ ರಶ್ಮಿಗೆ
ಸಂಕೋಚದಿಂದ
ಮುದುಡಿದ ತಾವರೆಯಂತೆ
ನಿನ್ನ ನೋಡಿದಾಕ್ಷಣ
ಕೆಂಪೇರಿದ ಕೆನ್ನೆಯೊಂದಿಗೆ
ತಲೆಬಾಗಿಸಿ, ಕಾಲ್ಬೆರಳಿನಿಂದ
ನೆಲಕೆರೆದು ವ್ಯಕ್ತಪಡಿಸಿದ
ಹೆಣ್ತನದ ಸೂಚನೆ

ದ್ರೋಹ
ನನ್ನೆಲ್ಲಾ ನಂಬಿಕೆ,
ಭರವಸೆಗಳನ್ನು
ಗಾಳಿಗೆ ತೂರಿ,
ಮನಸಿನರಗಿನ ಮನೆಗೆ
ಕೊಳ್ಳಿ ಇಟ್ಟ
ನಿನ್ನ ಮನದ ಒಳಸಂಚು !!!

ಬದುಕಂದ್ರೆ.........
ಎಲ್ಲಾ
ಯಾರೂ ಇಲ್ಲದಂತಹ
ಏಕಾಂಗಿತನವೇ
ತುಂಬಿಕೊಂಡಕತ್ತಲೆ ಕೋಣೆ

ಕಟ್ಟಿಕೊಂಡ ಕನಸುಗಳು
ನಂಬಿಕೆ ಕಳೆದುಕೊಂಡು
ಬೆತ್ತಲಾಗಿ ಸತ್ತು ಮಲಗಿದರೂ
ಜೀವನ ನಡೆಸಬೇಕಾದ ಅನಿವಾರ್ಯತೆ

ನಾನೆಂಬ ಭಾವ ಸತ್ತು
ಇನ್ನೊಬ್ಬರ ಖುಗಾಗಿ
ಸುಳ್ಳೆ ಸುಳ್ಳು ನಗುತ್ತಾ
ಕಳೆಯಬೇಕಾಗಿರುವ ಮನೋಜ್ಞ ಅಭಿನಯದ
ಸುಂದರ ನಾಟಕ

ಒಂದು ಜೀವದ ನೋವನ್ನು
ಬಲವಂತದಿಂದ ಕಿತ್ತುಕೊಂಡು
ಮತ್ತೊಂದು ಜೀವಿಯ ಸಂತೋಷಕ್ಕೆ ಅದನ್ನು
ಟಾನಿಕ್‌ನಂತೆ ನೀಡುವಕಪಟ ವೈದ್ಯ

ಸಂತೋಷ, ಹತಾಶೆ, ಸೆಳೆತ, ಮಿಡಿತ
ಹೀಗೆ ನೂರಾರು ಭಾವನೆಗಳನ್ನು
ಕಟ್ಟಿಕೊಂಡು ಶರವೇಗದಲ್ಲಿ ಓಡುವ ಕಾಲರಾಯನ ಗೆಳೆಯ





ದೇವರೇ, ನಿನಗೊಂದು ಪತ್ರ!!

ದೀಪವು ನಿನ್ನಿಂದಲೇ ಗಾಳಿಯು ನಿನ್ನಿಂದಲೇ ಆರದಿರಲಿ ದೇವಾ ಎಂದು ನೂರು ನಂಬಿಕೆಂದ ಕೈಮುಗಿದು ಒಳ ಬಂದ ಯಾತ್ರಿಕರಿಗೆ ದೀಪವನ್ನು ಆರಿಸಿ ತಮಾಷೆ ನೋಡುವ ಬುದ್ದಿ ನಿನಗೆ ತರವೇ ದೇವರೆ? ತುಂಬು ನೋವುಗಳನ್ನು ಕೊಟ್ಟು ಅದಕ್ಕೆ ಪರಿಹಾರವನ್ನು ನೀನೇ ಕೊಟ್ಟು ಕಟ್ಟ ಕಡೆಯ ನಂಬಿಕೆ ಕಳಚಿ ಬೀಳುವ ಮೊದಲು ನಾನಿದ್ದೇನೆ ಎಂದು ಭರವಸೆ ಕೊಡುವ ನಾಟಕ ಏಕೆ ಬೇಕು? ಕಾಯುವ ನೀನೇ ಕೊಲ್ಲುವವನಾದರೆ ನಿನ್ನ ಮೇಲಿಟ್ಟಿರುವ ವಿಶ್ವಾಸ, ನಿಯತ್ತಿಗೆ ಬೆಲೆ ಏನು?!! ಬೇಡ ಬೇಡವೆಂದರೂ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಟ್ಟೆ. ಅದನ್ನೆಲ್ಲಾ ಜತನದಿಂದ ಕಾಪಾಡಿಕೊಂಡು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸತೊಡಗಿದ ಮರುಕ್ಷಣವೇ ನನ್ನಿಂದ ಅದನ್ನು ಕಿತ್ತುಕೊಳ್ಳತೊಡಗಿದೆ. ಸಂಕಟ ಬಂದಾಗ ವೆಂಕಟರಮಣ ಅಂತಾರೆ ಆದ್ರೆ ನಿನ್ನ ನಾನು ನೆನೆಯದೆ ಹೋದ ಕ್ಷಣ ಯಾವುದಿತ್ತು ಹೇಳು??? ಕಷ್ಟಗಳನ್ನು ಕೊಡುತ್ತಲೇ ಇದ್ದರೂ ನಿನ್ನನ್ನು ನಾನು ಎಂದಾದರೂ ದೂರಿದ್ದೇನಾ?? ನನ್ನ ಹಣೆಬರಹ ಎಂದು ಸುಮ್ಮನಿದ್ದೆ. ಗಾಯದ ಮೇಲೆ ಬರೆ ಎಳೆದಂತೆ ಪುನಹ ಪುನಹ ಅದೇ ನೋವುಗಳನ್ನು ಕೊಡುತ್ತಾ ಹೋದರೆ ಹೇಗೆ ತಾನೆ ಸವಿಸಲಿ??? ಇತ್ತೀಚೆಗೆ ನೀನು ಕೊಡುತ್ತಿರುವ ನೋವನ್ನು ಮಾತ್ರ ನನ್ನಿಂದ ಸವಿಸೋಕೆ ಸಾಧ್ಯವಾಗುತ್ತಿಲ್ಲ.. ನಿನಗೆ ಹರಸಿಕೊಂಡ ನೂರಾರು ಹರಕೆಯ ಫಲದಿಂದ ಹುಟ್ಟಿದವಳು ನಾನು. ಇಷ್ಟೆಲ್ಲಾ ನೋವು ಕೊಡುವ ನಿನಗೆ ನನ್ನ ಸ್ಠೃಸುವ ಹಕ್ಕು ಯಾರು ಕೊಟ್ರು? ನಿನ್ನ ಭಕ್ತರನ್ನು ಸಂತೋಷವಾಗಿಡುವ ಒಂದೇ ಒಂದು ಕಾರಣಕ್ಕೆ ಅಮಾಯಕಿ ನನನ್ನು ಈ ಭೂಮಿಗೆ ಉಡುಗೊರೆಯಾಗಿ ಕೊಡುವ ಅಗತ್ಯ ಇತ್ತಾ?? ಕಾಪಾಡೋಕೆ ಆಗದೆ ಇದ್ದ ಮೇಲೆ ಕಾಯುವ ಕೆಲಸವನ್ನು ಏಕೆ ಒಪ್ಪಿಕೊಂಡೆ!! ಆದರೂ ನಾನು ನಂಬಿರೊದು ನಿನ್ನನ್ನೇ. ಅದಕ್ಕೆ ಸಾಕ್ಷಿ ಈ ಪತ್ರ...!! ಎಲ್ಲೆಲ್ಲೊ ಜಾರುವ ಮನಸ್ಸು ಎಲ್ಲೆ ಇರುವ ಮುಂಚೆ ತಡೆಯುವ ನೈತಿಕತೆ ಇರಲಿಲ್ವಾ ನಿಂಗೆ? ದೂರದಿಂದ ತೇಲಿ ಬಂದ ಅವನು ಮನಸಿನ ಬೇಲಿ ದಾಟುವ ಮೊದಲೇ ತಡೆಯಬೇಕಿತ್ತು. ಈಗ ತಡೆದರೆ?? ನನ್ನ ಗೆಳೆಯರು ಹೇಳ್ತಾರೆ ನೀನೊಂದು ಕಲ್ಲುಬಂಡೆಯಂತೆ! ನಿನಗೆ ಮನಸ್ಸೇ ಇಲ್ವಂತೆ!! ಸುಳ್ಳು ಅವರೆಲ್ಲಾ ಸುಳ್ಳು ಹೇಳ್ತಾರೆ.. ಅಲ್ವಾ? ಇಲ್ಲಿಯತನಕ ನನಗೆ ಎಲ್ಲವೂ ನೀನೇ. ಅಪ್ಪ, ಅಮ್ಮ, ಗೆಳೆಯ, ಶುಭಕಾಂಕ್ಷಿ ಎಲ್ಲವೂ... ಪ್ರತಿದಿನದ ಘಟನೆಗಳನ್ನು ನಿನ್ನೆದುರು ಹಂಚಿಕೊಂಡು ಎಷ್ಟು ಸಲ ನಕ್ಕಿಲ್ಲ, ಎಷ್ಟು ಸಲ ಅತ್ತಿಲ್ಲ ನೀನು ಎಷ್ಟು ಸಲ ಧೈರ್ಯ ತುಂಬಿಲ್ಲ!! ಆದರೆ ಅವನನ್ನು ಪ್ರೀತಿಸೋ ವಿಷಯದಲ್ಲಿ ಟಿಪಿಕಲ್ ಇಂಡಿಯನ್ ಅಪ್ಪನ ತರಹ ಯಾಕಡ್ತಾ ಇದೀಯಾ?? ನಂಗೆ ಅವನಿಲ್ಲದೆ ಬದುಕೋಕೆ ಆಗಲ್ಲ ಪ್ಲೀಸ್ ಪ್ಲೀಸ್ ನಮ್ಮಿಬ್ಬರನ್ನು ದೂರ ಮಾಡ್ಬೇಡ. ಅವನು ಬಂದ ಅಂತ ನಾನು ನಿನ್ನನ್ನು ಆವಾಯ್ಡ್ ಮಾಡಲ್ಲ. ನನ್ನಾಣೆಗೂ!! ಅವನು ನನಗೆ ಬದುಕಾದರೆ ನೀನು ನನ್ನ ಜೀವ... ಅವನು ಉಸಿರಾದರೆ ನೀನು ಅದರಲ್ಲಿನ "ಡಿತ ಪೂಸಿ ಹೊಡಿತೀದಿನಿ ಅಂದ್ಕೋಬೇಡ ಇದು ನಿಜ. ಪ್ಲೀಸ್ ಅವನನ್ನು ನನ್ನ ಯಜಮಾನ ಆಗೋ ಹಾಗೇ ಮಾಡೋ .. ನಂಗೆ ಗೊತ್ತು ನಿಂಗೆ ಭಯ ನನ್ನ ಜೀವನದಲ್ಲಿ ಅವನು ಬಂದ್ರೆ ನಾನು ನಿನ್ನ ಮರೆತು ಬಿಡ್ತಿನಿಂತ ಭಯ ಅಲ್ವಾ? ನಿನ್ನ ಮರೆತ ಕ್ಷಣ ನಂಗೆ ಸಾವೇ ಬರ್ಲಿ ಅಂತ ಶಾಪ ಕೊಟ್ಟೆ ನ"ಬ್ರನ್ನ ಒಂದು ಮಾಡೋ.. ಅದು ನಿನ್ನಿಂದ ಮಾತ್ರ ಸಾಧ್ಯ.. ಹ್ಞೂಂ ನೀನು ಮಾಡೇ ಮಾಡ್ತೀಯಾ... ಇಲ್ಲಿ ತನಕ ಬದುಕೋ ಉತ್ಸಾಹ ಕೊಟ್ಟವನು ನೀನೇ ಬದುಕು ಕಸಿದುಕೊಳ್ಳಲ್ಲಾ ಅನ್ನೋ ಭರವಸೆ ಇದೆ... ಹುಸಿ ಮಾಡ್ಬೇಡ. ಲವ್ ಯು ಕಣೋ... ನಿನ್ನ ಜೀವ - ಸಿಂಚು

ಹೃದಯ ಹಿಂಡುತಿರುವ ಒಲವೇ
ಮೌನದಲ್ಲಿಯೇ ಮಾತಾಗಹೊರಟ ಹೃದಯದ ಹಿಡಿತಕ್ಕೆ ಮೌನದ ಯಾವ ಭಾವವು ಭಾಷೆಯಾಗದು ಅಂತ ಗೊತ್ತಿರಲಿಕ್ಕಿಲ್ಲ. ಸ್ನೇಹಿತನ ಸ್ನೇಹಿತನಾಗಿ ಪರಿಚಿತನಾದವನು ನೀನು. ನಾವಿಬ್ಬರೂ ಸ್ನೇಹಿತರಲ್ಲ ಆದರೂ ನಮ್ಮಿಬ್ಬರ ಸಂಬಂಧಕ್ಕೆ ಅರ್ಥ ಕೊಡಲು ನನ್ನಿಂದ ಆಗುತ್ತಿಲ್ಲ. ಅದು ಬರೀ ಆಕರ್ಷಣೆಯ? ಗೊತ್ತಿಲ್ಲ! ಪ್ರೀತಿ ಎಂಬ ರ್ಶೀಕೆ ಕೊಡಲಾ ಅದೂ ಗೊತ್ತಾಗ್ತಿಲ್ಲ! ಮನಸ್ಸು ನಿನ್ನ ಕಡೆ ವಾಲಬೇಡ, ಜಾಸ್ತಿ ಸಲುಗೆ ತಗೋಬೇಡ ಎಂದು ಆದಷ್ಟು ಬುದ್ಧಿವಾದ ಹೇಳುತ್ತಲೇ ಇರುತ್ತದೆ. ಎಲ್ಲಿಯ ತನಕ ನಾನು ಮನಸಿನ ಮಾತಿಗೆ ಬೆಲೆಕೊಡಲಿ ಹೇಳು? ನಿನ್ನ ಮಾದಕ ಧ್ವನಿ, ಮಗುವಿನಂತಹ ನಗುವಿನ ನಾದಕ್ಕೆ ಮನಸ್ಸು ಅಂಜುತ್ತಲೆ ವಾಲಿಬಿಡುತ್ತದೆ. ನನಗೆ ಗೊತ್ತು ಎನೋ ಒಂದು ಸೆಳೆತಕ್ಕೆ ಒಳಪಟ್ಟಿದ್ದೀನೆಂದು, ಅದಕ್ಕೆ ಸ್ಪಷ್ಟ ರೂಪು ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನೆಂದೂ ನನ್ನ ಜೊತೆ ಪ್ರೀತಿ-ಪ್ರೇಮ ಎಂದು ಮಾತಾಡಿಲ್ಲ. ಡೊಂಬರಾಟದ ಮಾತುಗಳು ನನಗಿಷ್ಟವಾಗಲ್ಲ. ಮತ್ತೇ ನಾನು ಏನೆಂದು ಅರ್ಥ ಕಲ್ಪಿಸಲಿ ನಮ್ಮಿಬ್ಬರ ಸಂಬಂಧಕ್ಕೆ???? ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇದನ್ನು ಅದರ ಸಾಲಿಗೆ ಸೇರುವಂತೆ ಮಾಡಬೇಡ. ಎಲ್ಲಾ ಏಕವಚನದ ಸಂಬೋಧನೆಗೆ ಕ್ಷಮೆ ಇರಲಿ. ಒಂದು ವೇಳೆ ನನ್ನ ಮನಸ್ಸು ಇದೆಲ್ಲವೂ ಪ್ರೀತಿ ಕಣೆ ಎಂದು ವಿವರಣೆ ಕೊಟ್ಟರೆ ಅದನ್ನು ನಾನು ಹೇಗೆ ಸ್ವೀಕರಿಸಲಿ? ಅದೂ ನನಗೆ ಗೊತ್ತಾಗ್ತಾ ಇಲ್ಲ. ಅಷ್ಟಕ್ಕೂ ಜಾತಿ ಎಂಬ ಪಿಡುಗು ಒಂದಿಲ್ಲ ಅಂದಿದ್ದರೆ ನಿನ್ನನ್ನು ಇಷ್ಟ ಪಡದೆ ಇರಲು ಕಾರಣಗಳೇ ಇಲ್ಲ. ನಿನ್ನ ಮನಸಿನ ಹೋಯ್ದಾಟವು ನಂಗರ್ಥವಾಗೊತ್ತೆ. ಕೆಲವು ಹುಡುಗಿಯರಲ್ಲಿ ತಮಾಷೆಗಾಗಿ `ನೀನು ನನ್ ಲವರ್ ಕಣೆ' ಎಂದು ರೇಗಿಸುತ್ತಿದ್ದ ಚಂಚಲ ಮನಸಿನ ಒಡೆಯ ನೀನು. ಅಂತಹ ಚಂಚಲತೆಗೆ ಚಂಚಲವೆನಿಸುವ ಸಮ್ಮೋಹಿನಿ ನನ್ನ ರೂಪದಲ್ಲಿ ನಿನ್ನನ್ನು ಹಿಡಿಹಿಡಿಯಾಗಿ ಆವರಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆಚ್ಚಿ ಬಿದ್ದು `ನನ್ನ ಮನಸ್ಸು ಬ್ಲಾಂಕ್ ಆಗಿದೆ ಕಣೆ' ಎಂಬ ಮೆಸೆಜ್ ಕಳಿಸ್ತೀಯಲ್ಲ! ಅದಕ್ಕೆ ನಗಬೇಕೋ, ಅಳಬೇಕೋ? ನಿನಗೆ ಮನಸು ಮಾತ್ರ ಬ್ಲಾಂಕ್ ಆಗೊತ್ತೆ. ನನಗೆ ಜೀವನವೇ ಬ್ಲಾಂಕ್ ಆಗೋತ್ತೇನೋ ಎಂಬ ಭೀತಿ ಸದ್ದಿಲ್ಲದೆ ಮನದಲ್ಲಿ ಪ್ರತಿಷ್ಠಾಪನೆಗೊಂಡು ರಾಜ್ಯಭಾರ ಮಾಡುತ್ತಿದೆ. ಜಗತ್ತಿನ ಎಂಟನೇ ಅದ್ಭುತಗಳಲ್ಲೊಂದು ನೀನು ನನ್ನ ಮೇಲೆ ಇಷ್ಟೊಂದು ಕಾಳಜಿ ವಹಿಸ್ತಿರೋದು. ಸಾಧಾರಣಕ್ಕೆ ಸಾಧಾರಣ ಎನ್ನುವ ರೂಪ, ವ್ಯಕ್ತಿತ್ವದವಳನ್ನು "ಹಿಂದು ಮುಂದು ತಿಳಿಯದೆ ಅಸಾಧಾರಣವಾಗಿ ನಂಬಿದ್ಯಲ್ಲಾ ಅದು ಹೇಗೆ ಸಾಧ್ಯವಾತು? ನಿನಗೆ ಬಿಂದಾಸ್ ಆಗಿ ಇರಲು ಬರೊತ್ತೆ. ನನಗೆ ನೋವಲ್ಲೂ ಚೆಂದವಾಗಿ ನಗಲು ಬರೊತ್ತೆ. ಹಾಗಂತ ನಗುವೆಲ್ಲಾ ನೋವಾದರೆ? ಎಷ್ಟು ದಿನ ನನ್ನ ಚೆಂದದ ನಗುವಿಗೆ ಕೃತಕತೆಯ ಬಣ್ಣ ಬಳಿದುಕೊಂಡಿರಲು ಸಾಧ್ಯ. ಆದರೂ ನನ್ನೆಲ್ಲಾ ನೋವುಗಳ ನಡುವೆ ತುಟಿಯ "ಹಿಂದಿನ ತುಂಟ ನಗುವಿಗೆ ನಿನ್ನ ನೆನಪು ಕೆಲವು ದಿನಗಳ ಮಟ್ಟಿಗಾದರೂ ಸಾಥ್ ಕೊಡ್ತಲ್ಲಾ ಅದು ಸಾಕು. ಮಂಜಿನ ಬಿಂದು ಕಣ್ಣಿನ ಕಡಲಿಂದ ಜಾರಿ ಕೆನ್ನೆಯನ್ನು ತೋಸುತ್ತಿದ್ದರೂ ತುಟಿಯಲ್ಲಿ ಸ್ನಿಗ್ಧ ನಗು ಮಾಸದೆ ಉಳಿಯುತ್ತಲ್ಲ ಅದು ದೇವರು ಸ್ಪೆಶಲ್ ಆಗಿ ನನಗೆ ಕೊಟ್ಟ ವರ. ಅದನ್ನೂ ಕಸಿದುಕೊಳ್ಳಲು ಎಂಥಹ ಕ್ಷುದ್ರ ಶಕ್ತಿಗಳಿಗೂ ಅಸಾಧ್ಯ. ಹಾಗಾಗಿ ಯಾತನೆಯಲ್ಲೂ ಮುಗುಳ್ನಗುವ ಪುಟ್ಟ ಹುಡುಗಿ ನಾನು. ನೀನಿಟ್ಟ ಒಲವು ಒಡಲನ್ನು ಸುಡುವಂತಾದರೆ ಪುಟಾಣಿ ಮನಸು ಅದನ್ನು ಹೇಗೆ ಸಹಿಸೊತ್ತೊ!! ನನಗಂತೂ ತಿಳಿಯದು. ತಿಳಿದು ತಿಳಿದೂ ಯಾಕೆ ಸಮುದ್ರದಲ್ಲಿ ಕೈ ಹಿಡಿದು ಈಜಿಸುವ ಸಾಹಸ ಮಾಡುತ್ತಿರುವೆ? ಬದುಕಿ ದಡ ಸೇರುತ್ತೇವೆಂಬ ಭರವಸೆಗೆ ನೀನು ನಂಬಿರುವ ಎಲ್ಲಾ ದೇವರುಗಳು ಆಶೀರ್ವದಿಸುತ್ತಾರೊ ಕಾದು ನೋಡಬೇಕು.
ಕಳೆದು ಹೋಗುವ ಭೀತಿಯಲ್ಲಿ - ಸಿಂಚು


