Friday, October 31, 2008

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು.

ಬಿಳಿಯ.....

ಇಳಿ ಸಂಜೆ ಹೊತ್ತಲ್ಲಿ ಕಡ್ಡಿ "ರೇಶ ಸುಮ್ನೆ ಅಂಗಾತ ಮಲಗಿ ಇಳಿ ಸೂರ್ಯನಿಗೆ ಮೈಒಡ್ಡಿ ಒಬ್ನೇ ದೀರ್ಘ ಆಲೋಚನೆಯಲ್ಲಿದ್ದ. ಬಹಳ ಅರ್ಜೆಂಟಲ್ಲಿದ್ದ ಇಳಿಸೂರ್ಯನಿಗೆ ಬೇಗ ಗೂಡು ಸೇರುವ ತವಕ. ಆದ್ರೆ ತನ್ನ ಒಳಮಾತನ್ನ ಕೇಳದೇ ಹೋಗ್ತಿದ್ದಾನಲ್ಲಾ ಅನ್ನೋ ಮುನಿಸು ಕಡ್ಡಿ "ರೇಶನದು. ಪ್ರತಿದಿನದ ಇಳಿ ಸಂಜೆ ಹೊತ್ತು "ರೇಶ ಸಮಯ ಕಳೀತಿದ್ದು ಇದೇ ರೀತಿ. ಅದು ಒಬ್ನೇ. ಇತ್ತೀಚೆಗೆ ಅವ್ನ ದೋಸ್ತ್‌ರನ್ನೆಲ್ಲ ದೂರ ಮಾಡಿಕೊಂಡು ಕೆರೆ ದಂಡೇಲಿ ಬಂದು ಒಬ್ನೇ ಕೂತು ಬಿಡ್ತಿದ್ದ.
ಲೇ ಕಡ್ಡಿ "ರೇಶ, ಏನ್ಲೇ ಯಾರಿಗೂ ಹೇಳ್ದೆ ಕೇಳ್ದೇ ಇಲ್ಲಿ ಒಬ್ನೇ ಬಂದು ಕೂತಿದಿ ಅಂತ ಫ್ರೆಂಡ್ಸು ಅಂಜಿನಿ, ನಾಗಪ್ಪ ಮಾತಿಗೆಳೆದರೆ... ಅವರನ್ನೆಲ್ಲ ದುರುಗುಟ್ಟಿ ನೋಡೋನು. ಏನಾದ್ರೂ ಮಾತಾಡ್ಲೆ.. ಯಾಕ್ಲೆ? ಯಾರಾದ್ರು ಏನಾದ್ರೂ ಬೈದ್ರಾ? ನಿಮ್ಮಪ್ಪ ಹೊಡ್ದನಾ? ಅಂತ ಪ್ರಶ್ನೆ ಮಾಡಿದ್ರೆ ಇವು 'ಏನೂ ಇಲ್ಲಲೇ' ಅನ್ನೋ ರೀತಿ ತಲೆ ಅಲ್ಲಾಡಿಸ್ತಾ ತಿರುಗಿ ಮಕ ನೋಡ್ದೆ ಎದ್ದೋದ.
ಇವನಿಗೇನು ಆಗಿದೆ, ಒಂದೆ ಸಮನೆ ನಾವು ಮಾತಿಗೆಳೆದರೆ ಇ"ಂದ ಒಂದು ಮಾತೂ ಇಲ್ಲ. ನಾವೇನು ಅಂತ ತಪು ಮಾಡಿದೀ" ಅಂತ ಅವ್ನ ಫ್ರೆಂಡ್ಸ್ ಪ್ರಶ್ನೆ ಮಾಡಿಕೊಂಡ್ರು. ಅಸಲು ಯಾಕೆ ಇವು "ಗಾಡ್‌ತಿದ್ದಾನೆ. ತುಂಬಾ ಮಂಕಾಗಿ ಕಾಣ್ತಿದ್ದಾನೆ. ಇವು ಮೊದ್ಲಿಗಿದ್ದ ಉತ್ಸಾಹ ಈಗ ಇಲ್ಲೇ ಇಲ್ಲ. ಪಟಪಟಾ ಅಂತ ಮಾತಾಡೋ "ರೇಶ ಈಗ ಮಂಕಾಗಿದ್ದಾನಲ್ಲ. 'ಲೇ ಕಡ್ಡಿ "ರ' ಅಂದ್ರೆ ಸಾಕು ಸಿರ್‌ರ್... ಎಂದು ಜಗಳಕ್ಕೆ ಬೀಳೋನು, ಎದುರಿನವರನ್ನು "ಯಾಳಿಸೋನು, ಈಗ ಏನೇ ಬೈದ್ರೂ ತಲೆ ಅಲ್ಲಾಡಿಸ್ತಾ, ಯಾವುದೋ ಲೋಕದಲ್ಲಿರೋ ರೀತಿ ಇರ್‍ತಾನೆ. ತನ್ಗೂ ಈ ಜಗತ್ತಿಗೂ ಸಂಬಂಧ"ಲ್ಲವೇನೋ ಅನ್ನೋ ರೀತಿ ಇರ್‍ತಾನೆ. ನಮ್ಗಂತೂ ಇವನನ್ನು ಈ ಸ್ಥಿತೀಲಿ ನೋಡೋದು ತುಂಬಾ ಹೆದ್ರಿಕೆಯಾಗ್ತಿತ್ತು.