ಹೇ ಓಮನ್‌ನ ಗೆಳೆಯ,
ಮಾಘ ಮಾಸದಲ್ಲಿ ಭೂರಮೆಯನ್ನು ಮುಂಜಾವಲ್ಲಿ ಮೊದಲು ಚುಂಬಿಸಿದ ಇಬ್ಬನಿಗೆ ಹೇಗೆ ಧನ್ಯತಾ ಭಾವವಿರೊತ್ತೊ ಹಾಗೆ ಭೂದೇವಿಯ ಮನಸಿನ ಮುಕುಟದಲ್ಲಿ ಆ ಹನಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತದೆ ಅದರಂತೆ ನೀನು ಮೊದಲ ಗೆಳೆಯನೆಂದು ಪರಿಚಿತವಾಗಿ ನನ್ನ ಮನಸಿನರಮನೆಯಲ್ಲಿ ಅಚ್ಚಳಿಯದ ಗುರುತಾಗಿ ಉಳಿದುಬಿಟ್ಟೆ ಕಣೋ. ಬಂಧನದ ಅನುಬಂಧ ನಮ್ಮಲಿಲ್ಲದಿದ್ದರೂ ಒಂಥರಾ ಬಂಧುವಾಗಿ ಬಿಟ್ಟಿದ್ದೆ ನೀನು. ದಿಟ್ಟ ಮನಸ್ಸಿನ ಹುಡುಗಿಯಾದರೂ ನೀನು ರೇಗಿಸಲೆಂದು ಹೇಳುವ ಪ್ರತಿ ಚಿಕ್ಕ ಮಾತುಗಳು ಮನಸ್ಸಿನಾಳಕ್ಕೆ ಹೊಕ್ಕು ಹೃದಯವನ್ನು ಗಿಲ್ಲುತ್ತದೆ ನೋಡು ಅವಾಗ ಆಗುವ ನೋವಿನ ಯಾತನೆ ಬೇಡವೇ ಬೇಡ. ನಾವಿಬ್ಬರೂ ಪೋನ್‌ನಲ್ಲಿ ಮತ್ತು ನೆಟ್‌ನಲ್ಲಿ ಸಂಪರ್ಕಿಸಿದ್ದು ಬಿಟ್ಟರೆ ಅಪರಿಚತರೆ. ನನ್ನ ಪುಟ್ಟದಾದ ಹೃದಯದಲ್ಲಿ ಮೋಡಗಳ "ಹಿಂಡಂತೆ ಸ್ನೇಹಿತರಿದ್ದರೂ ಆ ಮೋಡಗಳ ನಡುವೆ ಮಿನುಗುವ ಕಾಮನಬಿಲ್ಲಂತೆ ನೀ ನಗುತಿರುವೆ. ನಿನಗೂ ಗೊತ್ತು ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ ತೆಗೆಯುವವಳು ನಾನಲ್ಲವೆಂದು. ಆದರೂ ನಿನ್ನೊಂದಿಗೆ ಜಗಳ ಆಡಲೇಬೇಕು ಎಂದು ಜಾತಕಪಕ್ಷಿಯಂತೆ ಕಾಯುತ್ತಿರುವ ನನಗೆ ಆ ಚಿಕ್ಕ ವಿಷಯಗಳೇ ಸಾಕಾಗುತ್ತೆ. ಬೇರೆ ಹುಡುಗಿಯರೊಂದಿಗೆ ನೀನು ಮನಬಿಚ್ಚಿ ಮಾತನಾಡುವಾಗ ನನ್ನ ಮನಸಿನ ಕಿಚ್ಚು ಒಳಗಿನಿಂದಲೇ ಹುಟ್ಟಿ ಅಲ್ಲಿಯೇ ಬೂದಿಯಾಗುತ್ತದೆ. ಅದರ ಅಸಹನೆಯನ್ನು ತೋರ್ಪಡಿಸಲು ಆಗದೆ ಮನ ಹಿಡುಕಿನಿಂದಲೆ ಚಡಪಡಿಸೊತ್ತೆ. ಮತ್ತು ನೀನೆಂಬ ಮಾಯವಿ ಗೆಳೆಯನಿಗೆ ಮುದ್ದಾಗಿ ರೇಗುತ್ತದೆ. ನಿನ್ನ ಗೋಗರೆತ ಅಪ್ಯಾಯಮಾನವಾದರೂ ಎಲ್ಲಿ ನೀನು ನನ್ನಿಂದ ಮರೆಯಾಗಿ ಹೋಗುತ್ತೀಯೋ ಎನ್ನುವ ಅಳುಕಿನಿಂದಲೇ ನಿನ್ನೊಂದಿಗೆ ಪುನಹ ಮಾತನಾಡುತ್ತೇನೆ ತುಂಬು ಮನಸ್ಸಿನಿಂದಲೇ. ಇಷ್ಟೆಲ್ಲಾ ಮನದಲ್ಲಿ ಆರಾಧನೆ ಇಟ್ಟುಕೊಂಡ ಮೇಲೆ ನಿನ್ನ ಮೇಲೆ ಪ್ರೀತಿ ಹುಟ್ಟಿರಬೇಕು ಎಂದು ಕಲ್ಪಿಸಿಕೊಂಡರೆ ಅದನ್ನು ಈಗಲೇ ಮನಸಿನಿಂದ ಅಳಿಸಿಬಿಡು. ಸೀಮಿತ ವ್ಯಾಪ್ತಿಯ ಪ್ರೀತಿಯ ಪರಿಧಿಗಿಂತ ಮಿಗಿಲಾದ ಸ್ನೇಹದ ಬಾಂಧವ್ಯದಲ್ಲಿ ಬದುಕು ಅಜೇಯ. ಮೊನ್ನೆ ನಡೆದ ಘಟನೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಗೆಳೆಯ. ನಾನಿರುವ ಪುಣ್ಯಭೂಮಿಯಲ್ಲಿ ಸಂಬಂಧಗಳನ್ನು ಅಪವಿತ್ರಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪವಿತ್ರತೆಯಲ್ಲಿಯೇ ಹುಟ್ಟಿ, ಉತ್ತಮ ಸ್ತರದ ಸಂಸಾರದಲ್ಲಿ ಜನಿಸಿದ ನಾನು ಕೀಳುಮಟ್ಟದಿಂದ ಯೋಚನೆ ಮಾಡುತ್ತೇನೆಂದು ನಿನಗನ್ನಿಸಿದ್ದು ಬರೆ ಎಳೆದಂತಾತು. ಅದಕ್ಕಾಗಿಯೇ ಆ ಜಗಳ, ಮುನಿಸು.. ನಿನ್ನ ಗೋಗರೆತ.. ನನ್ನ ಒಲವು ತುಂಬಿದ ತಾತ್ಸಾರದ ನಾಟಕ! ಮಾತನಾಡುವ ಹಂಬಲಿಕೆಯೊಂದಿಗೆ ಫೋನ್ ಮಾಡೋಣವೆಂದರೆ ಎಂಥದೋ ಒಂದು ಬಿಗುಮಾನ. ಈ ಮನನೋಸುವ ಕೆಲಸ ಬೇಡವೇ ಬೇಡ ಎಂದು ತೀರ್ಮಾನಿಸಿಯಾಗಿದೆ. ಮೊದಲಿದ್ದ ಹಾಗೆಯೇ ಮುಗ್ಧತೆಯಲ್ಲಿಯೇ ಬದುಕುವ ಹಪಾಹಪಿ ಆಳವಾಗಿ ಬೇರುಬಿಟ್ಟಿದೆ. ಕಾಯುವ ಕನಸುಗಳೇ ಕಾಡುವ ನೆನಪಾದರೆ ವ್ಯಥೆಯ ಕಾದಂಬರಿಗೆ ಕೊನೆಯೆಲ್ಲಿ! ಅದಕ್ಕಾಗಿ ಮುನ್ನುಡಿಯಂತೆ ಕೊನೆಯನ್ನು ಸುಖಾಂತ್ಯಗೊಳಿಸುವುದಕ್ಕಾಗಿಯೇ ಬಾಲಿಶ ಮನದ ಹುಡುಗಿಯಾಗಿಯೇ ನೀನೆಂಬ ಮಾಮರದಲ್ಲಿ ಕೋಗಿಲೆಯಾಗುತ್ತೇನೆ. ನನ್ನೆಲ್ಲಾ ಹುಡುಗಾಟಿಕೆ, ತುಂಟಾಟಗಳು ಜಾಸ್ತಿ ಎನಿಸಿದ್ದರೆ ಕ್ಷಮಿಸಿ ಬಿಡೋ ಒಮ್ಮೆ ನನ್ನ ಹಾಗೇ ಸುಮ್ಮನೆ. ನಿನ್ನ ಸ್ನೇಹದೊಡತಿ ಚೋಮ

ಕೋಲಾಜ್... ಬದುಕಿನ ಬಿಡಿ ... ಬಿಡಿ... ಚಿತ್ರಣ
ಕೆಲವರು ಅಜಾತ ಶತ್ರುಗಳಿರ್ತಾರೆ. ಎದುರುಗಡೆ ಸಭ್ಯಸ್ಥವಾದ ಮಂದಹಾಸವನ್ನು ಸೂಸುತ್ತಲೇ ಮಟ್ಟಸವಾದ ವ್ಯಕ್ತಿತ್ವ ಎಂದು ಭಾಸವಾಗುವಂತೆ ನಾಟಕೀಯವಾಗಿ ಬದುಕುವವರು ಅವರು. ವಿದ್ಯೆ ಇರುತ್ತದೆ, ತಾನೂ ಮಾಡಿದ್ದು ತಪ್ಪು ಎಂಬ ಭಾವನೆಯೂ ಮನದಲ್ಲಿರುತ್ತದೆ ಅದೆಲ್ಲವೂ ತಿಳಿದು ಹೇಸಿಗೆಯಲ್ಲಿ ಬೀಳಲು ತಯಾರಾಗಿರುವ ಮೂರ್ಖತನಕ್ಕೂ ಅವರು ಸೈ. ಅವರ ನಡುವೆ ಬಾಳುತ್ತಾರಲ್ಲ ನಿಜವಾದ ಸಭ್ಯಸ್ಥರೂ ಅವರಿಗೂ ಇದರಿಂದ ಕಿರಿಕಿರಿ ಆದರೂ ತಡೆದುಕೊಳ್ಳದೇ ವಿಧಿಲ್ಲದ ಪರಿಸ್ಥಿತಿ. ಮೊನ್ನೆ ಗೆಳತಿ ವಿದ್ಯಾಳನ್ನು ಭೇಟಿಯಾಗಲೆಂದು ಅಪರೂಪಕ್ಕೆ ಅವಳ ಹಾಸ್ಟೆಲ್ ಕಡೆ ಹೋದೆ. ವಿದ್ಯಾ ಯಾಕೋ ಎಂದಿನಂತಿರದೇ ಸಪ್ಪಗಿದ್ದಳು. ಆಶ್ಚರ್ಯವಾತು. ಎಂತಹ ಪರಿಸ್ಥಿತಿಯಲ್ಲೂ ದೃತಿಗೆಡದ ವ್ಯಕ್ತಿತ್ವ ಆ ಹುಡುಗಿಯದು. ಏನಾಯ್ತೇ ಎಂದು ಕೇಳಿದ್ದೆ ತಡ ಬೋರೆಂದು ಅತ್ತು ಬಿಟ್ಟಳು. ಅವಳ ಪಾಡಿಗೆ ಅವಳನ್ನು ಅಳಲು ಬಿಟ್ಟುಬಿಟ್ಟೆ. ಸ್ವಲ್ಪ ಹೊತ್ತಿಗೆ ಅವಳು ಸರಿಹೋದಳು. ದುಗುಡದ ಕಾರಣ ಕೇಳಿ ನನಗೂ ಖೇದವಾತು. ಹಳ್ಳಿಂದ ಬಂದ ಮುಗ್ದತೆಯ ಹುಡುಗಿ ವಿದ್ಯಾ. ಸ್ನೇಹ ಅಂದರೆ ಸ್ವಚ್ಛ ಹಾಲಿನಷ್ಟೇ ಪರಿಶುದ್ಧ ಎಂಬಂತೆ ಸ್ನೇಹವನ್ನು ಆರಾಧಿಸುತ್ತಿದ್ದಳು. ಆಕೆಯ ಆಫೀಸ್‌ನ ಗೆಳತಿಯೊಬ್ಬಳು ವಿದ್ಯಾಳ ಎದುರಿಗೆ ಅಕ್ಕನಂತೆ ವರ್ತಿಸಿ, ಅವಳನ್ನು ತನ್ನ ತಂಗಿಯಂತೆ ಎಂದೇ ಎಲ್ಲರ ಮುಂದೆ ಪರಿಚುಸುತ್ತಿದ್ದಳು. ಪಾಪ! ಹುಡುಗಿ ಮೊದಲೆ ಮುಗ್ಧೆ ಯಾವಗಲೂ ಗೆಳತಿಯ ಗುಣವನ್ನು ಹಾಡಿಹೊಗಳುತ್ತಿದ್ದಳು. ಆ ಗೆಳತಿ ಸ್ವಲ್ಪ ದಿನಕ್ಕೆ ತನ್ನ ವರಸೆ ತೋರಿಸಿಯೇ ಬಿಟ್ಟಳು. ವಿದ್ಯಾಳ ಬಾಸ್‌ಗೆ ಹೋಗಿ ವೃಥಾಪವಾದವನ್ನು ಮಾಡತೊಡಗಿದ್ದಳು. ಇವಳ ಜೊತೆ ಮಾತ್ರ ಅದೇ ಹಿಂದಿನ ಸಲುಗೆ ತೋರಿಕೆಯ ಪ್ರೀತಿ, ಮಮತೆ ಎಂಬ ನಾಟಕವನ್ನು ಆಡುತ್ತಲೇ ಇದ್ದಳು. ಮೊನ್ನೆಯ ದಿನ ಅವಳ ಬಾಸ್ ಅವಳನ್ನು ಕರೆದು ನಾಳೆಂದ ಆಫೀಸ್‌ಗೆ ಬರಬೇಡ. ನೀನು ಆಫೀಸ್‌ನ ರೂಲ್ಸ್‌ನ್ನು ಹಾಳುಗೆಡವಿದ್ದೀಯಾ, ನಿನ್ನ ಗೆಳತಿಯೇ ನಿಮ್ಮ ಬಗ್ಗೆ ಇಷ್ಟೆಲ್ಲಾ ಅಂದ ಮೇಲೆ ಅದೆಷ್ಟು ಹದಗೆಟ್ಟಿರಬೇಕು ವ್ಯವಸ್ಥೆ ಎಂದು ಅಬ್ಬರಿಸಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅಳುತ್ತಲೇ ಬಂದಿದ್ದಳು. ಅವಳಿಗೆ ಸ್ವಲ್ಪ ಸಮಾಧಾನದ ಮಾತನಾಡಿ ಮೇಲೆದ್ದೆ. ಬೆನ್ನಿಗೆ ಚೂರಿ ಹಾಕೋ ಬುದ್ದಿ ಎಂದರೆ ಇದೇನಾ? ಅನ್ನಿಸ್ತು. ನನ್ನ ಗೆಳತಿಯರನ್ನು ಆ ಮೂರ್ಖ ಹೆಂಗಸಿನೊಂದಿಗೆ ತುಲನೆ ಮಾಡಿ ನೋಡಿದೆ. ಯಾರೂ ಅಂಥವರೂ ಗೋಚರವಾಗದೆ ಹೋದರೂ ಮನದಾಳದಲ್ಲಿರುವ ಗೋಸುಂಬೆ ಬುದ್ಧಿಯನ್ನು ಕಂಡುಹಿಡಿಯುವುದೆಂದು. ನಿಮ್ಮ ಗೆಳತಿಯರಲ್ಲಿ ಅನಾವಶ್ಯಕವಾದ ವಿಷಯವನ್ನು ಎಂದಿಗೂ ಹೇಳದಿರಿ. ವೈಯಕ್ತಿಕ ವಿಷಯಗಳನ್ನು ಎಂದೂ ಅವರ ಮುಂದೆ ತೆರೆದಿಡಬೇಡಿ. ಅದು ನಿಮ್ಮ ಯಶಸ್ಸಿನ ಹಾದಿಯಲ್ಲಿ ಚುಚ್ಚುವ ಗಾಜಿನ ಚೂರಾದಿತು ಜೋಕೆ!!
ಪ್ರೀತಿಂದ ಸೌಮ್ಯ ಹೆಬ್ರಿ

ಹೃದಯ ಗೆದ್ದ ಗೆಳೆಯ,
ಬೇಡವೆಂದರೂ ಗೆಳೆತನಕ್ಕೆ ಹಾತೊರೆಯುವ ಹುಡುಗ ಹುಡುಗಿಯರನ್ನೇ ನೋಡಿದ ನನಗೆ, ನಿನ್ನ ನೋಡಿದ ಮೊದಲ ಸಲವೇ ಎದೆಯಲ್ಲಿ ಏನೋ ಒಂಥರಾ ಅನುಭವ. ಆದರೆ ಹುಡುಗ! ನೀನು ನನ್ನ ಅವಾಯ್ಡ್ ಮಾಡ್ತಿಯಲ್ಲಾ ಅದು ಅತ್ಯಂತ ಯಾತನಾಭರಿತವಾದ ಶೋಕಗೀತೆಯಾಗಿದೆ ನನ್ನ ಪಾಲಿಗೆ. ನಾನು ನಿನ್ನನ್ನು ಭೇಟಿಯಾಗಬೇಕೆಂದು ಬಯಸಿದವಳೇ ಅಲ್ಲ. ನಿನ್ನ ಹಠಕ್ಕೋಸ್ಕರವೇ ಭೇಟಿಯಾದೆ. ಭೇಟಿಯಾದ ಮೊದಲ ಸಲವೇ ನೀನು ನನಗೆ ಇಷ್ಟವಾಗಿ ಬಿಟ್ಟೆ. ಅರಳು ಹುರಿದಂತೆ ಮಾತನಾಡುವ ನನ್ನ ವಾಖ್‌ಚಾತುರ್ಯಕ್ಕೆ ನಿನ್ನದು ನಗುವೊಂದೇ ಉತ್ತರವಾಗಿತ್ತಲ್ಲ. ಅದೇ ಕಣೋ ನನ್ನ ಸೆಳೆದ ಮೊದಲ ಅಂಶ. ನಮ್ಮಬ್ಬರ ಭಾವಗಳು ತದ್ವಿರುದ್ಧ ಆದರೆ ಅಂದಿನ ದಿನ ಎಂದೂ ಆಗಿರದಂತಹ ಅನುಭೂತಿಯ ಕಂಪನ ಒಡಲಾಳದಿಂದ ಹಿಡಿದು ನರನಾಡಿಗಳಲ್ಲಿ ಪಸರಿಸಿತ್ತು. ಅಂದಿನಿಂದ ನಾನು ಕಳೆದುಕೊಂಡ ರಾತ್ರಿಯ ನಿದ್ರೆಗಳೆಷ್ಟೋ, ನಡುವೆಯೇ `ಕುಛ್ ಕುಛ್ ಹೋತಾ ಹೈ' ಎಂದು ನೀರವ ಮೌನದಲ್ಲಿ ಮನಸ್ಸಿನೊಂದಿಗೆ ಪಿಸುಗುಡುತ್ತಿದ್ದಿದ್ದು ಎಷ್ಟು ಬಾರಿಯೋ. ರಾತ್ರಿಯ ಜೀರುಂಡೆ ನಾದಕ್ಕೆ ನನ್ನ ಪಿಸುನುಡಿ ಕರಗಿಹೋಗುತ್ತಿತ್ತಲ್ಲ ಹಾಗೇಯೇ ನೀನು ನನ್ನ ಬಾಳಸಂಗಾತಿ ಆಗುವ ನನ್ನ ಭರವಸೆಗಳೂ ಕರಗುತ್ತಿದ್ದವು ಗೆಳೆಯ. ನೀನು ಎಲ್ಲೆ ಇರು ಹೇಗೆ ಇರು ಸುಖವಾಗಿರು ಎಂದು ಮಾತ್ರ ಆಶಿಸುತ್ತೇನೆ ಅದಕ್ಕೋಸ್ಕರ ನಿನ್ನ ನೆನಪಿಸಿಕೊಂಡು ಒಂದು ದಿನವೂ ನಾನು ಅತ್ತಿಲ್ಲ ಕಣೋ. ಹೆಣ್ಣಿನ ಕಣ್ಣೀರಿಗಿಂತ ದೊಡ್ಡ ಶಾಪ ಮತ್ತೊಂದಿಲ್ಲ ಎಂದು ನಂಬಿದವಳು ನಾನು. ನನ್ನ ಇನಿಯನಿಗೆ ನನ್ನ ಕಣ್ಣೀರು ಶಾಪವಾಗಬಾರದೆಂದು ದುಃಖವನ್ನು ನುಂಗಿ ನೀರು ಕುಡಿದು ಮಲಗಿಬಿಡುತ್ತೇನೆ ಕಣೋ. ನನ್ನ ನಿರಾಸೆ ನನ್ನ ಪಾಲಿಗೆ ಉಳಿದುಬಿಡಲಿ ನಿನ್ನ ತನಕ ಬಾರದೇ ಇರಲಿ. ನಾನು ತಾಲ್ಲದ ತಬ್ಬಲಿ ಸ್ವಲ್ಪ ದಿನದ ಮಟ್ಟಿಗೆ ನೀನು ನನ್ನ ಪಾಲಿಗೆ ತಾಯ ಸ್ಥಾನದಲ್ಲಿದ್ದೆ. ನನ್ನ ಕೆಲವು ಗುಣಗಳನ್ನು ತಿದ್ದಿ ತೀಡಿ ಒಂದು ಸ್ಪಷ್ಟ ರೂಪ ಕೊಟ್ಟೆ. ನವಿಲಂತೆ ಕುಣಿಯುತ್ತಿದ್ದ, ಮಳೆಯಲ್ಲಿ ನೆಂದ ನೈದಿಲೆಯಾಗುತ್ತಿದ್ದ, ಹಕ್ಕಿಗಳಂತೆ ಸ್ವಚ್ಛಂದವಾಗಿ ನನ್ನದೇ ಆದ ಪ್ರಪಂಚದಲ್ಲಿ "ಹರಿಸುತ್ತಿದ್ದ ನನ್ನನ್ನು ನೀನು ಬಂದು ಸ್ತಬ್ಧ ಮಾಡಿದೆಯಲ್ಲ. ಈಗ ಈ ಹುಡುಗಿ ಕೀ ಕೊಟ್ಟ ಬೊಂಬೆಯಂತೆ ಕಣೋ. ನಮ್ಮಿಬ್ಬರ ಪ್ರೇಮವನ್ನು ಮೊನ್ನೆ ತಾನೇ ನಮ್ಮ ಮನೆಯ ಹಿತ್ತಲಿನಲ್ಲಿ ಸಮಾಧಿ ಮಾಡಿದ್ದೇನೆ. ಅದರ ಭಾವಚಿತ್ರವನ್ನು ನನ್ನ ರೂಮಿನಲ್ಲಿಟ್ಟು ನಮ್ಮಿಬ್ಬರ ಒಡನಾಟ ನೆನಪಾದಾಗ ನಿಟ್ಟುಸಿರಿಟ್ಟು ಆ ಭಾವಚಿತ್ರಕ್ಕೆ ಒಂದು ಮೊಳ ಮಲ್ಲಿಗೆ ಮುಡಿಸಿ ನಿರಮ್ಮಳ ಭಾವದಂತೆ ನಟಿಸುತ್ತೀನಿ. ಮೊನ್ನೆ ನಿನ್ನ ಎಂಗೇಜ್‌ಮೆಂಟ್‌ಗೆ ಬಂದಿದ್ದೆ. ಎದುರುಗಡೆ ಕುಳಿತುಕೊಳ್ಳೋಷ್ಟು ಚೈತನ್ಯ ನನ್ನಲ್ಲಿರಲಿಲ್ಲ. ಆದರೆ ನಿನ್ನ ಜೋಡಿ ಹಕ್ಕಿ ಮಾತ್ರ ನಿನಗೆ ಹೊಂದಿಕೆನೇ ಆಗ್ತಿರಲಿಲ್ಲಾ ಕಣೋ! ಬರೀ ಹಣಕ್ಕೋಸ್ಕರ ನನ್ನ ಪ್ರೀತಿಯನ್ನೇ ಕೊಂದವ ನೀನು, ಬರೀ ಹಣಕ್ಕೋಸ್ಕರ ಮಂಥರೆ ರೂಪದ ಹುಡುಗಿಗೆ ಬಾಳು ಕೊಡಲು ಹೊರಟವನು ನೀನು. ಅವಳನ್ನಾದರೂ ಹಣದಿಂದ ಅಳೆಯಬೇಡ. ಗುಣದಿಂದ ಅಳೆದು ಸಂಸಾರ ನಿಭಾಸು. ಅವಳ ಕಣ್ಣಿಂದ ಒಂದು ತೊಟ್ಟು ನೀರು ಬರದಂತೆ ನೋಡಿಕೋ ಏಕೆಂದರೆ ಹೆಣ್ಣಿನ ಕಣ್ಣೀರು ಸುಡುವ ಜ್ವಾಲೆಯಾದಿತು ಜೋಕೆ! ಎಂದೆಂದೂ ಸುಖವಾಗಿರು.
ಕೊರಡು ಹೃದಯದ ಮಾಜಿ ಗೆಳತಿ ಕೊಬ್ರಿ
- ಸೌಮ್ಯ...

Wednesday, December 31, 2008

"ನಾಡೋಜರಿವರು"











ನಾಲ್ವರು 'ನಾಡೋಜ'ರಿವರು. ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಪ್ರೊ. ಶ್ರೀನಿವಾಸ ಹಾವನೂರು, ಪ್ರೊ. ಕಮಲಾ ಹಂಪನಾ, ಪ್ರೊ.ಯು.ಆರ್.ಅನಂತಮೂರ್ತಿ. ಇನ್ನೊಬ್ಬ 'ನಾಡೋಜ' ಪ್ರೊ. ಎಲ್. ಬಸವರಾಜು ಅವರು ಅನುಪಸ್ಥಿತಿಯಲ್ಲಿ ನುಡಿಹಬ್ಬ ಕಾರ್ಯಕ್ರಮ ನಡೆಯಿತು. ಅವರು ಬಂದಿದ್ದರೆ ಇನ್ನು ಚೆಂದವಿರುತ್ತಿತ್ತು.

ನುಡಿ ಹಬ್ಬ 17
























































ನುಡಿ ಹಬ್ಬ ೧೭, ಕನ್ನಡ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಅವುಗಳಲ್ಲಿ ಕೆಲವು ನಾನು ಸೆರೆಹಿಡಿದ ಛಾಯಾಚಿತ್ರಗಳು.