ಇಂಥ ಪರಿಸ್ಥಿತೀಲಿ "ರೇಶನ ಅಮ್ಮ "ನೋಡಪಾ ಅಂಬ್ರೇಶ... ನೀನಾದ್ರೂ ಸ್ವಲ್ಪ ಅ"ಗೆ ಬುದ್ದಿ ಹೇಳು, ಅ"ಗೆ ನಾವು ಯಾವತ್ತೂ ಹೊಡ್ದೋರು ಅಲ್ಲ, ಬಡ್ದೋರು ಅಲ್ಲ, ಮನೇಲಿ ಪಟಪಟಾಂತ ಮಾತಾಡ್ತಾ, ಎಲ್ರನ್ನು ನಗುಸ್ತಾ ಇರೋನು ಈಗ ಬಾಂದ ಮಾತು ಬರೋದು ಅಂದ್ರೆ ಮುತ್ತು ಸುರಿತಾವೆ ಅನ್ನೋ ಹಾಗೆ ಮಾಡ್ತಾನೆ. ಒಳಗೊಳಗೆ ಅಳ್ತಾನೆ, ಅತ್ತು ಅತ್ತು ಮಕ ನೋಡು ಎಷ್ಟು ದದ್ರಿಸಿಬಿಟ್ಟಿದೆ. ಅವು ಈ ರೀತಿ ಮಂಕಾಗಿಬಿಟ್ರೆ ನಾವೇನು ಅನಕಬೇಕು. ಸ್ವಲ್ಪ ನೀನೇ ಅ"ಗೆ ತಿಳಿಹೇಳ್‌ಬೇಕಪ್ಪ. ಎಷ್ಟೇ ಆದ್ರೂ ನೀನೇ ಅವ್ನ ಜಿಗಿರಿ ದೋಸ್ತ್. ನಮ್ಮತ್ರ ಅಲ್ಲದಿದ್ದರೂ ನಿಮ್ಮತ್ರ ಹೇಳಿಕೊಳ್ಳಲಿ" ಅಂತ ಅಳಕಂತ ಹೇಳ್ತಿದ್ರೆ ನಾನು ಮತ್ತು ನನ್ನ ಫ್ರೆಂಡ್ಸ್‌ಲ್ಲ ಅಲ್ಲಿ ನಿಲ್ಲೋ ಧೈರ್ಯ ಮಾಡಲಾರದೆ ಕಾಲ್ಕಿತ್ತೆವು.
"ರೇಶ ನಿಜವಾಗಿಯೂ ಒಬ್ಬ ಚಟಪಟಾಕಿ ಹುಡ್ಗ. ಏಳನೇ ಕ್ಲಾಸಲ್ಲಿ ಫಸ್ಟ್ ಬಂದಿದ್ದ. ಮೇಲಾಗಿ ಅವು ನಾನು ತುಂಬಾ ಕ್ಲೋಸ್ ಫ್ರೆಂಡ್ಸ್. "ರೇಶ ನನ್ನ ದೋಸ್ತ್ ಅನ್ನೋದೇ ದೊಡ್ಡ ಹೆಮ್ಮೆಯಾಗಿತ್ತು. ಹೋದ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಿದಾಗಿನಿಂದ ನೋಡ್ತಿದೀನಿ ಇವನ ಮನ್ಸು ಯಾಕೋ ಸರಿಲ್ಲ. ಸರಿಯಾಗಿ ಸಾಲಿಗೂ ಬರ್‍ತಿಲ್ಲ, ಪರೀಕ್ಷೆ ಹತ್ರ ಬರ್‍ತಿದ್ರೂ ಪುಸ್ತಕ ಮುಟ್ಟುತ್ತಿಲ್ಲ. ನಮಗೆಲ್ಲ 'ಓದ್ರಿಲೇ' ಅಂತ ಬಡಕೊಳ್ಳೋನು ಸರಿಯಾಗಿ ಮಾತೇ ಆಡ್ತಿಲ್ಲ ಅಂದ್ರೆ ಏನರ್ಥ. ಅವನಿಗೇನಾದ್ರೂ ಮಾಟ ಗೀಟ ಮಾಡಿಸಿಬಿಟ್ಟರಾ?