Friday, October 31, 2008

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು

ಬಣ್ಣದ ಟಿವಿ

"ಲೇ ನಾಗೇಶ! ನಿಮ್ಮ ಮನೆಗೆ ಬಣ್ಣದ ಟಿವಿ". ತಂದಿಯೇನ್ಲೆ" ಅಂತ ಗೆಳೆಯ ರಘುಪತಿ ಕೇಳಿದಾಗ ಎದೇನ ಸೆಟೆದು "ಇಂದು ತರಬೇಕ್ಲೆ" ಅಂತ ಹೇಳೋ ಸೋಗು ಮಾತು ನೋಡಿದ್ರೆ ಅವು ನೆಲದ ಮೇಲೆ ಕಾಲಿಡುತ್ತಿಲ್ಲ ಅನ್ನೋದು ಆ ಓಣಿಯವರಿಗೆಲ್ಲ ಗೊತ್ತಿತ್ತು. ನಾಗೇಶನ ಅಪ್ಪ ಇದು ನನ್ನ ಜೀವನದ ಕೊನೆ ಆಸೆಯೋ ಏನೋ, ಸಾಯೋ ಟೈ"ಗೆ ಎರಡು ಹನಿ ನೀರು ಹಾಕೋ ಬದಲು ನನಗೆ ಬಣ್ಣದ ಟಿವಿ". ತಗಂಬಾ ಅಂತಂದಗಿತ್ತು. ನಾಗೇಶನ ಅಪ್ಪ ದಿನಕ್ಕೆ ಒಂದು ಸಾರಿಯಾದರೂ ಬಣ್ಣದ ಟಿವಿ". ತಗಂಬಾ ಅಂತ ಹೇಳದೇ ಇರದ ದಿನವೇ ಇರಲಿಲ್ಲ.
ಇನ್ನು ನಾಗೇಶನ ಪರಿಸ್ಥಿತಿ "ಚಿತ್ರ. ಅವನೊಬ್ಬ ಮೂಡಿ ಹುಡುಗ. ಅವನಿಗೆ ಅನಿಸಿದ್ದನ್ನು ಮಾಡುವವ. "ನಮಗೆ ನಿಲುಕಲಾರದ್ದು ಬಣ್ಣದ ಟಿವಿ". ಈಗ ನಾವು ಅದನ್ನು ತಗಣದು ಆಗಾದಿಲ್ಲ. ಇರೋ ನಮ್ಮ ಮುದ್ದು ಬ್ಲಾಕ್ ಅಂಡ್ ವೈಟ್ ಟಿವಿ".ನೇ ನೋಡೋಣ" ಅಂತ ಅನ್ನೋನು. ತಮ್ಮನ ಓದಿಗೆ ಬಣ್ಣದ ಟಿ.". ಅಡ್ಡಾಗುತ್ತೆ, ಅಪ್ಪನ ಕಣ್ಣು ಹಾಳಾಗುತ್ತೆ, "ಗೆ ಪ್ರತಿಯೊಂದನ್ನು ಮನೆಯ ಉಳಿತಾಯದ ಜೊತೆ ಲೆಕ್ಕ ಹಾಕೋನು ನಾಗೇಶ. ಪಾಪ ಅವರಪ್ಪನಿಗೆ ಮಾತ್ರ ನನ್ನ ಮಗನನ್ನು ಯಾರೋ ಏನೋ ಮಾಟ ಮಾಡಿಸಿಬಿಟ್ಟಿದ್ದಾರೆ. ಅವು ನನ್ನ ಮಾತಿಗೆ ಎಂದೂ ಇಲ್ಲ ಅಂದವನಲ್ಲ. ಇತ್ಲಾಗ ಅವನ್ಯಾಕೆ ಈಗಾಡ್ತಿದ್ದಾನೆ ಅಂತ ಅವರಪ್ಪ ದಿನವೂ ಮರುಗುತ್ತಿದ್ದ.
ಪಾಪ ಆ ಬ್ಲಾಕ್ ಅಂಡ್ ವೈಟ್ ಟಿವಿ". ಮಾತ್ರ ನಾಗೇಶನನ್ನು ಅತಿ ಪ್ರೀತಿಂದ ನೋಡೋದು. ಮನೆಯ ಉಳಿದವರೆಲ್ಲ ಅದರ "ವಿರೂಢಿಗಳೇ. ಆ ಮನೆಯಲ್ಲಿ ನಾಗೇಶ ಒಬ್ಬನೇ ಅದರ ಸಂರಕ್ಷಕ. "ಗೆ ಒಂದು ದಿನ ನಾಗೇಶನ ಅಪ್ಪ ಬಣ್ಣದ ಟಿವಿ". ತರೋ ಲಕ್ಷಣಗಳು ಕಾಣದಾಗ ಆ ಸಿಟ್ನಲ್ಲಿ ಟಿವಿ. ರಿಮೋಟನ್ನು ‌ ಮುರಿದುಹಾಕಿದ್ದ. ಆಗ್ಲಾದ್ರೂ ಮಗ ತಂದಾನೋ ಎಂದು. ಆದರೆ ಆ ಮುದ್ದು ಮುರುಕಲು ಬ್ಲಾಕ್ ಅಂಡ್ ವೈಟ್ ಟಿವಿಯನ್ನು ೧೫೦ ರೂ. ಕೊಟ್ಟು ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬಂದಿದ್ದಾತು.
ಇದರಿಂದ ರ್ರ್ಯಾಶ್ ಆದ ನಾಗೇಶ "ಅಪ್ಪಾ, ಮೊದಲೇ ನಿನಗೆ ಕಣ್ಣು ಸರಿಗಿಲ್ಲ, ಆಪರೇಷನ್ ಮಾಡ್ಸಬೇಕು, ಇನ್ನು ನೀನು ಬಣ್ಣದ ಟಿವಿ". ನೋಡ್‌ಬೇಕೆಂಬ ಚಟ ಬೇರೆ. ಇಂತ ದೊಡ್ಡ ವಯಸ್ಸಲ್ಲಿ ಯಾರಾದ್ರೂ ಮಗ ತಂದೆಯನ್ನು ಪೀಡಿಸುತ್ತಾನೆ, ಆದರೆ ನೀನೇನಪ್ಪಾ ಮಗನನ್ನೇ ಪೀಡಿಸುತ್ತೀ" ಎಂದಾಗ, ನಾಗೇಶನ ಮುಖದಲ್ಲಿ ಅಸಹಾಯಕತೆ ಇತ್ತು. "ಓಗ್ಲೋ ಬಾಡ್ಕೋ ನನಗೆ ಹೇಳಾಕಾ ಬರುತ್ತೀಯ, ತಿರುಗು ಮಾತಾಡ್ತೀಯ, ಬಾ ನಮ್ಮ ಫ್ರೆಂಡ್ ಅಂಜಿನಪ್ಪನ ಮಗ ಇದಾನೆ. ಅವರಪ್ಪ ಕೇಳೋದೇ ಬೇಡ ಮನೆಗೆ ಟಿವಿ". ತಂದುಬಿಟ್ಟ. ಎಷ್ಟು ಚಂದ ಅಯ್ತೆ, "ರೋ ರಾಜಕುಮಾರ್ ಅದರಲ್ಲಿ ಹ್ಯಾಗೆ ಕಾಣುತ್ತಾನೆ ಗೊತ್ತಾ. ಥೇಟು ಟೆಂಟ್‌ನಾಗ ನೋಡಿದಹಾಗಾಗುತ್ತೆ. ನಮ್ಮದರಲ್ಲಿ ಕಾಣುತ್ತಾನೆ ಒಳ್ಳೆ ಕಪುಗೆ! ಇದು ಇಲ್ಲಿದ್ರೂ ಒಂದೇ ತಿಪ್ಪೇಲಿದ್ರೂ ಒಂದೇ. ಅವರ ಮನ್ಯಾಗ ಟಿವಿ". ನೋಡಿದ ಮ್ಯಾಲಂತೂ ನಾನು ನಿದ್ಧಾರ ಮಾಡೀನಿ. ಇನ್ನು ಮುಂದೆ ನೋಡಿದ್ರೆ ಬಣ್ಣದ ಟಿವಿಯಲ್ಲೇ" ಎಂದು ಅಪ್ಪ ಕಿಡಿಕಾರಿದ. "ಇದೋ ನನ್ನ ಪ್ರೆಂಡ್ ಮನೆಗೇ ಹೊಂಟಿದೀನಿ. ಇವತ್ತು ರಾಜ್‌ಕುಮಾರ್ ಸಿನಿಮಾ ಐತೆ ಎಂದು ತನಗೂ ತನ್ನ ಮನೆಗೆ ಸಂಬಂಧವಿಲ್ಲವೇನೋ ಅನ್ನೋ ರೀತಿ ನಾಗೇಶನ ಅಪ್ಪ ಮನೆಂದ ಹೊರ ಹೊರಟ.
ಇತ್ಲಾಗ ಏನೋ ನನ್ನ ಮನೆಯವರಿಗೆ ಒಳ್ಳೆಯದನ್ನು ಬಯಸೋದು ತಪ್ಪಾಗಿದೆ. ನಮ್ಮಪ್ಪ ನಾನು ಬಣ್ಣದ ಟಿವಿ ತರದೆ ಇದ್ದಿದ್ದಕ್ಕೆ ನನ್ನನ್ನು ವಿಲನ್ ರೀತಿ ನೋಡ್ತಾನೆ. ಅಂಗ್ ಲೆಕ್ಕ ಹಾಕಿದ್ರೆ ನಮ್ಮಮ್ಮನೆ ಎಷ್ಟೋ ವಾಸಿ. ತಂದಿದ್ದನ್ನು ಕುಚ್ ಆಕ್ತಾಳೆ. ಅದೇನೋ ಒಂದೊಂದು ಸಾರಿ ಮನಿ ತಗ, ಮುಂದೆ ನಿಮಗೆ ಒಂದು ಸೂರು ಆಗಲಿ, ಇರೋರು ಇಬ್ಬರು ಮಕ್ಳು. ಇಬ್ರಿಗೆ ಒಂದೊಂದು ಮನೆ ಇರಲಿ. ಮುಂದೆ ಬರೋ ಸೊಸೆಯವರು ನನ್ನ ಬೈಕಂಬಾರ್ದು. ನೀನು ಹೊಸ ಮನೆ ತಗ. ತಮ್ಮನಿಗೆ ಈ ಹಳೇಮನಿನೇ ಕೆಡ" ಹಾಕ್ಸಿದರಾಯ್ತು ಅಂತ ರಾಗ ತೆಗೀತಾಳೆ. ಅಮ್ಮನ ರಾಗ ತಡಕಬೌದು. ಆದರೆ ಅಪ್ಪಂದು ಅಬ್ಬಬ್ಬ! ನನಗೆ ತಡಕಣಕಾಗ್ತಿಲ್ಲ. ಎಲ್ಲಾದ್ರು ಬಡ್ಡಿ ಸಾಲ ಮಾಡಿಯಾದ್ರು ತಂದುಬಿಡ್ಲಾ ಅಂದಕಂಡಿದೀನಿ" ಅಂತ ನಾಗೇಶ ತನ್ನ ಫ್ರೆಂಡ್ ಅಂಬ್ರೇಶನ ಹತ್ತಿರ ಮನದ ಅಳಲನ್ನು ತೋಡಿಕೊಂಡ. 'ತಡಕಲೆ ಯಾಕಂಗ ಅರ್‍ಜೆಂಟ್ ಮಾಡ್ತೀ. ಈ ಸಾರಿ ಬಜೆಟ್‌ನಲ್ಲಿ ಟಿವಿ ರೇಟು ಕಡಿಮೆ ಮಾಡ್ತಾರಂತೆ. ನೋಡುವ, ನಾನೊಂದು ಸ್ವಲ್ಪ ಹಣ ಕೊಡ್ತೀನಿ. ನೀನೊಂದು ಸ್ವಲ್ಪ ಹಣ ಹಾಕಿ ತಂದುಬಿಡು ಅಂದಾಗ ನಾಗೇಶನ ಮನಸು ತಣ್ಣಗಾತು. ಅಬ್ಬ! ಇವತ್ತು ನಾನೇನೋ ಸ್ವಲ್ವ ತಣ್ಣಗೆ ನಿದ್ರೆ ಮಾಡಬೌದು ಅಂತಂದಕ್ಕಂಡ.
"ಅಪ್ಪ ನೋಡು ಟಿವಿ ತಂದಿದ್ದೀನಿ, ಅದೇನೋ ನೋಡುತೀ ನೋಡು. ನೀನು ಬಣ್ಣದ ಟಿವಿಯನ್ನು ನೋಡಬೇಕಂತ ಅವರಿವರ ಮನೆಗೆ ಹೋಗಬ್ಯಾಡ. ನನಗೆ ಅದಿಷ್ಟಾಗಲ್ಲ. ಮನೆಗೆ ತಂದ ಟಿವಿಯ ಪ್ಯಾಕ್ ತರಾತುರಿಯಲ್ಲಿ ಒಡೆದು ಇನ್ನೇನು ಎಲ್ಲ ಸೆಟ್ ಮಾಡಿ 'ಅಪ್ಪ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು ಅಂದಾಗ' ನಾನು ಮಾಡಲ್ಲ ನೀನೇ ಮಾಡು ಅಂತ ಅಪ್ಪ ಹೇಳಿದ. "ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು, ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು... ಒತ್ತು... ಒತ್ತು..." ಲೇ ನಾಗೇಶ ಏನು ಕನವರಿಸ್ತಿದಿ, ಎದ್ದೇಳು ಬೆಳಕರಿತು. ಅದೇನು ಅರ್ಧ ಗಂಟೆಂದ ಸ್ಟಾರ್‍ಟ್ ಮಾಡು... ಬಟನ್ ಒತ್ತು... ಅಂತಿದೀಯ ಎಂದು ಅವರಮ್ಮ ಉಸಿರಿದಾಗ, ಸೀದಾ ಎದ್ದು ನಾಗೇಶ ಸರಸರನೇ ಟಿವಿ ರೂಮಿಗೆ ಹೋಗಿ ತನ್ನ ಹಳೆ ಮುದ್ದಾದ ಬ್ಲಾಕ್ ಅಂಡ್ ವೈಟ್ ಟಿವಿ ನೋಡಿ ಪೆಚ್ಚುಮೋರೆಂದ ಬಂದು ಬಾರಲು ಮಲಗಿದ. ನಿದ್ರೆ ಬರುತ್ತಿಲ್ಲ... ಇಷ್ಟೊತ್ತು ಕಂಡದ್ದು ಕನಸಾ? ನನಸಾಗಿದ್ದರೆ ಎಷ್ಟು ಚೆಂದ ಇರುತ್ತಿತ್ತು. ಮನೆಯವರೆಲ್ಲ ಎಷ್ಟು ಸಂತೋಷದಿಂದ್ದರು. ನನ್ನ ಕೈಲಿ ಬಣ್ಣದ ಟಿವಿ ತರಕಾಗುತ್ತಾ? ಈ ಗವರ್‍ನಮೆಂಟ್ ಅದ್ಯಾವಾಗ ಟಿವಿ ರೇಟು ಕಡಿಮೆ ಮಾಡುತ್ತೋ, ನನ್ನ ಫ್ರೆಂಡ್ ಅಂಬ್ರೇಶ ಯಾವಾಗ ದುಡ್ಡು ಕೊಡುಸ್ತಾನೋ, ನಾನ್ಯಾವಾಗ ನನ್ನ ಅಪ್ಪನ ಆಸೆಯನ್ನು ತೀರಿಸ್ತೀನೋ ತಿಳಿಯದು.
ಹಾಗೆ ಲೆಕ್ಕ ಹಾಕಿದ್ರೆ ನಾಗೇಶನಿಗೆ ಬಣ್ಣದ ಟಿವಿ ತರಲು ಅಪೂಟ ಇಷ್ಟಾನೇ ಇದ್ದಿಲ್ಲ. ಅವರ ಫ್ರೆಂಡ್ ಟಿವಿ ತಂದ ಒಂದು ವರ್ಷಕ್ಕೆ ಅವನ ಕಣ್ಣಿಗೆ ಇನ್ನೆರಡು ಕಣ್ಣು (ಚಸ್ಮ) ಬಂದಿದ್ವು. ಆ ರೀತಿ ನನಗೆಲ್ಲಿ ಬಂದುಬಿಡುತ್ತೋ ಅನ್ನೋ ಕಾರಣ ಕೂಡ ಕಾಡುತ್ತಿತ್ತು. ನಾಗೇಶ ನಿಜವಾಗಿಯೂ ಸ್ಫುರದ್ರೂಪಿಯಾಗಿದ್ದ. ಎಲ್ಲರೂ ನನ್ನನ್ನು ನೋಡ್ತಾರೆ. ಆದರೆ ನಾನೇ ಅವರನ್ನು ನೋಡಂಗಿಲ್ಲ, ಮಾತಾಡಕ "ಂಜರಿತೀನಿ ಅಂದ್ಕಂಡಿದ್ದ. ಅವನು ಕೆಲಸ ಮಾಡುತ್ತಿರುವ ಆಪಿsಸ್‌ನ ಗೆಳತಿ ಸೌಮ್ಯ ಕೂಡ 'ನೀನು ಚೆಂದ ಇದಿಯಂತ ಸೊಕ್ಕು ಬಂದಿದೆ.' ಅದ್ಕೆ ನನ್ನ ಜೊತೆ ಮಾತಾಡ್ತಿಲ್ಲ ಅಲ್ವಾ? ಅಂತ ಒಂದು ಸಾರಿ ಅಂದಿದ್ಲು. ಹಾಗಾಗಿ ಅವು ತನ್ನ ಸೌಂದರ್‍ಯಕ್ಕೆ ಸ್ವಲ್ಪ ಜಾಸ್ತೀನೇ ಪ್ರಾಮುಖ್ಯತೆ ಕೊಟ್ಟಿದ್ದ.
ನಾಗೇಶ ಒಂದು ಸಾರಿ ಗುಡಿ ಮುಂದೆ ಕೂತು ಪುರಾಣ ಹೇಳೋ ಸ್ವಾಮಿಗಳು ಬೋಧಿಸುತ್ತ "ನಮಗೆ ಕನಸುಗಳು ಬೀಳೋದು ಯಾವಾಗ ಅಂದ್ರೆ ತನ್ನ ಜೀವನದಲ್ಲಿ ಯಾವುದನ್ನು ಪೂರೈಸಲು ಆಗೋದಿಲ್ಲವೋ, ಅವುಗಳೆಲ್ಲವು ಕನಸಿನಲ್ಲಿ ಬಂದು ಆ ಆಸೆಯನ್ನು ಪೂರೈಸಿಕೊಳ್ಳುತ್ತೆ, ಇಲ್ಲದೆ ಹೋದರೆ ಕನಸಿಗೆ ಒಂದು ಬೆಲೇನೇ ಇರೋಲ್ಲ. ಬೇಕಾದರೆ ನೋಡಿ ಕನಸಲ್ಲಿ ಬರೀ ಕಲ್ಪನೆಗಳೇ ಬಹಳ ಇರುತ್ತೆ ಅಂತಂದ್ರು." ಆಗ ನಾಗೇಶನಿಗೆ ದಿಗ್ಭ್ನ್ರಮೆ. ನಾನು ಬರೀ ಕನಸಲ್ಲಿ ಟಿವಿ ನೋಡಬಾರ್‍ದು, ಹಾಗಾಗಬಾರ್‍ದು. ನಾನು ನಿಜ ಜೀವನದಲ್ಲಿ ಬಣ್ಣದ ಟಿವಿ ತರ್‍ಲೇಬೇಕು ಅಂತ ನಿರ್ಧಾರ ಮಾಡ್ದ. ನಮ್ಮಪ್ಪನ ಮಹದಾಸೆ ಟಿವಿ ತರೋದು. ನನ್ನಿಂದ ಅದು ಸಾಧ್ಯಾನಾ? ಇಲ್ಲ, ನಾನು ಅದು ಎಷ್ಟೇ ಸಾಲವಾಗಲಿ ತರಬೇಕು. ನನ್ನಪ್ಪನ ಆಸೇನೇ ತೀರಿಸ್ಲೇಬೇಕು. ಆದರೆ ಅಷ್ಟು ದುಡ್ಡು ನನ್ನಲ್ಲಿ ಎಲ್ಲಿದ. ಬಣ್ಣದ ಟಿವಿಯೋ ಹನ್ನೆರಡು ಸಾವಿರ ಮತ್ತು ಅದ್ಕಿಂತ ಹೆಚ್ಚು. ನನ್ನಿಂದ ಅಷ್ಟು ಹಣ ಒಟ್ಟಿಗೆ ಕೂಡಿಡಕಾಗಲ್ಲ. ಕೂಡಿಣೋ ಅಂದ್ರೆ ಏನೇನೋ ಅಡ್ಡ ಬಂದು ಖರ್ಚಿಗೆ ದುಡ್ಡು ಬಳಕೆ ಆಗುತ್ತೆ. ಅದಕ್ಕೆ ಪಿಗ್ಮಿ ರಾಗಣ್ಣನಿಗೆ ದಿನ ದುಡ್ಡು ಕಟ್ಟಿದರೆ ಹೇಗಿರುತ್ತೆ ಅಂತ ಯೋಚಿಸಿದ. ನಾನು ಬಣ್ಣದ ಟಿವಿ ತರಬೇಕು, ಅದ್ಕಾಗಿ ನಾನು ದುಡ್ಡು ಕಟ್ಟಿದ್ದಕ್ಕಿಂತ ಜಾಸ್ತೀನೇ ಕೊಡ್ಬೇಕಂತ ಷರತ್ತು ಹಾಕಿ ಪಿಗ್ಮಿ ಕಟ್ಟಲು ಪ್ರಾರಂಭಿಸಿದ. ಹೀಗೆ ನಡಿದಿತ್ತು ಅವನ ತಂದೆಯ ಹಠದ ಪ್ರತಿಫಲದ ಬಣ್ಣದ ಟಿವಿ.
ಇವನು ದಿನಾ ರಾತ್ರಿ ಯೋಚ್ನೆ ಮಾಡೋನು. ನಾನು ಇನ್ನು ಏನು ಬೇರೆ ಕೆಲಸ ಮಾಡಿದ್ರೆ ಟಿ.". ತರಬಹುದು. ಅತ್ಲಾಗ ತಮ್ಮನ ಕಾಟಾನೂ ಜಾಸ್ತಿಯಾಗಿತ್ತು. "ಏನಣ್ಣ ನೀನು ಇನ್ನು ಟಿ.". ತರಲಿಲ್ಲ. ನಮ್ಮ ಫ್ರೆಂಡ್ಸೆಲ್ಲ ಕಲರ್ ಟಿ.". ತಂದ್ರಾ ಅಂತ ಕೇಳ್ತಿದ್ದಾರೆ?" ನೀನು ನೋಡಿದ್ರೆ ಅಂತ... ಶಾಪ ಹಾಕ್ತಿದ್ದ. ಅಸಲು ಈ ನಾಗೇಶ ಟಿ.". "ಷಯದಲ್ಲಿ ಮಾಡಿದ ಒಂದು ದೊಡ್ಡ ತಪ್ಪೇನು ಗೊತ್ತಾ......?!
ನಾಗೇಶ ಬಣ್ಣದ ಟಿ.". ತರಬೇಕೂಂತ ಅಂದುಕೊಂಡಿದ್ದ. ಅವನ ಎರಡು ತಿಂಗಳ ಸಂಬಳ ಇನ್ನು ಬಂದಿದ್ದಿಲ್ಲ. ಆಪಿsಸಿನ ಪಿವಾನ್ ರಘುಪತಿ ಕಲರ್ ಟಿ.". ತಂದು ಬರೀ ಒಂದು ತಿಂಗಳಾಗಿತ್ತು. ನನ್ನ ಮನೆಯ ಹೊಸ ಟಿ." ಕೊಡುತ್ತೀನಿ. ನಿಮಗೆ ಬರುವ ಎರಡು ತಿಂಗಳ ಸಂಬಳ ನನಗೆ ಕೊಡಿ ಸಾರ್, ನನಗೆ ಹಣದ ಅರ್‍ಜೆಂಟ್ ಇದೆ ಎಂದು ಆಸೆ ಹುಟ್ಟಿಸಿದ್ದ. ಇದಕ್ಕೆ ನಾಗೇಶ ಒಪ್ಪಿ ಎರಡು ತಿಂಗಳ ಸಂಬಳ ಒಟ್ಟು ಆರು ಸಾ"ರ ರೂ.ಗಳನ್ನು ಮನೆಗೆ ಕೊಡದೇ ಪಿವಾನ್‌ಗೆ ನಾಗೇಶ ಕೊಟ್ಟಿದ್ದ. ಇನ್ನೇನು ನನಗೆ ಸೋ" ರೇಟ್‌ಗೆ ಹೊಸ ಕಲರ್ ಟಿ.". ಸಿಗುತ್ತಲ್ಲ ಅನ್ನೋ ಖುಯಲ್ಲಿ ತನ್ನ ಸಂತೋಷ ತಡಕಣಲಿಕ್ಕಾಗದೆ ಇಡೀ ಓಣಿಗೆಲ್ಲ ನಾನು ಬಣ್ಣದ ಟಿ.". ತರುತ್ತಿದ್ದೀನೆಂದು ಡಂಗುರ ಹೊಡೆದುಬಿಟ್ಟ. ಅವನ ಮನೆಯಲ್ಲಿ ಈ "ಷಯ ಹೇಳಿದಾಗಂತೂ ಹಬ್ಬದ ವಾತಾವರಣವೇ ಮೂಡಿಬಿಟ್ಟಿತ್ತು. ಮನೆಯಲ್ಲಿದ್ದ ಎಲ್ಲರಿಗೂ ನಿರಂಜನ ಬೇಕರಿಂದ ಪೇಡ ತರಿಸಿ ಸಿ" ಹಂಚಿದ್ದಾತು. ಆದರೆ ಅವನ ಪಿವಾನ್ ರಘುಪತಿ ಮೊದಲೇ ಅತೀ ಸಾಲ ಮಾಡಿ ಅವತ್ತಿನ "ಂದಿನ ದಿನವೇ ಮನೆ ಖಾಲಿ ಮಾಡಿ ಓಡಿಹೋಗ್ಬಿಟ್ಟಿದ್ದ. ಈ "ಷಯ ಕೇಳಿ ಅವನಿಗೆ ದಿಗ್ಭ್ನ್ರಮೆ ಉಂಟಾತು. ನಿಂತಲ್ಲಿ ನಿಲ್ಲಗಾಗ್ತಿಲ್ಲ, ಕುಂತಲ್ಲಿ ಕೂಡಕಾಗ್ತಿಲ್ಲ. ಅವನ ಆಸೆಯ ಕನಸಿನ ಗೋಪುರ ನುಚ್ಚು ನೂರಾಗಿತ್ತು. ಇನ್ನು ನಾನು ಬಣ್ಣದ ಟಿ.".ನ ತರೋದು ಕನಸಿನ ಮಾತೇ, ಬದುಕಲಿಕ್ಕೆ ಕೂಡ ಕುತ್ತು ತಂದುಬಿಟ್ಟನಲ್ಲಾ ಈ ಪಿವಾನ್ ರಘುಪತಿ ಎಂದು ಶಪಿಸಿಕೊಂಡ. ಇದನ್ನು ನಾನು ಯಾರ ಹತ್ರ ಹೇಳಿಕೊಳ್ಳಲಿ. ಅತ್ತ ಹೇಳಿಕೊಳ್ಳೊಕಾಗಲ್ಲ, ಇತ್ತ ಬಿಡೋಕಾಗಲ್ಲ ಅಂದುಕೊಂಡ. ಉಗುಳು ನುಂಗೋ ಹಾಗಿಲ್ಲ, ಬಿಡೋ ಹಾಗಿಲ್ಲ ಹಾಗಿತ್ತು ಅವನ ಪರಿಸ್ಥಿತಿ. ಅವನು ಜೀವನದಲ್ಲಿಯೇ ಮೊದಲಬಾರಿಗೆ ರಾತ್ರಿ ನಿದ್ರಾ ದೇವತೆ ಸಿಟ್ಟಾಗಿದ್ದಳು. ಇನ್ನು ಕಿರಾಣಿಯವರು, ಕರೆಂಟ್ ಬಿಲ್ ಬೇರೇ ಕಟ್ಟಿಲ್ಲ. ಹ್ಯಾಗಪ್ಪ ದೇವರೇ ಅಂತ ತಲೆ ಮೇಲೆ ಕೈ ಹೊತ್ತು ಕೂತ. ನಿದ್ರೆ ಬರ್‍ತಾನೇ ಇಲ್ಲ. ಮನೆಗೆ ಏನೋ ಸುಳ್ಳು ಹೇಳಿ... ಎರಡು ತಿಂಗಳ ಸಂಬಳ ಕೊಡದೇ ಈ ರೀತಿ ಮೋಸಹೋಗಿದ್ದ.
ಇನ್ನು ನನ್ನಿಂದ ಬಣ್ಣದ ಟಿ.". ತರಲು ಆಗದು. ಅದು ನನಗೆ ಕನಸಾಗಿ ಕಂಡಿದ್ದು. ಆದ್ರೆ ಅದು ನಾನು ಕಂಡ ಕನಸು ಬೆಳಗಿನದ್ದೋ, ರಾತ್ರಿಯದ್ದೋ. ಅದು ಬೆಳಗಿನ ಕನಸಾಗಿದ್ರೆ ನನಸಾಗುತ್ತಾ? ಗೊತ್ತಿಲ್ಲ. ನನ್ನಪ್ಪ ತನಗಾಗಿ ಏನೂ ಕೇಳಿದವನಲ್ಲ. ಆದರೆ ಆತನ ಒಂದೇ ಒಂದು ಆಸೆಯನ್ನು ಈಡೇರಿಸ್ದೇ ಹೋದೆನಲ್ಲಾ ಎಂದು ಬಹಳ ಪೇಚಾಡಿದ. ತನ್ನ "ದಿsಯನ್ನು ತಾನೇ ಬೈದುಕೊಂಡ.
ಆಗ ಬಂತು ನೋಡ್ರಿ ದೀಪಾವಳಿ. ದೀಪಾವಳಿ ಹಬ್ಬ ಇನ್ನು ಎರಡು ತಿಂಗಳ ಮುಂಚೆ ತ್ರಿಶಂಕು ಪತ್ರಿಕೆಯಲ್ಲಿ ಜಾ"ರಾತು ಈ ರೀತಿ ಕೊಟ್ಟಿದ್ದರು.
ಕತೆ, ಕವನಗಳಿಗೆ ಅಹ್ವಾನ, ಹೊಸಬರಿಗೆ ಆದ್ಯತೆ.
ಕತೆ
ಪ್ರಥಮ ಬಹುಮಾನ ೧೦,೦೦೦
ದ್ವಿತೀಯ ಬಹುಮಾನ ೫,೦೦೦
ಸಮಾಧಾನಕರ ಬಹುಮಾನ ೧,೦೦೦ರೂ.ಗಳ ಅಂತಿತ್ತು.
ನಾಗೇಶನಿಗೆ ಕತೆ, ಕವನಗಳ ಮೇಲೆ ಸ್ವಲ್ಪ ಹುಚ್ಚು ಇತ್ತು. ಆದರೆ ಎಂದೂ ಅವನು ಬರೆದಿದ್ದಿಲ್ಲ. ಅವನು ತನ್ನ ಹಳೇ ಪ್ರೇಯಸಿಗೆ ಪತ್ರ ಬರೆದದ್ದು ಬಿಟ್ರೆ, ಪತ್ರಿಕೆಯಲ್ಲಿ ಕತೆ, ಕವನಗಳನ್ನು ಓದ್ತಿದ್ದ.
ಈ ರೀತಿ ಇರೋ ಜಾ"ರಾತಿನಲ್ಲಿ ೧೦,೦೦೦ ರೂ.ಗಳು ಅಂತ ಇದ್ದದ್ದು ಅವನ ಮನದಲ್ಲಿ ಅಚ್ಚೊತ್ತಿತ್ತು. ನನ್ನ ಹತ್ತಿರ ೧೦,೦೦೦ ಇದ್ದಿದ್ದರೆ, ಅದರ ಜೊತೆಗೆ ಪಿಗ್ಮಿಯಲ್ಲಿರುವ ಎರಡು ಸಾ"ರ ದುಡ್ಡನ್ನು ಸೇರಿ ಬಣ್ಣದ ಟಿ.". ತರಬಹುದಿತ್ತಲ್ಲ ಅಂತ ಆಸೆಪಟ್ಟ. ಆಗ ಅವನಿಗೆ ತಟ್ಟಂಥ ಹೊಳೆದದ್ದು, ನಾನು ಕತೆ ಬರೆದರೆ ಹೇಗಿರುತ್ತೆ, ಅದಕ್ಕೆ ಹತ್ತು ಸಾ"ರ ಬಹುಮಾನ ಬಂದ್ರೆ ಹೇಗಿರುತ್ತೆ, ಕಷ್ಟುಪಟ್ಟು ದುಡಿದ ದುಡ್ಡಂತು ನಯಾ ಪೈಸೆ ಕೈಗತ್ತಲಿಲ್ಲ. ಸಾಲ ಮಾಡಿ ಕಿರಾಣಿ ಸಾಮಾನು ತರುವಂತಾತು. ನೋಡೋಣ ಇದೊಂದು ರೀತಿ ಪರೀಕ್ಷೆ ಅಂತಂದುಕೊಂಡ.
ಸರಿ ಏನು ಬರೀಬೇಕು. ಯಾವ ಕತೆ ಬರೀಲಿ. ಯಾವ ರೀತಿ ಕತೆ ಬರೆದರೆ ಹತ್ತು ಸಾ"ರ ರೂ. ಬರುತ್ತೆ. ಅವನಿಗೆ ಕತೆಗಿಂತ ಮುಖ್ಯವಾಗಿ ಪ್ರಥಮ ಬಹುಮಾನ ಬರಬೇಕಂದ್ರೆ ಏನು ಮಾಡಬೇಕು ಅಂತ ಯೋಚ್ನೆ ಮಾಡುತ್ತಿದ್ದ. ಹೇಗೆ ಬರೆದರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡಹತ್ತಿದ. "ಗೆ ದಿನಗಳು ಕಳೆಯಲಾರಂಬಿsಸಿದರು. ಆದ್ರೆ ಏನು ಬರೀಬೇಕು ಹೊಳಿತಾನೇ ಇಲ್ಲ. ಒಂದು "ಷಯವಂತೂ ಗೊತ್ತಿತ್ತು ಕುಂ.". ಅವರ ಕತೆಗಳಲ್ಲಿ ಪಾತ್ರಗಳು ನೈಜವಾಗಿರುತ್ತೆ. ಸಮಾಜದ ನೈಜ ಚಿತ್ರಣ ಅವರ ಕತೆಯಲ್ಲಿರುತ್ತೆ. ಅವರ ಹಲವಾರು ಕಥೆಗಳನ್ನ ಓದಿದ್ದ. ಹಾಗೇ ಬರೀಬೇಕು ಅಂತ ತಾನು ನಿರ್ಧಾರ ಮಾಡಿಕೊಂಡ. ಅವನ ಮನದಲ್ಲಿ ಠೊಣ್ಣಿ ಪಾತ್ರ ಮನದಲ್ಲಿ ಓಡಾಡಿಸಲಾರಂಬಿsಸಿತು.
ಆಗ ಹೊಳೆತು ಅವನಿಗೆ. ತನ್ನದೇ ನರಳಾಟದ ಕಥಾವಸ್ತು ಬಣ್ಣದ ಟಿ.". ಕಥೆಯ ರ್ಶೀಕೆ ಬರೆದ. ತಾನುಂಡ ಕ" ಅನುಭವಗಳನ್ನ "ನೀನಿನ್ನು ಟಿ.". ತರಲಿಲ್ಲವಾ ಅನ್ನೋ?" ವ್ಯಂಗ್ಯ ಮಾತುಗಳನ್ನು ನೆನೆಸಿಕೊಂಡು ತನ್ನದೇ ಬದುಕಿನ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕತೆ ಬರೆದುಬಿಟ್ಟ. ಬರೆದು ಒಂದು ಬಾರಿ ಓದಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರೇ ನನ್ನ ಈ ಕಥೆಗೆ ಮೊದಲನೇ ಬಹುಮಾನ ಸಿಗೋ ಹಾಗೆ ಮಾಡಪ್ಪ, ನಮ್ಮಪ್ಪನ ಆಸೆಯ ಬಣ್ಣದ ಟಿ.". ತರುವಂತೆ ಮಾಡಪ್ಪ. ನಿನಗೆ ಎರಡು ತೆಂಗಿನಕಾ ಹೊಡಿತೀನಿ ಅಂದು ತಾನು ಬರೆದ ಕತೆಯನ್ನು ಹನುಮಪ್ಪನ ಮುಂದಿಟ್ಟು ಪೂಜೆ ಮಾಡಿ ಆಂಜನೇಯನ ಆಶೀರ್ವಾದದೊಂದಿಗೆ ಪೋಸ್ಟ್ ಮಾಡಿಯೇಬಿಟ್ಟ. ದೀಪಾವಳಿಗೆ ಇನ್ನು ಒಂದು ತಿಂಗಳು ಟೈ"ತ್ತು. ಅದರ ಅನೌನ್ಸ್‌ಮೆಂಟ್ ಸರಿಯಾಗಿ ದೀಪಾವಳಿ ದಿನದಂದು ನಿರ್ಧಾರವಾಗಿತ್ತು.
ನಾಗೇಶನು ತನ್ನ ತಂದೆಗೋಸ್ಕರ ಅಲ್ಲದಿದ್ದರೂ ಆ ಓಣಿಯವರಿಗೋಸ್ಕರ ಟಿ.". ತರಲೇಬೇಕಿತ್ತು. ಯಾಕೆಂದರೆ ಅಷ್ಟು ವ್ಯಂಗ್ಯವಾಗಿ "ಏನಪ್ಪ ನಾಗೇಶ ನಿಮ್ಮ ಮನೆಗೆ ಹೋಗಿದ್ವಿ ತುಂಬಾ ದೊಡ್ಡದಲ್ವಾ? ನಿನ್ನ ಬಣ್ಣದ ಟಿ.".!" ಅನ್ನೋರು. ತರತ್ತೀನಿ ಅಂತ ಡಂಗುರ ಸಾರಿಸಿದ್ಯಲ್ಲ ಅಂತ ಕೊಂಕಿನಿಂದ ಮಾತಾಡೋರು. ಆಗಂತೂ ನಾಗೇಶನ ಮನಸು ಹುಳಿಹುಳಿ. ಒಂದು ಬಣ್ಣದ ಟಿ.".ಗೋಸ್ಕರ ಆತ್ಮಹತ್ಯೆಯೂ ಮಾಡಿಕೊಳ್ಳಬಹುದು ಅಂತ ಗೊತ್ತಾದದ್ದೇ ಆವಾಗ. ಅವನಿಗೆ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಅಂತಾನೂ ಕೂಡ ಮನದಲ್ಲಿ ಯೋಚನೆ ಬಂದಿತ್ತು. ಆದರೆ ಸ್ವಲ್ಪ ಭಂಡನೇ ಆಗಿದ್ದ ನಾಗೇಶ. ಇತ್ತ ನಾಗೇಶನ ಅಪ್ಪ ಟಿ.". ತಗಂಡುಬಾ ಅಂತ ಹೇಳೋದನ್ನ ಬಿಟ್ಟುಬಿಟ್ಟಿದ್ದ. ಅಷ್ಟು ರೋಸಿಹೋಗಿತ್ತು ಅವರಪ್ಪನಿಗೆ. ನಾನು ಮನೇನ ಒತ್ತಿ ಇಟ್ಟಾದರೂ ಬಣ್ಣದ ಟಿ.".ನ ತರುತ್ತೀನ್ಲೇ ಅಂತ ಜೋರಾಗಿ ಒದರುತ್ತಿದ್ದ. ಆಗಂತೂ ಅವನ ಮನಸೆಲ್ಲಾ ಚೂರುಚೂರಾಗಿತ್ತು.
ಇನ್ನೇನು ಕೊನೆಗೆ ದೀಪಾವಳಿ ಬಂತು. ಫಲಿತಾಂಶದ ಪ್ರಕಟಣೆ ತ್ರಿಶಂಕು ಪತ್ರಿಕೆಯಲ್ಲಿ ಬಂದಿತ್ತು. ಫಲಿತಾಂಶ ಅಚ್ಚರಿಂದಲೇ ಕೂಡಿತ್ತು. ಆಂಜನೇಯನ ಆಶೀರ್ವಾದದಿಂದಲೋ ಏನೋ ಬಣ್ಣದ ಟಿ.". ಕಥೆಗೆ ಪ್ರಥಮ ಬಹುಮಾನ ಬಂದಿತ್ತು. ಇದನ್ನು ನೋಡಿದ ನಾಗೇಶನಿಗೆ, ತನ್ನನ್ನು ತಾನೇ ನಂಬಲಾಗುತ್ತಿಲ್ಲ. ಸಮಾರಂಭಕ್ಕೆ ಆಹ್ವಾನ ಬಂದಿತ್ತು. ೧೦,೦೦೦ ಜೊತೆಗೆ ಸನ್ಮಾನ ಕೂಡ!
ಸಭೆಗೆ ಪ್ರಥಮ ಪ್ರಶಸ್ತಿ ಕಥೆ "ಜೇತ ಕಥೆಗಾರ ನಾಗೇಶ ಅವರು ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಬೇಕೆಂದು ನುಡಿದಾಗ, ನಾಗೇಶನು ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತು ಕೈಂದ ನಮಸ್ಕರಿಸಿ, ವೇದಿಕೆಯಲ್ಲಿರುವ ಎಲ್ರಿಗೂ ನಮಸ್ಕಾರ. ದಯ"ಟ್ಟು ನನ್ನನ್ನು ಕಥೆಗಾರನೆನ್ನಬೇಡಿ. ಯಾಕೆಂದ್ರೆ ನಾನು ಕಥೆಗಾರನಲ್ಲ. ನಾನು ಮುಂದೆ ಕಥೆಗಾರನಾಗುವೆನೇನೋ ತಿಳಿಯದು. ಪರಿಸ್ಥಿತಿ ನನ್ನ ಬದುಕನ್ನು ಹಾಗೆ ಕತೆಗಾರನನ್ನಾಗಿ ಮಾಡಿಸಿತ್ತು. ಅದು ನಿಮಗೆ ಕತೆಯಾಗಿರಬಹುದು. ಆದರೆ ಅದು ನನ್ನ ವಾಸ್ತವ ಜೀವನದ ಘಟನೆ. ನನಗೆ ದಯ"ಟ್ಟು ೧೦,೦೦೦ ಜೊತೆಗೆ ಸನ್ಮಾನ ಮಾಡುವುದು ಬೇಡ. ಸನ್ಮಾನದ ಖರ್ಚಿಗೆ ತಗಲುವ ಹಣವನ್ನು ಕೊಡಿ. ನಾನು ಈ ಕಥೆಯನ್ನು ಬರೆಯಲು ಬೇರೆ ಏನೂ ಕಾರಣವಲ್ಲ. ಮುಖ್ಯ ಕಾರಣ ಈ ಬಣ್ಣದ ಟಿ.".ಯೇ. ಈ ಬಣ್ಣದ ಟಿ.". ನನ್ನನ್ನು ಚಿತ್ರ"ಂಸೆ ಮಾಡಿದೆ, ಪಡಬಾರದ ಕಷ್ಟಗಳನ್ನು, ನರಳಾಟವನ್ನು ಕೊಟ್ಟಿದೆ. ಮನೆಯಲ್ಲಿ ತಣ್ಣಗೆ ನಿದ್ದೆ ಮಾಡಲು ಅನುವು ಮಾಡಿಕೊಟ್ಟಿಲ್ಲ. ಸುಖವಾದ ನಿದ್ರೆ ಮಾಡಿ ಎಷ್ಟೋ ದಿನಗಳೇ ಆಗಿವೆ. ನನ್ನ ಪ್ರೀತಿಸುವ ಮನೆಯವರೇ ನನ್ನನ್ನು ಶತ್ರು"ನಂತೆ ನೋಡ್ತಿದ್ದಾರೆ. ನಾನು ಎಷ್ಟು ಬೇಗವೋ ಅಷ್ಟುಬೇಗ ಬಣ್ಣದ ಟಿ.". ಮನೆಗೆ ತೆಗೆದುಕೊಂಡು ಹೋಗ್ಬೇಕು. ನಾನು ಕೂಡಲೇ ಈ ನರಳಾಟದಿಂದ ಮುಕ್ತನಾಗ್ಬೇಕು. ನಾನು ಮುಂದೆ ಖಂಡಿತ ಕತೆಗಾರನಾಗಲಾರೆ. ಆದರೆ ವಾಸ್ತವ ಬದುಕು ಯಾರನ್ನು ಕೂಡ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ನಾನು ಒಂದು ಉತ್ತಮ ನಿರ್ದಶನ, ಅದಕ್ಕೆ ನಾನೊಂದು ಉದಾಹರಣೆ ಅಷ್ಟೆ. ಅಂತ ಹೇಳಿ ತನ್ನ ಮಾತು ಮುಗಿಸಿದ.
ಸಮಾರಂಭದಲ್ಲಿ ಕೊಟ್ಟ ಹತ್ತು ಸಾ"ರದ ಜೊತೆಗೆ ಕೊಟ್ಟ ಎರಡು ಸಾ"ರ ರೂ.ಗಳೊಂದಿಗೆ ಟಿ.". ಅಂಗಡಿಗೆ ಹೋಗಿ ಬಣ್ಣದ ಟಿ.". ಮನೆಗೆ ತಂದು ಪ್ಯಾಕ್ ಓಪನ್‌ಮಾಡಿ ಅಪ್ಪನ ಕೈಂದ "ಸ್ಟಾರ್‍ಟ್ ಮಾಡು... ಬಟನ್ ಒತ್ತು..." ಅಂತ ಅಂದಾಗ ನನಗೆ ಮತ್ತೆ ಇದು ಕನಸಾ ಅಂತಾ ತನ್ನನ್ನು ತಾನೇ ಚಿವುಟಿ ಕೊಂಡ, ಸಮಾಧಾನವಾಗ್ಲಿಲ್ಲ ಮನೆಯಲ್ಲಿದ್ದ ಎಲ್ಲರನ್ನು ಚೂಟಿದ. ಇದು ನಿಜ. ಕನಸಲ್ಲ. ನಿಜವಾಗಿಯೂ ಕನಸಲ್ಲ....
ನನ್ನ ಬದುಕಿನ ನರಳಾಟದ ಬಣ್ಣದ ಟಿ.". ಕಥೆಗೆ ಬಂದ ಹಣದಿಂದಲೇ ನಾನು ಬಣ್ಣದ ಟಿ.". ತಂದ ಹಾಗಾತು. ಇದನ್ನೇ ನಾನು ಅನುಭ"ಸಿದ್ದು, ಬಣ್ಣದ ಟಿ.". ಜೀವನದ ಅಸಹನೆಯ ಸಂಕೇತ ಎಂದು ಮತ್ತೊಮ್ಮೆ ತನ್ನನ್ನು ತಾನು ಚಿವುಟಿಕೊಂಡು ನೋಡಿದ. ಇದು ನನಸಾ? ಎಂದು ತನ್ನನ್ನೇ ತಾನು ಮತ್ತೆ ಪ್ರಶ್ನೆ ಮಾಡಿಕೊಂಡ. ಯಾಕೆಂದರೆ ನಂಬಲಿಕ್ಕೆ ಇನ್ನೂ ಕೂಡ ಆಗುತ್ತಿಲ್ಲ. ಹಾಗಂತ ಮನದಲ್ಲಿ ಮಂಡಿಗೆ ತಿನ್ನುತ್ತಾ ಮನೆಯ ಮೂಲೆಯಲ್ಲಿ ಕೂತ. ಬಣ್ಣದ ಟಿ.". ಮುಂದೆ ಗುಂಪುಕೂಡಿದ್ದ ಮನೆಯವರೆಲ್ಲರು, ಮತ್ತೊಂದು ಮೂಲೆಯಲ್ಲಿ ತನ್ನ ಮುದ್ದು ಬ್ಲಾಕ್ ಅಂಡ್ ವೈಟ್ ಟಿ.". ನೀನು ನನಗೆ ಮೋಸ ಮಾಡ್ದೆ, ನನ್ನನ್ನು ದೂರ ಮಾಡ್ದೆ. ಕೊನೆಗೂ ನೀನು ಕೂಡ ನನ್ನ ದ್ವೇಸಿದೆ ಅಂತ ಪೆಚ್ಚುಮೋರೆಂದ ನೋಡಿದ ಹಾಗಿತ್ತು!?