ನಮ್ಮ "ರೇಶ ಐನೋರೋನು ಅಂತ ನಮಗೆಲ್ಲ ಯಾವತ್ತೂ ಅನಿಸೇ ಇದ್ದಿಲ್ಲ. ನಮ್ಮ ಇಡೀ ಫ್ರೆಂಡ್ಸಲ್ಲಿ ಇವನೊಬ್ಬನೇ ಸ್ವಾ". ಅವು ದಿನವೂ ನಮ್ಮ ಕೇರಿ ಫ್ರೆಂಡ್ಸ್ ಮನೇಲಿ ಆಟ ಆಡೋನು, ಊಟ ಮಾಡೋನು, ಮಲಗೋನು. ಈ "ಷಯದಲ್ಲಿ "ರೇಶನ ಅಮ್ಮ ಅಂಥ ಸಣ್ಣ ಜಾತಿಯವರ ಮನೇಲಿ ಊಟ, ನಿದ್ದೆ ಮಾಡಬಾರ್‍ದು ಅಂತ ಆಗಾಗ ಬೈತಿದ್ಲು. ಅವೊ ಅದನ್ನೆಲ್ಲ ಲೆಕ್ಕಕ್ಕೆ ಹಾಕ್ಕೊಳ್ಳುತ್ತಿದ್ದಿಲ್ಲ. 'ಅಂಗೆಲ್ಲ ನನ್ನ ಫ್ರೆಂಡ್ಸ್‌ರನ್ನು ಬೈಬೇಡ. ಇದರ ತಂಟೆಗೆ ಬಂದ್ರೆ ಏನಿಲ್ಲ ನೋಡು' ಎಂದು ಅವರಮ್ಮನನ್ನೆ ಕಣ್ಣು ಕೆಂಪು ಮಾಡಿ ಬೈತಿದ್ದ. "ರೇಶನಿಗೆ ಅವ್ನ ಜಾತಿಯ ಹುಡುಗರೆಲ್ಲ 'ಆ ಕೇರಿ ಹುಡುಗ್ರ ಜೊತೆ ಇರಬೇಡ್ಲೆ, ಕೊಳಕು ನನ್ನಮಕ್ಳು' ಅಂತ "ಯಾಳಿಸೋರು. ಆಗಂತೂ ಅವು 'ನಿನ್ನಷ್ಟು ಅವ್ರು ಕೊಳಕಲ್ಲ ಹೋಗ್ಲೆ' ಅಂತ ಮುಲಾಜಿಲ್ಲದೆ ಬೈತಿದ್ದನ್ನು ನಾನು ನೋಡಿದ್ದೆ. ಹಂಗಾಗಿ ಅವನಂದ್ರೆ ನನ್ಗೆ ತುಂಬ ಇಷ್ಟವಾಗಿದ್ದ.
ಒಂದು "ಷಯ ಹೇಳೋದೆ ಮರೆತಿದ್ದೆ. "ರೇಶನಿಗೆ ನಮ್ಮನೆಯ ಬಿಳಿಯ ಟಗರು 'ಬಿಳಿಯ' ಅಂದ್ರೆ ತುಂಬ ಪ್ರೀತಿ. ಅವು ಪ್ರತಿದಿನ ನನ್ನ ಜೊತೆ ಮಾತಾಡ್‌ತಾನೋ ಇಲ್ವೋ ಗೊತ್ತಿಲ್ಲ, ಆದ್ರೆ ಬಿಳಿಯನನ್ನು ಮಾತ್ರ ನೋಡಲು ಮರಿತಿದ್ದಿಲ್ಲ. ಬಿಳಿಯ ನೋಡಲು ತುಂಬ ಚೆನ್ನಾಗಿದ್ದ. ಇಡೀ ಮೈತುಂಬ ಬಿಳಿ ಕೂದಲು. ಅದರ ಮಕದಲ್ಲಿ ಕೆಂಪು ಬಣ್ಣ ಇದ್ದಿದ್ರಿಂದ ನೋಡಲು ತುಂಬ ಚೆಂದಾಗಿ ಕಾಣ್ತಿದ್ದ. ಇಡೀ ನಮ್ಮ ಹಳ್ಳೀಲಿ ಬಿಳಿಯನಷ್ಟು ಗಡದ್ದಾಗಿ ಯಾರೂ ಇದ್ದಿಲ್ಲ. ಬಿಳಿಯ ಸಿಟ್ಟಿನಿಂದ ಮಕ ಎತ್ತಿ ನೋಡಿದಾಗ್ಲಂತೂ ಎದುರಿಗಿರೋ ಜನ ಅದ್ರ ಹತ್ರ ಬರಲು ಹೆದ್ರುತಿದ್ರು. ಆಶ್ಚರ್‍ಯ ಅಂದ್ರೆ ಇದುವರೆಗೂ "ರೇಶ ಬಿಳಿಯನನ್ನು ಮುಟ್ಟಿರಲಿಲ್ಲ. ಮುಟ್ಟೋಕೆ ಬಹಳ ಹೆದ್ರುತಿದ್ದ. ದೂರದಿಂದ್ಲೆ ಹುಲ್ಲು ಹಾಕೋದು, ಕೆರೇಲಿ ನೀರು ಉಗ್ಗಿ ಸ್ನಾನ ಮಾಡ್ಸೋದು, ಬಾಳೆಣ್ಣು ತಿನ್ಸೋದು ಮಾಡ್ತಿದ್ದ. ನಾವು ನಾಲ್ಕು ಜನ ಫ್ರೆಂಡ್ಸ್ ಸೇರಿ ಬಿಳಿಯನನ್ನು ಐತ್ವಾರ, ರಜಾ ದಿನಗಳಲ್ಲಿ ಮೇಸಲು ಹೊಲಕ್ಕೆ ಕರೆದುಕೊಂಡು ಹೋಗುತಿದ್ವು.