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು.

ಬಿಳಿಯ.....

ಇಳಿ ಸಂಜೆ ಹೊತ್ತಲ್ಲಿ ಕಡ್ಡಿ "ರೇಶ ಸುಮ್ನೆ ಅಂಗಾತ ಮಲಗಿ ಇಳಿ ಸೂರ್ಯನಿಗೆ ಮೈಒಡ್ಡಿ ಒಬ್ನೇ ದೀರ್ಘ ಆಲೋಚನೆಯಲ್ಲಿದ್ದ. ಬಹಳ ಅರ್ಜೆಂಟಲ್ಲಿದ್ದ ಇಳಿಸೂರ್ಯನಿಗೆ ಬೇಗ ಗೂಡು ಸೇರುವ ತವಕ. ಆದ್ರೆ ತನ್ನ ಒಳಮಾತನ್ನ ಕೇಳದೇ ಹೋಗ್ತಿದ್ದಾನಲ್ಲಾ ಅನ್ನೋ ಮುನಿಸು ಕಡ್ಡಿ "ರೇಶನದು. ಪ್ರತಿದಿನದ ಇಳಿ ಸಂಜೆ ಹೊತ್ತು "ರೇಶ ಸಮಯ ಕಳೀತಿದ್ದು ಇದೇ ರೀತಿ. ಅದು ಒಬ್ನೇ. ಇತ್ತೀಚೆಗೆ ಅವ್ನ ದೋಸ್ತ್‌ರನ್ನೆಲ್ಲ ದೂರ ಮಾಡಿಕೊಂಡು ಕೆರೆ ದಂಡೇಲಿ ಬಂದು ಒಬ್ನೇ ಕೂತು ಬಿಡ್ತಿದ್ದ.
ಲೇ ಕಡ್ಡಿ "ರೇಶ, ಏನ್ಲೇ ಯಾರಿಗೂ ಹೇಳ್ದೆ ಕೇಳ್ದೇ ಇಲ್ಲಿ ಒಬ್ನೇ ಬಂದು ಕೂತಿದಿ ಅಂತ ಫ್ರೆಂಡ್ಸು ಅಂಜಿನಿ, ನಾಗಪ್ಪ ಮಾತಿಗೆಳೆದರೆ... ಅವರನ್ನೆಲ್ಲ ದುರುಗುಟ್ಟಿ ನೋಡೋನು. ಏನಾದ್ರೂ ಮಾತಾಡ್ಲೆ.. ಯಾಕ್ಲೆ? ಯಾರಾದ್ರು ಏನಾದ್ರೂ ಬೈದ್ರಾ? ನಿಮ್ಮಪ್ಪ ಹೊಡ್ದನಾ? ಅಂತ ಪ್ರಶ್ನೆ ಮಾಡಿದ್ರೆ ಇವು 'ಏನೂ ಇಲ್ಲಲೇ' ಅನ್ನೋ ರೀತಿ ತಲೆ ಅಲ್ಲಾಡಿಸ್ತಾ ತಿರುಗಿ ಮಕ ನೋಡ್ದೆ ಎದ್ದೋದ.
ಇವನಿಗೇನು ಆಗಿದೆ, ಒಂದೆ ಸಮನೆ ನಾವು ಮಾತಿಗೆಳೆದರೆ ಇ"ಂದ ಒಂದು ಮಾತೂ ಇಲ್ಲ. ನಾವೇನು ಅಂತ ತಪು ಮಾಡಿದೀ" ಅಂತ ಅವ್ನ ಫ್ರೆಂಡ್ಸ್ ಪ್ರಶ್ನೆ ಮಾಡಿಕೊಂಡ್ರು. ಅಸಲು ಯಾಕೆ ಇವು "ಗಾಡ್‌ತಿದ್ದಾನೆ. ತುಂಬಾ ಮಂಕಾಗಿ ಕಾಣ್ತಿದ್ದಾನೆ. ಇವು ಮೊದ್ಲಿಗಿದ್ದ ಉತ್ಸಾಹ ಈಗ ಇಲ್ಲೇ ಇಲ್ಲ. ಪಟಪಟಾ ಅಂತ ಮಾತಾಡೋ "ರೇಶ ಈಗ ಮಂಕಾಗಿದ್ದಾನಲ್ಲ. 'ಲೇ ಕಡ್ಡಿ "ರ' ಅಂದ್ರೆ ಸಾಕು ಸಿರ್‌ರ್... ಎಂದು ಜಗಳಕ್ಕೆ ಬೀಳೋನು, ಎದುರಿನವರನ್ನು "ಯಾಳಿಸೋನು, ಈಗ ಏನೇ ಬೈದ್ರೂ ತಲೆ ಅಲ್ಲಾಡಿಸ್ತಾ, ಯಾವುದೋ ಲೋಕದಲ್ಲಿರೋ ರೀತಿ ಇರ್‍ತಾನೆ. ತನ್ಗೂ ಈ ಜಗತ್ತಿಗೂ ಸಂಬಂಧ"ಲ್ಲವೇನೋ ಅನ್ನೋ ರೀತಿ ಇರ್‍ತಾನೆ. ನಮ್ಗಂತೂ ಇವನನ್ನು ಈ ಸ್ಥಿತೀಲಿ ನೋಡೋದು ತುಂಬಾ ಹೆದ್ರಿಕೆಯಾಗ್ತಿತ್ತು.
ಇಂಥ ಪರಿಸ್ಥಿತೀಲಿ "ರೇಶನ ಅಮ್ಮ "ನೋಡಪಾ ಅಂಬ್ರೇಶ... ನೀನಾದ್ರೂ ಸ್ವಲ್ಪ ಅ"ಗೆ ಬುದ್ದಿ ಹೇಳು, ಅ"ಗೆ ನಾವು ಯಾವತ್ತೂ ಹೊಡ್ದೋರು ಅಲ್ಲ, ಬಡ್ದೋರು ಅಲ್ಲ, ಮನೇಲಿ ಪಟಪಟಾಂತ ಮಾತಾಡ್ತಾ, ಎಲ್ರನ್ನು ನಗುಸ್ತಾ ಇರೋನು ಈಗ ಬಾಂದ ಮಾತು ಬರೋದು ಅಂದ್ರೆ ಮುತ್ತು ಸುರಿತಾವೆ ಅನ್ನೋ ಹಾಗೆ ಮಾಡ್ತಾನೆ. ಒಳಗೊಳಗೆ ಅಳ್ತಾನೆ, ಅತ್ತು ಅತ್ತು ಮಕ ನೋಡು ಎಷ್ಟು ದದ್ರಿಸಿಬಿಟ್ಟಿದೆ. ಅವು ಈ ರೀತಿ ಮಂಕಾಗಿಬಿಟ್ರೆ ನಾವೇನು ಅನಕಬೇಕು. ಸ್ವಲ್ಪ ನೀನೇ ಅ"ಗೆ ತಿಳಿಹೇಳ್‌ಬೇಕಪ್ಪ. ಎಷ್ಟೇ ಆದ್ರೂ ನೀನೇ ಅವ್ನ ಜಿಗಿರಿ ದೋಸ್ತ್. ನಮ್ಮತ್ರ ಅಲ್ಲದಿದ್ದರೂ ನಿಮ್ಮತ್ರ ಹೇಳಿಕೊಳ್ಳಲಿ" ಅಂತ ಅಳಕಂತ ಹೇಳ್ತಿದ್ರೆ ನಾನು ಮತ್ತು ನನ್ನ ಫ್ರೆಂಡ್ಸ್‌ಲ್ಲ ಅಲ್ಲಿ ನಿಲ್ಲೋ ಧೈರ್ಯ ಮಾಡಲಾರದೆ ಕಾಲ್ಕಿತ್ತೆವು.
"ರೇಶ ನಿಜವಾಗಿಯೂ ಒಬ್ಬ ಚಟಪಟಾಕಿ ಹುಡ್ಗ. ಏಳನೇ ಕ್ಲಾಸಲ್ಲಿ ಫಸ್ಟ್ ಬಂದಿದ್ದ. ಮೇಲಾಗಿ ಅವು ನಾನು ತುಂಬಾ ಕ್ಲೋಸ್ ಫ್ರೆಂಡ್ಸ್. "ರೇಶ ನನ್ನ ದೋಸ್ತ್ ಅನ್ನೋದೇ ದೊಡ್ಡ ಹೆಮ್ಮೆಯಾಗಿತ್ತು. ಹೋದ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಿದಾಗಿನಿಂದ ನೋಡ್ತಿದೀನಿ ಇವನ ಮನ್ಸು ಯಾಕೋ ಸರಿಲ್ಲ. ಸರಿಯಾಗಿ ಸಾಲಿಗೂ ಬರ್‍ತಿಲ್ಲ, ಪರೀಕ್ಷೆ ಹತ್ರ ಬರ್‍ತಿದ್ರೂ ಪುಸ್ತಕ ಮುಟ್ಟುತ್ತಿಲ್ಲ. ನಮಗೆಲ್ಲ 'ಓದ್ರಿಲೇ' ಅಂತ ಬಡಕೊಳ್ಳೋನು ಸರಿಯಾಗಿ ಮಾತೇ ಆಡ್ತಿಲ್ಲ ಅಂದ್ರೆ ಏನರ್ಥ. ಅವನಿಗೇನಾದ್ರೂ ಮಾಟ ಗೀಟ ಮಾಡಿಸಿಬಿಟ್ಟರಾ?
ನಮ್ಮ "ರೇಶ ಐನೋರೋನು ಅಂತ ನಮಗೆಲ್ಲ ಯಾವತ್ತೂ ಅನಿಸೇ ಇದ್ದಿಲ್ಲ. ನಮ್ಮ ಇಡೀ ಫ್ರೆಂಡ್ಸಲ್ಲಿ ಇವನೊಬ್ಬನೇ ಸ್ವಾ". ಅವು ದಿನವೂ ನಮ್ಮ ಕೇರಿ ಫ್ರೆಂಡ್ಸ್ ಮನೇಲಿ ಆಟ ಆಡೋನು, ಊಟ ಮಾಡೋನು, ಮಲಗೋನು. ಈ "ಷಯದಲ್ಲಿ "ರೇಶನ ಅಮ್ಮ ಅಂಥ ಸಣ್ಣ ಜಾತಿಯವರ ಮನೇಲಿ ಊಟ, ನಿದ್ದೆ ಮಾಡಬಾರ್‍ದು ಅಂತ ಆಗಾಗ ಬೈತಿದ್ಲು. ಅವೊ ಅದನ್ನೆಲ್ಲ ಲೆಕ್ಕಕ್ಕೆ ಹಾಕ್ಕೊಳ್ಳುತ್ತಿದ್ದಿಲ್ಲ. 'ಅಂಗೆಲ್ಲ ನನ್ನ ಫ್ರೆಂಡ್ಸ್‌ರನ್ನು ಬೈಬೇಡ. ಇದರ ತಂಟೆಗೆ ಬಂದ್ರೆ ಏನಿಲ್ಲ ನೋಡು' ಎಂದು ಅವರಮ್ಮನನ್ನೆ ಕಣ್ಣು ಕೆಂಪು ಮಾಡಿ ಬೈತಿದ್ದ. "ರೇಶನಿಗೆ ಅವ್ನ ಜಾತಿಯ ಹುಡುಗರೆಲ್ಲ 'ಆ ಕೇರಿ ಹುಡುಗ್ರ ಜೊತೆ ಇರಬೇಡ್ಲೆ, ಕೊಳಕು ನನ್ನಮಕ್ಳು' ಅಂತ "ಯಾಳಿಸೋರು. ಆಗಂತೂ ಅವು 'ನಿನ್ನಷ್ಟು ಅವ್ರು ಕೊಳಕಲ್ಲ ಹೋಗ್ಲೆ' ಅಂತ ಮುಲಾಜಿಲ್ಲದೆ ಬೈತಿದ್ದನ್ನು ನಾನು ನೋಡಿದ್ದೆ. ಹಂಗಾಗಿ ಅವನಂದ್ರೆ ನನ್ಗೆ ತುಂಬ ಇಷ್ಟವಾಗಿದ್ದ.
ಒಂದು "ಷಯ ಹೇಳೋದೆ ಮರೆತಿದ್ದೆ. "ರೇಶನಿಗೆ ನಮ್ಮನೆಯ ಬಿಳಿಯ ಟಗರು 'ಬಿಳಿಯ' ಅಂದ್ರೆ ತುಂಬ ಪ್ರೀತಿ. ಅವು ಪ್ರತಿದಿನ ನನ್ನ ಜೊತೆ ಮಾತಾಡ್‌ತಾನೋ ಇಲ್ವೋ ಗೊತ್ತಿಲ್ಲ, ಆದ್ರೆ ಬಿಳಿಯನನ್ನು ಮಾತ್ರ ನೋಡಲು ಮರಿತಿದ್ದಿಲ್ಲ. ಬಿಳಿಯ ನೋಡಲು ತುಂಬ ಚೆನ್ನಾಗಿದ್ದ. ಇಡೀ ಮೈತುಂಬ ಬಿಳಿ ಕೂದಲು. ಅದರ ಮಕದಲ್ಲಿ ಕೆಂಪು ಬಣ್ಣ ಇದ್ದಿದ್ರಿಂದ ನೋಡಲು ತುಂಬ ಚೆಂದಾಗಿ ಕಾಣ್ತಿದ್ದ. ಇಡೀ ನಮ್ಮ ಹಳ್ಳೀಲಿ ಬಿಳಿಯನಷ್ಟು ಗಡದ್ದಾಗಿ ಯಾರೂ ಇದ್ದಿಲ್ಲ. ಬಿಳಿಯ ಸಿಟ್ಟಿನಿಂದ ಮಕ ಎತ್ತಿ ನೋಡಿದಾಗ್ಲಂತೂ ಎದುರಿಗಿರೋ ಜನ ಅದ್ರ ಹತ್ರ ಬರಲು ಹೆದ್ರುತಿದ್ರು. ಆಶ್ಚರ್‍ಯ ಅಂದ್ರೆ ಇದುವರೆಗೂ "ರೇಶ ಬಿಳಿಯನನ್ನು ಮುಟ್ಟಿರಲಿಲ್ಲ. ಮುಟ್ಟೋಕೆ ಬಹಳ ಹೆದ್ರುತಿದ್ದ. ದೂರದಿಂದ್ಲೆ ಹುಲ್ಲು ಹಾಕೋದು, ಕೆರೇಲಿ ನೀರು ಉಗ್ಗಿ ಸ್ನಾನ ಮಾಡ್ಸೋದು, ಬಾಳೆಣ್ಣು ತಿನ್ಸೋದು ಮಾಡ್ತಿದ್ದ. ನಾವು ನಾಲ್ಕು ಜನ ಫ್ರೆಂಡ್ಸ್ ಸೇರಿ ಬಿಳಿಯನನ್ನು ಐತ್ವಾರ, ರಜಾ ದಿನಗಳಲ್ಲಿ ಮೇಸಲು ಹೊಲಕ್ಕೆ ಕರೆದುಕೊಂಡು ಹೋಗುತಿದ್ವು.
ನಮ್ಮ ಬಿಳಿಯನನ್ನು ನೋಡಿದ್ರೆ ಊರಿನ ಜನರಿಗೆ ಹೊಟ್ಟೆಕಿಚ್ಚುಪಡುವಷ್ಟು ಮೈ ತುಂಬಿಕೊಂಡಿದ್ದ. ಇಡೀ ಹಳ್ಳೀಲಿ ಈತನಿಗೆ ಸರಿಸಾಟಿಯಾಗಿ ಯಾರೂ ಇದ್ದಿಲ್ಲ. ಸತತವಾಗಿ ಎರಡು ವರ್ಷ ಟಗರು ಜೂಜಲ್ಲಿ ಗೆದ್ದಿದ್ದ. ಆಮೇಲೆ ಬಿಳಿಯನ ಕಾಲು ನೋವು ಆಗಿದೆ ಅಂತ ಸ್ಪರ್ಧೆಗೆ ಕಳಿಸಲಿಲ್ಲ. ನನ್ನ ತಂದೆ ವಾರಿಗೇರು ನಮ್ಮ ಬಿಳಿಯನನ್ನು ದುರುಗುಟ್ಟಿ ನೋಡ್ತಾ 'ಲೇ ಅಂಬ್ರೀಶ, ಯಾವಾಗ್ಲೆ ಹುಲಿಗೆಮ್ಮ ದೇವ್ರು ಮಾಡೋದು' ಅಂತ ಕೇಳ್ತಿದ್ರು. ಆ ಜನ ಬಿಳಿಯನನ್ನು ನೋಡಿ ಈ ಪ್ರಶ್ನೆ ಕೇಳ್ತಿರೋದು "ರೇಶನಿಗೆ ಆಶ್ಚರ್ಯವಾಗುತ್ತಿತ್ತು. 'ಅವ್ರು ಯಾಕ್ಲೆ ಅಂಬ್ರೇಶ ನಮ್ಮ ಬಿಳಿಯನನ್ನು ನೋಡಿ ಆ ರೀತಿ ಕೇಳ್ತಾರೆ' ಅಂದಿದ್ದಕ್ಕೆ 'ನಮ್ಮ ಬಿಳಿಯನನ್ನು ದೇ"ಗೆ ಕೊಡಾಕ್ಲೆ' ಎಂದು ನಾನು ಉತ್ತರಿಸಿದ್ದೆ. ಆಗ "ರೇಶನಿಗೆ ಅವರಜ್ಜಿ ತಮ್ಮ ಆಕಳುಮರಿಯನ್ನು "ರಭದ್ರ ದೇ"ಗೆ ಕೊಟ್ಟಿದ್ದು ನೆನಪಾಗಿ 'ಲೇ ಅಂಬ್ರೇಶ ಬಿಳಿಯನನ್ನು ದೇ"ಗೆ ಕೊಡಬ್ಯಾಡ್‌ಲೇ ನಾನೇ ಇದನ್ನು ಸಾಕ್ತೀನಿ. ನಮ್ಮನೆಗೆ ಕೊಟ್ಟುಬಿಡ್ಲೇ' ಅಂತ "ರೇಶ ಒಮ್ಮೆ ಒತ್ತಾಯ ಮಾಡಿ ಕೇಳಿದ್ದ. ಅದಕ್ಕೆ "ನೋಡಪ್ಪ ಇದು ನಮ್ಮಂಥ ಸಣ್ಣವರ "ಚಾರವಲ್ಲ. ಇದು ದೊಡ್ಡವರ "ಚಾರ. ನಮ್ಮಪ್ಪ ಏನ್ ಹೇಳ್ತಾನೋ ಅಂಗೆ ಮಾಡೋದು. ಇಲ್ಲೀಗೆ ಈ ಮಾತು ಬಿಟ್ಟುಬಿಡು" ಅಂತ ಖಾರವಾಗಿ ಹೇಳಿಬಿಟ್ಟಿದ್ದೆ. ಅಲ್ಲಿಗೆ ಅವು ಪಾಪ.. ಸುಮ್ಮನಾಗಿ ಬಿಟ್ಟ.
"ರೇಶನಿಗೆ ಬಿಳಿಯ ಅಂದ್ರೆ ಪಂಚಪ್ರಾಣ. ಅವು ಅದನ್ನು ಮುಟ್ಟಲಿಕ್ಕೂ ಹರಸಾಹಸ ಮಾಡುತ್ತಿದ್ದ. ಒಮ್ಮೆ ಅದ್ರ ಬೆನ್ನು ಮುಟ್ಟಿದಾಗ್ಲಂತೂ ಇಡೀ ಸಾಲಿಗೆ ಈ "ಷಯ ತಿಳಿಸಿ ಸಂತೋಷಪಟ್ಟಿದ್ದ. ದಿನಾ ಸಾಲಿ ಮುಗಿದ ಕೂಡಲೇ ಒಮ್ಮೆಯಾದ್ರೂ ಅದನ್ನು ದೂರದಿಂದ ನೋಡಿ ಸಂತಸಪಡುತ್ತಿದ್ದ. ಅವು ಬಿಳಿಯನಿಗೆ ತನ್ನ ಸ್ವಂತ ದುಡ್ಡಿನಿಂದ ಸಂತೆಯಲ್ಲಿ ಗಂಟೆ ತಂದಿದ್ದ. ಅದನ್ನು ಕಟ್ಟಿದಾಗಿನಿಂದ ದೂರದಿಂದಲೇ ಬಿಳಿಯ ಬರುವ ಶಬ್ದ ಗೊತ್ತಾಗುತ್ತಿತ್ತು. ಗಂಟೆಯ ಟಣ್‌ಟಣ್ ಎಂಬ ಸದ್ದು ಬಿಳಿಯನನ್ನು ಇನ್ನು ಚೆಂದ ಕಾಣುವಂತೆ ಮಾಡಿತ್ತು. ಅವು ಬಿಳಿಯನನ್ನು ಎಂದೂ ಬೇರೆಯವರದು ಅಂದುಕೊಂಡಿರಲಿಲ್ಲ, ಅದು ತನ್ನ ಸ್ವತ್ತೇ ಅನ್ನುವ ರೀತಿ ಪ್ರೀತಿಸುತ್ತಿದ್ದ.
ಇತ್ತೀಚೆಗೆ "ರೇಶ ಬಿಳಿಯನನ್ನು ಸ್ವಲ್ಪ ಜಾಸ್ತಿಯೇ ಹಚ್ಚಿಕೊಂಡುಬಿಟ್ಟಿದ್ದ. ಬಿಳಿಯ ನನ್ನಂಗೆ ಇದಾನೆ. ಅ"ಗೂ ನನ್ಗೂ ಯಾವುದೇ ವ್ಯತ್ಯಾಸ ಇಲ್ಲ ಅನ್ನೋನು. ನಾ"ಬ್ರೂ ಒಂದೇ ರೀತಿ ಇದೀ". ನಾನು ಬೆಳ್ಳಗಿದೀನಿ ಅವೂ ಬೆಳ್ಳಗಿದಾನೆ. ನಾನು ಬೆಳಗ್ಗೆ ಸಾಲಿಗೆ ಹೋದೋನು ಸಾಯಂಕಾಲ ಬರ್‍ತೀನಿ. ಅವು ಕೂಡ ಮೇಯಲಿಕ್ಕೆ ಬೆಳಗ್ಗೆ ಹೋದೋನು ಸಾಯಂಕಾಲ ಬರ್‍ತಾನೆ. ಅವು ಸಾಯಂಕಾಲ ಬಂದು ಮನೆಯಲ್ಲೇ ಇರ್‍ತಾನೆ. ನಾನು ಕೂಡ ಹಾಗೇ ಮಾಡ್ತೀನಿ. ಇನ್ನು ಐತ್ವಾರ ನಾನು ಮತ್ತು ಬಿಳಿಯ ಇಬ್ರೂ ಸೇರಿ ಹೊಲಕ್ಕೆ ಹೋಗ್ತೀ". ಅವು ಮೇವು ತಿಂತಾನೆ. ನಾನು ಎಳನೀರು, ಅಡ" ಉಂಚಿಕಾ, ಸೀತಾಪತ್ಲೆ ಹಣ್ಣು "ಗೆ ತಿಂತೀ" ಅಂತ ಮಾತಾಡ್ತಿದ್ದ. ಅವು ಅದ್ರ ಜೊತೆ ಎಷ್ಟು ಬೆರೆತಿದ್ದನೆಂದ್ರೆ ನನ್ಗೆ ನಿದ್ರೆ ಬರಲ್ಲ ಅಂದ್ರೆ ಅ"ಗೂ ಕೂಡ ನಿದ್ರೆ ಬರಲ್ಲ, ನನ್ಗೆ ಜ್ವರ ಬಂದ್ರೆ ಅ"ಗೂ ಜ್ವರ ಬರುತ್ತೆ ಅಂತ "ಚಿತ್ರವಾಗಿ ಯೋಚಿಸ್ತಿದ್ದ.
ಬಿಳಿಯನನ್ನು ತಂದ ಹೊಸದ್ರಲ್ಲಿ.. "ರೇಶ ಅದನ್ನು ಮುಟ್ಟಲು ಹೋದಾಗ ಬಲವಾಗಿ ಗುದ್ದಿತ್ತು. ಅವತ್ತು ಅವು ಕೆಂಪು ಬಟ್ಟೆ ಹಾಕಿದ್ದ. ಬಿಳಿಯನಿಗೆ ಕೆಂಪು ಬಟ್ಟೆಂದ್ರೆ ಆಗಲ್ಲ.. ಅಂತ "ರೇಶನಿಗೆ ಆಮೇಲೆ ಹೇಳ್ದೆ. ಆ ದಿನದಿಂದ ಅವು ಬಿಳಿಯನಿಗೆ ಇಷ್ಟವಾಗದ ಕೆಂಪು ಬಟ್ಟೆ ಹಾಕೋದೇ ನಿಲ್ಲಿಸಿಬಿಟ್ಟ.
ಒಂದಿನ ನಾವೆಲ್ಲ ಸೇರಿ ಹೊಲದಲ್ಲಿ ಒಂದು ಕಾಡುಕೋಳಿಯನ್ನು "ಡಿದುಬಿಟ್ಟಿದ್ವಿ. ಅದನ್ನು ಹೊಲದಲ್ಲಿಯೇ ಬೇಸಿಕೊಂಡು ತಿಂದುಬಿಡಬೇಕ್ಲೆ ಅಂತ ಎಲ್ರೂ ತೀರ್ಮಾನಿಸಿ ಆಗಿತ್ತು. ಪುಣ್ಯಕ್ಕೆ ಆ ದಿನ "ರೇಶ ಹೊಲಕ್ಕೆ ಬಂದಿದ್ದಿಲ್ಲ. ಇಲ್ಲಂದ್ರೆ "ಪಾಪಲೇ ಅದು ನಮ್ಮಂಗೆ ಪ್ರಾಣಿಲೇ ಸಾಸಬಾರ್‍ದಲೇ" ಅಂತ ಬೊಗಳೆ ಬಿಡ್ತಿದ್ದ.
"ಲೇ ಅಂಬ್ರೇಶ ಬಾ..ಲೆ.." ಇಲ್ಲಿ ಎಂದು ಕರೆದ ನಮ್ಮಪ್ಪ "ಈ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಣ... ನಿಮ್ಮ ಫ್ರೆಂಡ್ಸೆಲ್ರನ್ನು ಕರಿ. ಆ ಸ್ವಾ" "ರೇಶನನ್ನು ಕರೀಬೇಡ" ಅಂತ ಹೇಳಿದ. ಆವಾಗ ನನ್ಗೆ ಸ್ವಲ್ಪ ನಮ್ಮಪ್ಪನ ಮೇಲೆ ಮುನಿಸಿಬಂದ್ರೂ ಸರಿಯಾಗಿ ಯೋಚಿಸಿದಾಗ ನಮ್ಮಪ್ಪ ಹೇಳಿದ್ದು ಸರಿ ಐತೆ ಎಂದು ಸುಮ್ಮನಾದೆ. ನಮ್ಮಪ್ಪ ಹೇಳಿದ ರೀತೀಲಿ ನಾನು ನಮ್ಮ ಪ್ರೆಂಡ್ಸೆಲ್ರಿಗೂ "ಸಾಲಿಗೆ ರಜಾ ಮಾಡಿ ಹುಲಿಗೆಮ್ಮ ದೇ"ಗೆ ಬರಬೇಕ್ಲೆ" ಅಂತ ಕರೆದಿದ್ದೆ. "ರೇಶನೊಬ್ಬನನ್ನು ಬಿಟ್ಟು.
ಪಾಪ.. ನಮ್ಮಪ್ಪ ಕರಿಬ್ಯಾಡ ಅಂತ ಹೇಳಿರೋ "ಷಯ "ರೇಶನಿಗೆ ಗೊತ್ತಿದ್ದಿಲ್ಲ. ಅಂಬ್ರೀಶ ಎಲ್ರಿಗೂ ದೇವ್ರು ಮಾಡ್ತಿದೀ" ಬರ್ರಿ ಅಂತ ಕರೆದಿದ್ದಾನೆ. ಆದ್ರೆ ನನ್ನನ್ನು ಮಾತ್ರ ಯಾಕೆ ಕರೆದಿಲ್ಲ, ಅಂಗ್ ಲೆಕ್ಕಾಕಿದ್ರೆ ಅವು ನನ್ನ ಮೊದ್ಲು ಕರಿಬೇಕು. ಯಾಕ್ "ಗ್ ಮಾಡ್ತಿದ್ದಾನೆ, ನನ್ನ ಮೇಲೆ ಮುನಿಸಿಕೊಂಡ್ನಾ ಅಥವಾ ನಾನೇದ್ರು ತಪು ಮಾಡಿದ್ನಾ ಅಂತ "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ. ಕೊನೆಗೆ ಅವು ಮನಸು ತಾಳೆಲಾರದೆ ನನ್ನನ್ನು ಎದ್ರು ನಿಂದ್ರಿಸಿ "ಯಾಕ್ಲೆ ಅಂಬ್ರೀಶ ಎಲ್ರಿಗೂ ಹುಲಿಗೆಮ್ಮ ದೇ"ಗೆ ಕರೆದು ನನ್ನನ್ನು ಮಾತ್ರ ಯಾಕ್ಲೆ ಕರೆದಿಲ್ಲ, ನಾನೂ ಬರ್‍ತೀನ್ಲೇ" ಅಂತ ಅತ್ತಗಂತ ಹೇಳ್ತಿದ್ರೆ ನನ್ಗೆ ಅವನನ್ನು ಬಿಟ್ಟು ಹೋಗ್ಲು ಮನಸಾಗಲಿಲ್ಲ. "ಆತು, ಆದ್ರೆ ಒಂದು "ಷಯ ನಿಮ್ಮನೇಲಿ ಒಪ್ಪಿದ್ರೆ ಮಾತ್ರ ಬಾ" ಅಂತ ಹೇಳ್ದೆ. ಆಯ್ತು... ಆಯ್ತು... ಅಂತ ಸಂತೋಷದಿಂದ ಅವು ಮನೆಗೆ ಓಡಿಹೋದ.
"ರೇಶ ಮನೇಲಿ ಈ "ಷಯ ತಿಳಿಸಿದಾಗ ಅವರಪ್ಪ ಅ"ಗೆ ಕಪಾಳಮೋಕ್ಷ ಮಾಡಿದ್ದ. "ಬರ್‌ಬರ್‍ತಾ ಆ ಕೇರಿ ಹುಡುಗರ ಜೊತಿ ಸೇರಿ ಹಾಳಾಗ್ತಿದ್ದಾನೆ, ಇನ್ನು ಮುಂದೆ ಅವ್ರ ಜತಿ ಇವನನ್ನು ಸೇರ್‍ಸ್‌ಬೇಡಿ" ಎಂದು ಬೈದ್‌ಬಿಟ್ಟಿದ್ದ. ಆಗಂತೂ ಅ"ಗೆ "ನಮ್ಮಪ್ಪನೇ ನನ್ಗೆ ದೊಡ್ಡ ಶತ್ರು ಆಗಿಬಿಟ್ಟಿದ್ದಾನೆ" ಅಂತ ಮನಸಲ್ಲೇ ಬೈಕಂಡ. ಅಲ್ಲಿಗೆ ಅವು ಹುಲಿಗೆಮ್ಮ ದೇ"ಗೆ ಹೋಗೋ "ಚಾರ ಕೈಬಿಟ್ಟ. ಆ ಕ್ಷಣದಲ್ಲಿ ಅ"ಗೆ 'ಬಿಳಿಯ' ನೆನಪಾದ. "ಓ! ಹುಲಿಗೆಮ್ಮ ದೇ"ಗೆ ಬಿಳಿಯನನ್ನು ಕೊಡ್ತೀ" ಅಂತ ಅಂಬ್ರೀಶ ಹೇಳಿದನಲ್ವಾ" ಅಂತ ನೆನಪಿಸಿಕೊಂಡು ಹೇಗಾದ್ರೂ ಮಾಡಿ ಇದನ್ನು ತಪ್ಪಿಸಬೇಕು ಅಂತ ನಿರ್ಧಾರ ಮಾಡ್ದ. ಮನೇಲಿ ಬೈಸಿಕೊಂಡ್ರೂ ಪರವಾಗಿಲ್ಲ.. ಇದಕ್ ನಾನ್ ಹೋಗ್ಲೇಬೇಕು, ಅದೇನಾಗುತ್ತೋ ಆಗ್ಲಿ.. ಅಂತ ಮನಸಲ್ಲಿ ಗಟ್ಟಿಮಾಡಿಕೊಂಡ. ಅ"ಗೆ ನಿಜವಾಗ್ಲೂ ಈ ಹುಲಿಗೆಮ್ಮ ದೇವ್ರು ಅಂದ್ರೆ ಏನು, ಏನು ಮಾಡ್ತಾರೆ ಅಂತ ಸರಿಯಾಗಿ ಗೊತ್ತಿದ್ದಿಲ್ಲ. ಅದನ್ನು ಇವ್ರು ಹ್ಯಾಗೆ ಆಚರಿಸ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲವೂ ಇತ್ತು. ಇ"ಗೆ ಗೊತ್ತಿದ್ದ ಒಂದು "ಷಯ ಅಂದ್ರೆ ತನ್ನ ಪ್ರೀತಿಯ ಬಿಳಿಯನನ್ನು ಅಂದು ದೇ"ಗೆ ಕೊಡೋದನ್ನು ತಪ್ಪಿಸೋದು.
ಕೊನೆಗೆ ಅಂದು ಶುಕ್ರವಾರ ಸಾಲಿಗೆ ಹೋದಂತೆ ಬುಕ್ ತಗಂಡು ನಮ್ಮ ಹಳ್ಳೀಂದ ೬ ಮೈಲು ದೂರ ಇರುವ ಹುಲಿಗೆಮ್ಮ ದೇವ್ರ ಹತ್ರ "ರೇಶ ಮತ್ತು ನನ್ನ ಫ್ರೆಂಡ್ಸೆಲ್ಲ ಸೇರಿಬಂದ್ರು. ಇದರಲ್ಲಿ "ರೇಶ ಬಂದಿದ್ದು ನನ್ಗೆ ಅಚ್ಚರಿ ತಂದಿತ್ತು. ಅವರಪ್ಪ ಅವನನ್ನು ಬೈದ "ಷಯ ನನ್ಗೆ ಗೊತ್ತಿತ್ತು. ಅದ್ಕೆ ಬಹುಶಃ ಅವು ದೇ"ಗೆ ಬರಲ್ಲ ಅಂತ ಅಂದುಕೊಂಡಿದ್ದೆ. ಆದ್ರೆ "ರೇಶ ಬರ್‍ತಿರೋದು ನೋಡಿ ನಮ್ಮಪ್ಪನಿಗೆ ಸಿಟ್ಟು ಬಂದುಬಿಡ್ತು. ನನ್ನನ್ನು ಇತ್ಲಾಗ ಕರೆದು "ಇವನನ್ನು ಯಾಕ್ ಕರಕಂಡ ಬಂದೀಲೇ, ಮೊದ್ಲೇ ಹೇಳಿದ್ದಿಲ್ಲ, ಇವನನ್ನು ಕರಕಂಡ್ ಬರಬೇಡ" ಅಂತ ಬೈದ್ರು. "ಇಲ್ಲಪ್ಪ ಎಲ್ಲರ ಜೊತೆ ಇವೂ ಬಂದಿದಾನೆ, ಇ"ಗೆ ಬೇರೆ ಅಡುಗೆ ಮಾಡ್ಸಿದ್ರಾತು. ಏನೂ ಆಗಲ್ಲಪ್ಪ.." ಅಂತ ಕೊನೆಗೂ ಸಮಾಧಾನ ಮಾಡಿಸಿದೆ.
ದೂರದಲ್ಲೇ ಅವನನ್ನು ನಿಂದ್ರಿಸಿ ಬೇರೆ ಕಡೆ ಕರೆದುಕೊಂಡು ಕುಂದ್ರಿಸಿದೆ. ಅಲ್ಲಿಗೆ ಬಂದ "ರೇಶನ ಮೊದಲ ಪ್ರಶ್ನೆ "ಇವತ್ತು ಬಿಳಿಯನನ್ನು ದೇ"ಗೆ ಕೊಟ್ಟುಬಿಡ್ತೀರಾ?" ಅನ್ನೋ ಮುಗ್ಧ ಪ್ರಶ್ನೆಗೆ ನಾನು ದಡಬಡಾಸ್ತಾ... "ಇಲ್ಲ...ಲೆ ಇಲ್ಲ... ಬಿಳಿಯನನ್ನು ದೇ"ಗೆ ಕೊಡಲ್ಲ. ನಮ್ಮ ದುರ್ಗದ ಮಾವ ಕರೆದುಕೊಂಡು ಹೋಗ್ತಾನೆ" ಅಂತ ಸುಳ್ಳು ಹೇಳ್ದೆ. ಆ ಕ್ಷಣ ಅ"ಗೆ ಮನಸು ಸ್ವಲ್ಪ ಸಮಾಧಾನ ಆಯ್ತು. ಆದ್ರೆ ಆಗ ಅವನಿಗೆ ನಿಜವಾಗಿಂi ಇಲ್ಲಿ ಏನೋ ಆಗ್ತಿದೆ, ಮನಸಲ್ಲಿ ಬರೀ ದ್ವಂದ್ವ. ನಾನು ಇಲ್ಲಿಗೆ ಬಂದು ತಪು ಮಾಡ್ತಿದೀನಾ? ಮನೇಲಿ ಬೈದ್ರೂ ನಾನು ಇಲ್ಲಿಗೆ ಬಂದಿದೀನಿ, ಇನ್ನು ಮನೆಗೋದ ಮೇಲೆ ಏನ್ ಕಾದಿದಿಯೋ ಎಂದು ಭಯಪಟ್ಟುಕೊಂಡ. ಇಲ್ಲಿ ಪರಿಸ್ಥಿತಿ ನೋಡಿದ್ರೆ ಒಂದು ರೀತಿ ಇದೆ, ಅಂಬ್ರೀಶ ನೋಡಿದ್ರೆ ಏನೋ ತಡವರಿಸ್ತಿದ್ದಾನೆ... ನನಗೊಂದೂ ತಿಳಿತಿಲ್ಲ. ಸದ್ಯ ಬಿಳಿಯನನ್ನು ದೇ"ಗೆ ಕೊಡದಿಲ್ವಲ್ಲ ಅಂತ ತುಸು ಸಮಾಧಾನಗೊಂಡ.
ಆಗ ಕಾಣ್ಸಿತು ನೋಡಿ "ರೇಶನ ಪ್ರೀತಿಯ 'ಬಿಳಿಯ'. ಇಡೀ ಜನರ ಗುಂಪಿನ ಮಧ್ಯ ತಾನೇ ಮುಖ್ಯಸ್ಥ ಎನ್ನುವಂತೆ ಅಕ್ಕಡಿಕ್ಕಡಿಗೆ ನೋಡ್ತಾ, ನಾನೇ ಇವರಿಗೆಲ್ಲ ಮುಂದಾಳು ಎಂಬ ಠೀ"ಯಲ್ಲಿ ಬಿಳಿಯ ನಡೀತಿದ್ರೆ ರಾಜ ಗಾಂಬಿsರ್ಯ ಹಾಗೇ ಹುಟ್ಟಿಬರ್‍ತಿತ್ತು, ತಾನು ಆಕಾಶದ ಮೇಲೆ ನಡೆಯುತ್ತಿದ್ದೆನೇನೋ ಅನ್ನೋ ರೀತೀಲಿ ನಡಿತಿದ್ದ. ಅವನ ಹಣೆಯ ಮೇಲಿನ ತಿಲಕ, ದೊಡ್ಡ ಹೂ"ನ ಹಾರದ ಮಧ್ಯ ನವವಧು"ನಂತೆ ಕಾಣ್ತಿದ್ದ. ಅವತ್ತು ನಿಜವಾಗ್ಲೂ ತುಂಬ ಸುಂದರವಾಗಿ ಸಿಂಗಾರಗೊಂಡಿದ್ದ ಬಿಳಿಯ. ಬಿಳಿಯನಿಗೆ ಅಲ್ಲಿ ನೆರೆದಿದ್ದ ಹೆಂಗಸ್ರು ದೀಪ ಬೆಳಗ್ತಿದ್ರೆ "ರೇಶನಿಗೆ ಅತೀವ ಸಂತಸ. ಅಲ್ಲೇ ಕುಡಿದಾಡ್ಲೇನಪ್ಪ ಅನ್ನುವಷ್ಟು ಸಂತಸ. ಇದನ್ನೆಲ್ಲ ನೋಡಲು "ರೇಶನಿಗೆ ಎರಡು ಕಣ್ಣು ಸಾಲದು ಅನ್ನೋ ಹಾಗೆ ಕಣ್ಣುರೆಪ್ಪೆ "ಟುಕಿಸ್ದೆ ನೋಡ್ತಿದ್ದ. ಅಷ್ಟು ಸಂತೋಷದಿಂದ ಇದ್ದ "ರೇಶನನ್ನು ನೋಡಿ ನನ್ಗೆ ಒಂದು ಕ್ಷಣ ಕಳ್ಳು ಚುರುಕ್ ಅಂತು.
ಇದನ್ನೆಲ್ಲ ನೋಡ್ತಾ "ಓಹೋ.. ಇದೇನಾ ಹುಲಿಗೆಮ್ಮ ದೇವ್ರು ಮಾಡೋದು ಅಂದ್ರೆ, ನೀವೇನ್ ದೇ"ಗೆ ಕೊಡದಿಲ್ವಲ್ಲ.. ಗುಡಿಗೆ ಕರಕಂಡ ಬಂದು ಪೂಜೆ ಮಾಡೋದು ಅಷ್ಟೆ ತಾನೆ..." ಎಂದು "ರೇಶ ಸಂತಸಪಟ್ಟ. ಇದಕ್ಕೆ ನನ್ನ ಉತ್ತರ "ಉಂ... ಉಂ..." ಎಂದು ಮಾತ್ರ ಉಸುರುತ್ತಿದ್ದೆ. "ನಾ ಬಾಂದ ಬೇರಾವ ಮಾತುಗಳು ಹೊರಬರುತ್ತಿರಲಿಲ್ಲ. ನಾನು ಮನೆಯವರ ಎದ್ರು ಹಾಕಿಕೊಂಡು, ಸಾಲಿ ಬಿಟ್ಟು ಇಲ್ಲಿಗೆ ಬಂದಿದ್ದು ಸಾರ್ಥಕವಾತು ಎಂದು "ರೇಶ ತನ್ನನ್ನು ತಾನು ಸಮರ್ಥಿಸಿಕೊಂಡ. ಬಿಳಿಯನಿಗೆ ಹೂ"ನಹಾರ ಹಾಕಿ ಮಾಡ್ದ ಮೆರವಣಿಗೆ ತನ್ನನ್ನೇ ಮೆರವಣಿಗೆ ಮಾಡ್ದ ಹಾಗಿತ್ತು. ಅವು ಕನಸಲ್ಲಿ ತಾನು ಮತ್ತು ಬಿಳಿಯ ಆಕಾಶದಲ್ಲಿ ತೇಲಾಡಿದ ಹಾಗಿತ್ತು ಅಲ್ಲಿಯ ವಾತಾವರಣ.