ನಮ್ಮ ಬಿಳಿಯನನ್ನು ನೋಡಿದ್ರೆ ಊರಿನ ಜನರಿಗೆ ಹೊಟ್ಟೆಕಿಚ್ಚುಪಡುವಷ್ಟು ಮೈ ತುಂಬಿಕೊಂಡಿದ್ದ. ಇಡೀ ಹಳ್ಳೀಲಿ ಈತನಿಗೆ ಸರಿಸಾಟಿಯಾಗಿ ಯಾರೂ ಇದ್ದಿಲ್ಲ. ಸತತವಾಗಿ ಎರಡು ವರ್ಷ ಟಗರು ಜೂಜಲ್ಲಿ ಗೆದ್ದಿದ್ದ. ಆಮೇಲೆ ಬಿಳಿಯನ ಕಾಲು ನೋವು ಆಗಿದೆ ಅಂತ ಸ್ಪರ್ಧೆಗೆ ಕಳಿಸಲಿಲ್ಲ. ನನ್ನ ತಂದೆ ವಾರಿಗೇರು ನಮ್ಮ ಬಿಳಿಯನನ್ನು ದುರುಗುಟ್ಟಿ ನೋಡ್ತಾ 'ಲೇ ಅಂಬ್ರೀಶ, ಯಾವಾಗ್ಲೆ ಹುಲಿಗೆಮ್ಮ ದೇವ್ರು ಮಾಡೋದು' ಅಂತ ಕೇಳ್ತಿದ್ರು. ಆ ಜನ ಬಿಳಿಯನನ್ನು ನೋಡಿ ಈ ಪ್ರಶ್ನೆ ಕೇಳ್ತಿರೋದು "ರೇಶನಿಗೆ ಆಶ್ಚರ್ಯವಾಗುತ್ತಿತ್ತು. 'ಅವ್ರು ಯಾಕ್ಲೆ ಅಂಬ್ರೇಶ ನಮ್ಮ ಬಿಳಿಯನನ್ನು ನೋಡಿ ಆ ರೀತಿ ಕೇಳ್ತಾರೆ' ಅಂದಿದ್ದಕ್ಕೆ 'ನಮ್ಮ ಬಿಳಿಯನನ್ನು ದೇ"ಗೆ ಕೊಡಾಕ್ಲೆ' ಎಂದು ನಾನು ಉತ್ತರಿಸಿದ್ದೆ. ಆಗ "ರೇಶನಿಗೆ ಅವರಜ್ಜಿ ತಮ್ಮ ಆಕಳುಮರಿಯನ್ನು "ರಭದ್ರ ದೇ"ಗೆ ಕೊಟ್ಟಿದ್ದು ನೆನಪಾಗಿ 'ಲೇ ಅಂಬ್ರೇಶ ಬಿಳಿಯನನ್ನು ದೇ"ಗೆ ಕೊಡಬ್ಯಾಡ್‌ಲೇ ನಾನೇ ಇದನ್ನು ಸಾಕ್ತೀನಿ. ನಮ್ಮನೆಗೆ ಕೊಟ್ಟುಬಿಡ್ಲೇ' ಅಂತ "ರೇಶ ಒಮ್ಮೆ ಒತ್ತಾಯ ಮಾಡಿ ಕೇಳಿದ್ದ. ಅದಕ್ಕೆ "ನೋಡಪ್ಪ ಇದು ನಮ್ಮಂಥ ಸಣ್ಣವರ "ಚಾರವಲ್ಲ. ಇದು ದೊಡ್ಡವರ "ಚಾರ. ನಮ್ಮಪ್ಪ ಏನ್ ಹೇಳ್ತಾನೋ ಅಂಗೆ ಮಾಡೋದು. ಇಲ್ಲೀಗೆ ಈ ಮಾತು ಬಿಟ್ಟುಬಿಡು" ಅಂತ ಖಾರವಾಗಿ ಹೇಳಿಬಿಟ್ಟಿದ್ದೆ. ಅಲ್ಲಿಗೆ ಅವು ಪಾಪ.. ಸುಮ್ಮನಾಗಿ ಬಿಟ್ಟ.
"ರೇಶನಿಗೆ ಬಿಳಿಯ ಅಂದ್ರೆ ಪಂಚಪ್ರಾಣ. ಅವು ಅದನ್ನು ಮುಟ್ಟಲಿಕ್ಕೂ ಹರಸಾಹಸ ಮಾಡುತ್ತಿದ್ದ. ಒಮ್ಮೆ ಅದ್ರ ಬೆನ್ನು ಮುಟ್ಟಿದಾಗ್ಲಂತೂ ಇಡೀ ಸಾಲಿಗೆ ಈ "ಷಯ ತಿಳಿಸಿ ಸಂತೋಷಪಟ್ಟಿದ್ದ. ದಿನಾ ಸಾಲಿ ಮುಗಿದ ಕೂಡಲೇ ಒಮ್ಮೆಯಾದ್ರೂ ಅದನ್ನು ದೂರದಿಂದ ನೋಡಿ ಸಂತಸಪಡುತ್ತಿದ್ದ. ಅವು ಬಿಳಿಯನಿಗೆ ತನ್ನ ಸ್ವಂತ ದುಡ್ಡಿನಿಂದ ಸಂತೆಯಲ್ಲಿ ಗಂಟೆ ತಂದಿದ್ದ. ಅದನ್ನು ಕಟ್ಟಿದಾಗಿನಿಂದ ದೂರದಿಂದಲೇ ಬಿಳಿಯ ಬರುವ ಶಬ್ದ ಗೊತ್ತಾಗುತ್ತಿತ್ತು. ಗಂಟೆಯ ಟಣ್‌ಟಣ್ ಎಂಬ ಸದ್ದು ಬಿಳಿಯನನ್ನು ಇನ್ನು ಚೆಂದ ಕಾಣುವಂತೆ ಮಾಡಿತ್ತು. ಅವು ಬಿಳಿಯನನ್ನು ಎಂದೂ ಬೇರೆಯವರದು ಅಂದುಕೊಂಡಿರಲಿಲ್ಲ, ಅದು ತನ್ನ ಸ್ವತ್ತೇ ಅನ್ನುವ ರೀತಿ ಪ್ರೀತಿಸುತ್ತಿದ್ದ.
ಇತ್ತೀಚೆಗೆ "ರೇಶ ಬಿಳಿಯನನ್ನು ಸ್ವಲ್ಪ ಜಾಸ್ತಿಯೇ ಹಚ್ಚಿಕೊಂಡುಬಿಟ್ಟಿದ್ದ. ಬಿಳಿಯ ನನ್ನಂಗೆ ಇದಾನೆ. ಅ"ಗೂ ನನ್ಗೂ ಯಾವುದೇ ವ್ಯತ್ಯಾಸ ಇಲ್ಲ ಅನ್ನೋನು. ನಾ"ಬ್ರೂ ಒಂದೇ ರೀತಿ ಇದೀ". ನಾನು ಬೆಳ್ಳಗಿದೀನಿ ಅವೂ ಬೆಳ್ಳಗಿದಾನೆ. ನಾನು ಬೆಳಗ್ಗೆ ಸಾಲಿಗೆ ಹೋದೋನು ಸಾಯಂಕಾಲ ಬರ್‍ತೀನಿ. ಅವು ಕೂಡ ಮೇಯಲಿಕ್ಕೆ ಬೆಳಗ್ಗೆ ಹೋದೋನು ಸಾಯಂಕಾಲ ಬರ್‍ತಾನೆ. ಅವು ಸಾಯಂಕಾಲ ಬಂದು ಮನೆಯಲ್ಲೇ ಇರ್‍ತಾನೆ. ನಾನು ಕೂಡ ಹಾಗೇ ಮಾಡ್ತೀನಿ. ಇನ್ನು ಐತ್ವಾರ ನಾನು ಮತ್ತು ಬಿಳಿಯ ಇಬ್ರೂ ಸೇರಿ ಹೊಲಕ್ಕೆ ಹೋಗ್ತೀ". ಅವು ಮೇವು ತಿಂತಾನೆ. ನಾನು ಎಳನೀರು, ಅಡ" ಉಂಚಿಕಾ, ಸೀತಾಪತ್ಲೆ ಹಣ್ಣು "ಗೆ ತಿಂತೀ" ಅಂತ ಮಾತಾಡ್ತಿದ್ದ. ಅವು ಅದ್ರ ಜೊತೆ ಎಷ್ಟು ಬೆರೆತಿದ್ದನೆಂದ್ರೆ ನನ್ಗೆ ನಿದ್ರೆ ಬರಲ್ಲ ಅಂದ್ರೆ ಅ"ಗೂ ಕೂಡ ನಿದ್ರೆ ಬರಲ್ಲ, ನನ್ಗೆ ಜ್ವರ ಬಂದ್ರೆ ಅ"ಗೂ ಜ್ವರ ಬರುತ್ತೆ ಅಂತ "ಚಿತ್ರವಾಗಿ ಯೋಚಿಸ್ತಿದ್ದ.