ಅಂದು ಮಧ್ಯಾಹ್ನ ಅಲ್ಲಿಗೆ ಬಂದಿದ್ದ ಊರಿನ ಜನರೆಲ್ರೂ ಊಟ ಮಾಡಿದ್ರು. ನಾನು ಮತ್ತು "ರೇಶ ಮಾತ್ರ ಊಟದ ಜಾಗದಿಂದ ಸ್ವಲ್ಪ ದೂರದಲ್ಲಿ ಬೇರೆ ಅಡುಗೆ ಮಾಡಿಸಿದ ಉಗ್ಗಿ, ಅನ್ನ, ಸಾರು, ಪಲ್ಯೆ ಊಟ ಮಾಡಿದ್ವು. ಊಟ ತುಂಬಾ ಚೆನ್ನಾಗಿತ್ತು. ಅವ್ನ ಜೊತೆ ನಾನೂ ಊಟ ಮಾಡ್ದೆ. ಮಾಡ್ತಾ ಮಾಡ್ತಾ ಆಗಾಗ ನನ್ನ ಕಣ್ಣೀರ ಒಂದೊಂದೆ ಹನಿ ಬಾಳೆದೆಲೆ ಮೇಲೆ ಬೀಳುತ್ತಿದ್ದನ್ನು ಕಂಡ "ರೇಶ "ಯಾಕ್ಲೆ.. ಅಂಬ್ರೀಶ ಅಳ್ತೀ, ಸು"ರು, ಊಟ ಮಾಡೋ ಟೈಮಲ್ಲಿ ಯಾಕ್ಲೆ ಅಳ್ತಿ, ನಾನು ಇವತ್ತು ಬಂದಾಗಿಂದ ನೋಡ್ತಿದ್ದೀನಿ ಯಾಕೋ ನೀನು ಸರಿಲ್ಲ. ಒಂಥರ ಇದೀ... ನಮ್ಮ ಬಿಳಿಯನನ್ನು ನೋಡು, ಇವತ್ತು ರಾಜ ರಾಜದ್ದಿಂಗ ಇದಾನೆ, ಅವನನ್ನು ನೋಡಿ ಖುಪಡು" ಎಂದು ಸಮಾಧಾನ ಮಾಡ್ದ. ಬಹುಶಃ ಅವತ್ತೇ ಅವು ಅಷ್ಟು ಖುಂದಿದ್ದದ್ದು.
ಊಟವಾದ ಮೇಲೆ ಎಲ್ರೂ ಆಟವಾಡಿದೆವು. ಲಗೋರಿ ಆಟ ಆಡಬೇಕಾದ್ರೆ ಸ್ವಲ್ಪ ದೂರದ ತೆಂಗಿನ ಮರದ ಹತ್ತಿರ ಚೆಂಡು ಹೋಗಿ ಬಿತ್ತು. ಅದನ್ನು ತರ್‍ಲು ಹೋದ "ರೇಶನಿಗೆ ಅಲ್ಲಿ ಟಗರಿನ ರಾಶಿ ರಾಶಿ ಬಿಳಿ ಕೂದಲು ಕಾಣ್ಸಿತು. ಆ ಕೂದಲನ್ನು ನೋಡ್ತಾ 'ಇದು ನಮ್ಮ ಬಿಳಿಯನ ಕೂದಲು ಅಲ್ವಾ?' ಅಂತ ನನ್ನನ್ನು ಪ್ರಶ್ನಿಸಿದಾಗ ಎದೆ ದಸಕ್ಕೆಂದು 'ಅಲ್ಲಲೆ ಇದು ಬೇರೇ ಟಗರಿಂದು ಇರಬೇಕು, ನಮ್ಮ ಬಿಳಿಯಂದಲ್ಲ...' ಅಂತ ಮರೆಸುವ ಪ್ರಯತ್ನ ಮಾಡಿದೆ. ಆಗಂತೂ ಅವು ಕೂಡ್ಲೆ ಲಗೋರಿ ಆಟ ಆಡೋದು ಬಿಟ್ಟು "ಇಲ್ಲ. ಅವನನ್ನು ನಾನು ನೋಡಬೇಕು, ನಾನೇ ಅವನನ್ನು ಸಾಕ್ತಿನಿ, ಅದೆಷ್ಟು ದುಡ್ಡು ಕೊಡಬೇಕೋ ಅಷ್ಟು ದುಡ್ಡು ನಮ್ಮಪ್ಪನಿಂದ ಇಸ್‌ಕೊಡ್ಸಿತ್ತೀನಿ ನನಗೆ ಕೊಟ್ಟುಬಿಡ್ರೋ..." ಎಂದು ಪರಿಪರಿಯಾಗಿ ನನ್ನನ್ನು ಬೇಡಿಕೊಂಡ. ಹೇಗೋ ತಿಂಗಳಿಗೊಮ್ಮೆಯಾದ್ರೆ ನಾವು ಬಿಳಿಯನನ್ನು ನೋಡೋಕೆ ಹೋಗೋಣ ಅಂದಿದ್ದಕ್ಕೆ ಸ್ವಲ್ಪ ಸಮಾಧಾನಗೊಂಡಿದ್ದ. ಆ ದಿನ ಸಾಯಂಕಾಲ ಎಲ್ರೂ ಮನೆಗೆ "ಂತಿರುಗಿದೆವು.
ನಾನು ನಮ್ಮಪ್ಪನಿಗೆ ಎಷ್ಟು ಪರಿಪರಿಯಾಗಿ ಕೇಳಿಕೊಂಡ್ರು ಬಿಳಿಯನನ್ನು ಹುಲಿಗೆಮ್ಮ ದೇ"ಗೆ ಬಲಿಕೊಡೋದು ಬ್ಯಾಡ ಅಂತಂದ್ರೂ ಬಿಡಲಿಲ್ಲ. ಈ "ಷಯ "ರೇಶನಿಗೆ ತಿಳಿದ್ರೆ ಅವನೆಲ್ಲಿ ನನ್ನ ಜೊತೆ ಮಾತಾಡೋದು ಬಿಟ್ಟುಬಿಡ್ತಾನೆ ಏನೋ ಅನ್ನೋ ಒಂದೇ ಕಾರಣಕ್ಕೆ ನಾನು ಬಿಳಿಯನನ್ನು ನಮ್ಮ ಮಾವ ಕರಕಂಡು ಹೋದ್ರು ಅಂತ ಸುಳ್ಳು ಹೇಳಿದ್ದೆ.
ಒಂದು ವಾರ ಕಳೆದಿತ್ತು. ಆಗ್ಲೆ "ರೇಶನ ಕಾಟ ನನಗೆ ಜಾಸ್ತಿಯಾಗಿತ್ತು. ಬಿಳಿಯನನ್ನು ನೋಡಲು ಯಾವತ್ತು ಹೋಗಣ, ಇಂಥ ದಿನ ಹೋಗಣ.... ಈ ಐತ್ವಾರ ಹೋಗಣ.. ಅಂತ ಮೇಲಿಂದ ಮೇಲೆ ನನ್ನ ತಲೆ ತಿಂತಿದ್ದ. ಸಾಲಿಗೆ ರಜಾ ದಿನ ಬಂದ್ರೆ ಸಾಕು ನಾನು "ರೇಶನಿಗೆ ಕಾಣದೆ ಹಾಗೆ ಬಚ್ಚಿಕೊಳ್ಳುತ್ತಿದ್ದೆ... ಮನೇಲಿ ನಾನಿದ್ರೂ... ಇಲ್ಲ.. ಎಂದು ಮನೆಯವರು ಹೇಳಿಕಳಿಸ್ತಿದ್ರು. ಇವನಿಗೆ 'ಇರುವ' "ಷಯವನ್ನು ಹೇಗೆ ಹೇಳೋದು ಅನ್ನೋದೆ ನನ್ಗೆ ಯಕ್ಷಪ್ರಶ್ನೆಯಾಗಿತ್ತು.
ಒಂದು ಸೋಮವಾರ ಸಂತೇಲಿ ಹುಲಿಗೆಮ್ಮ ದೇ"ಗೆ ಬಂದ ಜನ ಮಾತಾಡ್ತಾ ನಾಗೇಶಪ್ಪ ಹುಲಿಗೆಮ್ಮ ದೇವ್ರ ಊಟ ತುಂಬಾ ಚೆನ್ನಾಗಿತ್ತು. ಆ ಬಿಳಿ ಟಗರು ನಲವತ್ತೈದು ಕೆ.ಜಿ. ಬಂತಂತೆ, ಅದನ್ನು ತುಂಬಾ ಚೆನ್ನಾಗಿ ಮೇಸಿದ್ರೂಂತ ಕಾಣುತ್ತೆ ಇಡೀ ಊರಿಗೆ ಸಾಕಾಗುವಷ್ಟರಮಟ್ಟಿಗೆ ಚೆನ್ನಾಗಿ ತಿಂದ್ರು ಅಂತ ಮಾತಾಡಿಕೊಳ್ಳುತ್ತಿದ್ರು. ಇದನ್ನು ಕೇಳಿದಕೂಡ್ಲೆ "ರೇಶನಿಗೆ ದೀಗ್ಬ್ನ್ರಮೆ. ಆಗ ಅ"ಗೆ ತಲೆಗೆ ಆಕಾಶನೇ ಕಳಚಿಬಿದ್ದ ಅನುಭವ.
ಅಷ್ಟೆ, ಎಚ್ಚರವಾಗಿ ನೋಡ್ತಾನೆ, ಅವು ಮನೆಯಲ್ಲಿ ಇದಾನೆ. ಅವ್ರಪ್ಪ "ಇದ್ದಕ್ಕಿದ್ದ ಹಾಗೆ ಸಂತೇಲಿ ತಿರುಗಿಬಿದ್ದುಬಿಟ್ಟೆಯಂತೆ ಯಾಕ್ಲೆ "ರೇಶ ಎಂದು ಕೇಳ್ದಾಗ, ಅವು ಮರು ಉತ್ತರಿಸದೆ "ಅಪ್ಪ.. ಅಪ್ಪಾ... ಬಿಳಿಯನನ್ನು ಸಾಸಿದ್ರಂತೆ ಹೌದಾ" ಅಂತ ಪ್ರಶ್ನೆ ಮಾಡ್ದ. 'ಹೌದಪ್ಪ', ಅದಕ್ಕೇ ನಾನು ಹೇಳಿದ್ದು ಆ ರೀತಿ ದೇವ್ರು ಮಾಡೋ ಕಡೆಗೆಲ್ಲ ನೀನು ಹೋಗಬಾರದೆಂದು. ಅಂದ್ರೆ ಅದನ್ನು ಸಾಸಿ ಅಲ್ಲಿಗೆ ಬಂದ ಜನ ಎಲ್ರೂ ನನ್ನ ಬಿಳಿಯನನ್ನು ತಿಂದ್ರಾ? ಅಂತ ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತಿದ್ರೆ ಅವ್ನ ಎಲ್ಲ ಪ್ರಶ್ನೆಗಳಿಗೆ ಅವ್ರಪ್ಪ "ಹೌದು", "ಉಂ.. ಉಂ.." ಅನ್ನುವ ಉತ್ತರ ಮಾತ್ರ ಬರ್‍ತಿತ್ತು. ಅವ್ನ ಎಲ್ಲ ಪ್ರಶ್ನೆಗಳಿಗೆ ಸುಮ್ಮನೆ ತಲೆ ಅಲ್ಲಾಡಿಸುತ್ತಿದ್ದ ಅವ್ರಪ್ಪ. ಆಗಂತೂ ಅ"ಗೆ ಮತ್ತೊಮ್ಮೆ ದಿಗ್ಬ್ನ್ರಮೆ. ನಾನು ಈಗ ಕೇಳ್ತಿರೋ "ಷಯ ಕನಸು ಇರಬಹುದಾ ಎಂಬ ಆಶಾಭಾವನೆಂದ ತನ್ನನ್ನು ತಾನು ಜೋರಾಗಿ ಕಪಾಳಕ್ಕೆ ಒಡಕಂಡ. ತನ್ನ ಮಾರಿ ಕೆಂಪಾಯ್ತು... ಇಲ್ಲ... ಇಲ್ಲ... ಇದು ಕನಸಲ್ಲ... ನನ್ನ ಬಿಳಿಯನನ್ನು ಸಾಸಿಬಿಟ್ರಾ.... ತುಂಡ್‌ತುಂಡ್ ಮಾಡಿ ತಿಂದುಬಿಟ್ರಾ... ಅಂತ ಜೋರಾಗಿ ಕೂಗಿಕೊಂಡ, ಏದುಸಿರಿನಿಂದ ಅಪ್ಪಾ..ಪ್ಪಾ... ಬಿಳಿಯನನ್ನು ಕೊಲ್ಲಬೇಕು ಅಂತ ಯಾಕ್ ಅನಸ್ತಪ್ಪಾ... ಅವನನ್ನು ನೋಡಿದ್ರೆ ನನ್ನ ತಮ್ಮ ಇದ್ದಂಗೆ ಇದಾನೆ ಅಂತ ಅವರಿಗೇಕೆ ಅನಿಸಲಿಲ್ಲಪ್ಪಾ..... ಅವ್ರು ನನ್ನ ಬಿಳಿಯನನ್ನು ತಿಂದ್ರಾ... ಅಥವಾ ನನ್ನನ್ನೇ ತಿಂದ್ರಾ... ಎಂದರಚುತ್ತಾ.... ಅಳ್ತಾ....ಅಳ್ತಾ... ಎಚ್ಚರತಪ್ಪಿ ಮತ್ತೆ ಬಿದ್ದುಬಿಟ್ಟ.
* * *
ಅಂದಿನಿಂದ "ರೇಶ ಯಾರ ಹತ್ರಾನೂ ಜಾಸ್ತಿ ಮಾತಾಡ್ತಿದ್ದಿಲ್ಲ. ಸದಾ ಒಬ್ಬನೇ ಮಂಕಾಗಿರುತ್ತಿದ್ದ. ಬರೀ ಮನಸಲ್ಲೇ ಮಾತಾಡಿಕೊಳ್ಳುತ್ತಿದ್ದ. ಅ"ಗೆ ತನ್ನ ಪ್ರೀತಿಯ ಬಿಳಿಯನನ್ನು ತಿಂದ ಜನರನ್ನು ದುರುಗುಟ್ಟಿ ನೋಡ್ತಿದ್ದ. ಆ ಜನ್ರ ಎದ್ರು ನಿಂತು ಅವ್ರ ಹೊಟ್ಟೆ ನೋಡ್ತಿದ್ದ, ಅವ್ರ ಬಾ ನೋಡ್ತಿದ್ದ. ಇವರೆಲ್ಲ ಮನುಷ್ಯರಾ ಅಂತ ಮನಸಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದ. ತಿಂದೋರಿಗೆಲ್ಲ "ಡಿ ಶಾಪ ಹಾಕ್ತಿದ್ದ. ಇವರೆಲ್ಲ ನನ್ನ ಬಿಳಿಯನನ್ನು ತಿಂದುಬಿಟ್ರಾ, ಈ ಸಮಾಜದಲ್ಲಿ ತಾನು ಹುಚ್ಚನೋ ಇಲ್ವೆ, ಜನ ಹುಚ್ರೋ ಅನ್ನೋ ರೀತಿ ನೋಡ್ತಿದ್ದ. ಇ"ಗೆ ತಿನ್ನಾಕ ಬೇರೇ ಏನೂ ಸಿಗಲಿಲ್ವಾ.... ನನ್ನ ಬಿಳಿಯನೇ ಬೇಕಾಗಿದ್ನಾ.. ಅಂತ ನೊಂದುಕೊಂಡ.
ಈ ಮುದಿಯ ನನ್ನ ಬಿಳಿಯನ ಚೆಂದನೆಯ ಕಾಲು ತಿಂದ್ನಾ? ಈ ದಾಂಡಿಗ ನನ್ನ ಬಿಳಿಯನ ಸುಂದರ ಮುಖವನ್ನು ತಿಂದ್ನಾ? ಈ ಕುಂಟ ನನ್ನ ಬಿಳಿಯನ ತೊಡೆ ತಿಂದ್ನಾ? ಈ ಹೆಣ್ಮಗ್ಳು ನನ್ನ ಬಿಳಿಯನ ಹೊಟ್ಟೆ ತಿಂದ್ಳಾ? ಅಂತ ಮನದಲ್ಲೇ ಬೈದುಕೊಳ್ತಿದ್ದ. ನನ್ನ ತಂದೆಯನ್ನು ನೋಡಿದಾಗ್ಲಂತೂ ಹಲ್ಲು ಕಡಿತಾ.. ಒಳ್ಳೆ "ಲನ್ ರೀತಿ ನೋಡ್ತಿದ್ದ. ಕೊನೆಪಕ್ಷ ತನ್ನ ಪ್ರೀತಿಯ ಬಿಳಿಯನ ಸಮಾದಿs ಮಾಡಲು ಈ ಜನ ಅನುವು ಮಾಡಿಕೊಡಲಿಲ್ಲ ಅಂತ ನೊಂದುಕೊಂಡ. ಅಂದಿನಿಂದ ಇಂದಿನವರೆಗೂ ಅವನ ವರ್ತನೆ "ಗೇ ಇದೆ. ಅವು ಜನರನ್ನು ನೋಡುವ ರೀತಿ ಪ್ರಶ್ನಾರ್ಹವಾಗಿದೆ. ಸದಾ ಒಂಟಿಯಾಗಿರುತ್ತಾನೆ. ನನ್ನನ್ನು ಮತ್ತು ನನ್ನ ಫ್ರೆಂಡ್ರೆಲ್ಲ ಮಾತಾಡಿಸೋದು ಬಿಟ್ಟು ಎಷ್ಟೋ ತಿಂಗಳಾಗಿ ಹೋಗಿತ್ತು.
ಕೊನೆಗೆ ಎಲ್ಲೋ, ಯಾರೋ ಮಹಾನುಭಾವ "ಪ್ರಕೃತಿಯ ನಿಯಮ ಇರೋದೆ "ಗೆ. ಒಬ್ಬರನ್ನು ಸಾಸಿ ಇನ್ನೊಬ್ಬರು ಜೀ"ಸುವುದೇ ಬದುಕು, ಒಬ್ಬರನ್ನು ಸಾಸದಿದ್ದರೆ ಇನ್ನೊಬ್ಬ ಬಂದು ನನ್ನ ಸಾಸುತ್ತಾನೆ ಇಲ್ಲವೇ ಹಸಿ"ನಿಂದ ಸಾಯುತ್ತಾನೆ, ಒಂದು ಪ್ರಾಣಿಯನ್ನು ಸಾಸಿ ಇನ್ನೊಂದು ಪ್ರಾಣಿ ಬದುಕುವುದೆ ಪ್ರಕೃತಿಯ ನೀತಿ" ಎಂದು ತಿಳಿಹೇಳಿದಾಗ್ಲೂ "ರೇಶ ಮಾತ್ರ ಬದಲಾಗಲಿಲ್ಲ. ಹಾಗೇ ಮಂಕಾಗಿಹೋದ.
"ನಾನು ಪ್ರಪಂಚದಲ್ಲಿ ಬದುಕಿದ್ದು ಸತ್ತ ಪ್ರಾಣಿಯಂತೆ. ನನ್ನ ಬಿಳಿಯನನ್ನು ಈ ಊರಿನ ಜನರೆಲ್ಲ ಸಾಸಿದ್ದಾರೆ. ಅಂದ್ರೆ ನನ್ನನ್ನೇ ಇವರೆಲ್ಲ ಸಾಸಿ ತಿಂದುಬಿಟ್ರಾ?" ಎಂದು "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ...
ಅ"ಗೆ ಉತ್ತರ ಸಿಕ್ಕೀತಾ..... ಗೊತ್ತಾಗ್ಲಿಲ್ಲ.....

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2