ಬಿಳಿಯನನ್ನು ತಂದ ಹೊಸದ್ರಲ್ಲಿ.. "ರೇಶ ಅದನ್ನು ಮುಟ್ಟಲು ಹೋದಾಗ ಬಲವಾಗಿ ಗುದ್ದಿತ್ತು. ಅವತ್ತು ಅವು ಕೆಂಪು ಬಟ್ಟೆ ಹಾಕಿದ್ದ. ಬಿಳಿಯನಿಗೆ ಕೆಂಪು ಬಟ್ಟೆಂದ್ರೆ ಆಗಲ್ಲ.. ಅಂತ "ರೇಶನಿಗೆ ಆಮೇಲೆ ಹೇಳ್ದೆ. ಆ ದಿನದಿಂದ ಅವು ಬಿಳಿಯನಿಗೆ ಇಷ್ಟವಾಗದ ಕೆಂಪು ಬಟ್ಟೆ ಹಾಕೋದೇ ನಿಲ್ಲಿಸಿಬಿಟ್ಟ.
ಒಂದಿನ ನಾವೆಲ್ಲ ಸೇರಿ ಹೊಲದಲ್ಲಿ ಒಂದು ಕಾಡುಕೋಳಿಯನ್ನು "ಡಿದುಬಿಟ್ಟಿದ್ವಿ. ಅದನ್ನು ಹೊಲದಲ್ಲಿಯೇ ಬೇಸಿಕೊಂಡು ತಿಂದುಬಿಡಬೇಕ್ಲೆ ಅಂತ ಎಲ್ರೂ ತೀರ್ಮಾನಿಸಿ ಆಗಿತ್ತು. ಪುಣ್ಯಕ್ಕೆ ಆ ದಿನ "ರೇಶ ಹೊಲಕ್ಕೆ ಬಂದಿದ್ದಿಲ್ಲ. ಇಲ್ಲಂದ್ರೆ "ಪಾಪಲೇ ಅದು ನಮ್ಮಂಗೆ ಪ್ರಾಣಿಲೇ ಸಾಸಬಾರ್‍ದಲೇ" ಅಂತ ಬೊಗಳೆ ಬಿಡ್ತಿದ್ದ.
"ಲೇ ಅಂಬ್ರೇಶ ಬಾ..ಲೆ.." ಇಲ್ಲಿ ಎಂದು ಕರೆದ ನಮ್ಮಪ್ಪ "ಈ ಶುಕ್ರವಾರ ಹುಲಿಗೆಮ್ಮ ದೇವ್ರು ಮಾಡಣ... ನಿಮ್ಮ ಫ್ರೆಂಡ್ಸೆಲ್ರನ್ನು ಕರಿ. ಆ ಸ್ವಾ" "ರೇಶನನ್ನು ಕರೀಬೇಡ" ಅಂತ ಹೇಳಿದ. ಆವಾಗ ನನ್ಗೆ ಸ್ವಲ್ಪ ನಮ್ಮಪ್ಪನ ಮೇಲೆ ಮುನಿಸಿಬಂದ್ರೂ ಸರಿಯಾಗಿ ಯೋಚಿಸಿದಾಗ ನಮ್ಮಪ್ಪ ಹೇಳಿದ್ದು ಸರಿ ಐತೆ ಎಂದು ಸುಮ್ಮನಾದೆ. ನಮ್ಮಪ್ಪ ಹೇಳಿದ ರೀತೀಲಿ ನಾನು ನಮ್ಮ ಪ್ರೆಂಡ್ಸೆಲ್ರಿಗೂ "ಸಾಲಿಗೆ ರಜಾ ಮಾಡಿ ಹುಲಿಗೆಮ್ಮ ದೇ"ಗೆ ಬರಬೇಕ್ಲೆ" ಅಂತ ಕರೆದಿದ್ದೆ. "ರೇಶನೊಬ್ಬನನ್ನು ಬಿಟ್ಟು.
ಪಾಪ.. ನಮ್ಮಪ್ಪ ಕರಿಬ್ಯಾಡ ಅಂತ ಹೇಳಿರೋ "ಷಯ "ರೇಶನಿಗೆ ಗೊತ್ತಿದ್ದಿಲ್ಲ. ಅಂಬ್ರೀಶ ಎಲ್ರಿಗೂ ದೇವ್ರು ಮಾಡ್ತಿದೀ" ಬರ್ರಿ ಅಂತ ಕರೆದಿದ್ದಾನೆ. ಆದ್ರೆ ನನ್ನನ್ನು ಮಾತ್ರ ಯಾಕೆ ಕರೆದಿಲ್ಲ, ಅಂಗ್ ಲೆಕ್ಕಾಕಿದ್ರೆ ಅವು ನನ್ನ ಮೊದ್ಲು ಕರಿಬೇಕು. ಯಾಕ್ "ಗ್ ಮಾಡ್ತಿದ್ದಾನೆ, ನನ್ನ ಮೇಲೆ ಮುನಿಸಿಕೊಂಡ್ನಾ ಅಥವಾ ನಾನೇದ್ರು ತಪು ಮಾಡಿದ್ನಾ ಅಂತ "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ. ಕೊನೆಗೆ ಅವು ಮನಸು ತಾಳೆಲಾರದೆ ನನ್ನನ್ನು ಎದ್ರು ನಿಂದ್ರಿಸಿ "ಯಾಕ್ಲೆ ಅಂಬ್ರೀಶ ಎಲ್ರಿಗೂ ಹುಲಿಗೆಮ್ಮ ದೇ"ಗೆ ಕರೆದು ನನ್ನನ್ನು ಮಾತ್ರ ಯಾಕ್ಲೆ ಕರೆದಿಲ್ಲ, ನಾನೂ ಬರ್‍ತೀನ್ಲೇ" ಅಂತ ಅತ್ತಗಂತ ಹೇಳ್ತಿದ್ರೆ ನನ್ಗೆ ಅವನನ್ನು ಬಿಟ್ಟು ಹೋಗ್ಲು ಮನಸಾಗಲಿಲ್ಲ. "ಆತು, ಆದ್ರೆ ಒಂದು "ಷಯ ನಿಮ್ಮನೇಲಿ ಒಪ್ಪಿದ್ರೆ ಮಾತ್ರ ಬಾ" ಅಂತ ಹೇಳ್ದೆ. ಆಯ್ತು... ಆಯ್ತು... ಅಂತ ಸಂತೋಷದಿಂದ ಅವು ಮನೆಗೆ ಓಡಿಹೋದ.
"ರೇಶ ಮನೇಲಿ ಈ "ಷಯ ತಿಳಿಸಿದಾಗ ಅವರಪ್ಪ ಅ"ಗೆ ಕಪಾಳಮೋಕ್ಷ ಮಾಡಿದ್ದ. "ಬರ್‌ಬರ್‍ತಾ ಆ ಕೇರಿ ಹುಡುಗರ ಜೊತಿ ಸೇರಿ ಹಾಳಾಗ್ತಿದ್ದಾನೆ, ಇನ್ನು ಮುಂದೆ ಅವ್ರ ಜತಿ ಇವನನ್ನು ಸೇರ್‍ಸ್‌ಬೇಡಿ" ಎಂದು ಬೈದ್‌ಬಿಟ್ಟಿದ್ದ. ಆಗಂತೂ ಅ"ಗೆ "ನಮ್ಮಪ್ಪನೇ ನನ್ಗೆ ದೊಡ್ಡ ಶತ್ರು ಆಗಿಬಿಟ್ಟಿದ್ದಾನೆ" ಅಂತ ಮನಸಲ್ಲೇ ಬೈಕಂಡ. ಅಲ್ಲಿಗೆ ಅವು ಹುಲಿಗೆಮ್ಮ ದೇ"ಗೆ ಹೋಗೋ "ಚಾರ ಕೈಬಿಟ್ಟ. ಆ ಕ್ಷಣದಲ್ಲಿ ಅ"ಗೆ 'ಬಿಳಿಯ' ನೆನಪಾದ. "ಓ! ಹುಲಿಗೆಮ್ಮ ದೇ"ಗೆ ಬಿಳಿಯನನ್ನು ಕೊಡ್ತೀ" ಅಂತ ಅಂಬ್ರೀಶ ಹೇಳಿದನಲ್ವಾ" ಅಂತ ನೆನಪಿಸಿಕೊಂಡು ಹೇಗಾದ್ರೂ ಮಾಡಿ ಇದನ್ನು ತಪ್ಪಿಸಬೇಕು ಅಂತ ನಿರ್ಧಾರ ಮಾಡ್ದ. ಮನೇಲಿ ಬೈಸಿಕೊಂಡ್ರೂ ಪರವಾಗಿಲ್ಲ.. ಇದಕ್ ನಾನ್ ಹೋಗ್ಲೇಬೇಕು, ಅದೇನಾಗುತ್ತೋ ಆಗ್ಲಿ.. ಅಂತ ಮನಸಲ್ಲಿ ಗಟ್ಟಿಮಾಡಿಕೊಂಡ. ಅ"ಗೆ ನಿಜವಾಗ್ಲೂ ಈ ಹುಲಿಗೆಮ್ಮ ದೇವ್ರು ಅಂದ್ರೆ ಏನು, ಏನು ಮಾಡ್ತಾರೆ ಅಂತ ಸರಿಯಾಗಿ ಗೊತ್ತಿದ್ದಿಲ್ಲ. ಅದನ್ನು ಇವ್ರು ಹ್ಯಾಗೆ ಆಚರಿಸ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲವೂ ಇತ್ತು. ಇ"ಗೆ ಗೊತ್ತಿದ್ದ ಒಂದು "ಷಯ ಅಂದ್ರೆ ತನ್ನ ಪ್ರೀತಿಯ ಬಿಳಿಯನನ್ನು ಅಂದು ದೇ"ಗೆ ಕೊಡೋದನ್ನು ತಪ್ಪಿಸೋದು.
ಕೊನೆಗೆ ಅಂದು ಶುಕ್ರವಾರ ಸಾಲಿಗೆ ಹೋದಂತೆ ಬುಕ್ ತಗಂಡು ನಮ್ಮ ಹಳ್ಳೀಂದ ೬ ಮೈಲು ದೂರ ಇರುವ ಹುಲಿಗೆಮ್ಮ ದೇವ್ರ ಹತ್ರ "ರೇಶ ಮತ್ತು ನನ್ನ ಫ್ರೆಂಡ್ಸೆಲ್ಲ ಸೇರಿಬಂದ್ರು. ಇದರಲ್ಲಿ "ರೇಶ ಬಂದಿದ್ದು ನನ್ಗೆ ಅಚ್ಚರಿ ತಂದಿತ್ತು. ಅವರಪ್ಪ ಅವನನ್ನು ಬೈದ "ಷಯ ನನ್ಗೆ ಗೊತ್ತಿತ್ತು. ಅದ್ಕೆ ಬಹುಶಃ ಅವು ದೇ"ಗೆ ಬರಲ್ಲ ಅಂತ ಅಂದುಕೊಂಡಿದ್ದೆ. ಆದ್ರೆ "ರೇಶ ಬರ್‍ತಿರೋದು ನೋಡಿ ನಮ್ಮಪ್ಪನಿಗೆ ಸಿಟ್ಟು ಬಂದುಬಿಡ್ತು. ನನ್ನನ್ನು ಇತ್ಲಾಗ ಕರೆದು "ಇವನನ್ನು ಯಾಕ್ ಕರಕಂಡ ಬಂದೀಲೇ, ಮೊದ್ಲೇ ಹೇಳಿದ್ದಿಲ್ಲ, ಇವನನ್ನು ಕರಕಂಡ್ ಬರಬೇಡ" ಅಂತ ಬೈದ್ರು. "ಇಲ್ಲಪ್ಪ ಎಲ್ಲರ ಜೊತೆ ಇವೂ ಬಂದಿದಾನೆ, ಇ"ಗೆ ಬೇರೆ ಅಡುಗೆ ಮಾಡ್ಸಿದ್ರಾತು. ಏನೂ ಆಗಲ್ಲಪ್ಪ.." ಅಂತ ಕೊನೆಗೂ ಸಮಾಧಾನ ಮಾಡಿಸಿದೆ.
ದೂರದಲ್ಲೇ ಅವನನ್ನು ನಿಂದ್ರಿಸಿ ಬೇರೆ ಕಡೆ ಕರೆದುಕೊಂಡು ಕುಂದ್ರಿಸಿದೆ. ಅಲ್ಲಿಗೆ ಬಂದ "ರೇಶನ ಮೊದಲ ಪ್ರಶ್ನೆ "ಇವತ್ತು ಬಿಳಿಯನನ್ನು ದೇ"ಗೆ ಕೊಟ್ಟುಬಿಡ್ತೀರಾ?" ಅನ್ನೋ ಮುಗ್ಧ ಪ್ರಶ್ನೆಗೆ ನಾನು ದಡಬಡಾಸ್ತಾ... "ಇಲ್ಲ...ಲೆ ಇಲ್ಲ... ಬಿಳಿಯನನ್ನು ದೇ"ಗೆ ಕೊಡಲ್ಲ. ನಮ್ಮ ದುರ್ಗದ ಮಾವ ಕರೆದುಕೊಂಡು ಹೋಗ್ತಾನೆ" ಅಂತ ಸುಳ್ಳು ಹೇಳ್ದೆ. ಆ ಕ್ಷಣ ಅ"ಗೆ ಮನಸು ಸ್ವಲ್ಪ ಸಮಾಧಾನ ಆಯ್ತು. ಆದ್ರೆ ಆಗ ಅವನಿಗೆ ನಿಜವಾಗಿಂi ಇಲ್ಲಿ ಏನೋ ಆಗ್ತಿದೆ, ಮನಸಲ್ಲಿ ಬರೀ ದ್ವಂದ್ವ. ನಾನು ಇಲ್ಲಿಗೆ ಬಂದು ತಪು ಮಾಡ್ತಿದೀನಾ? ಮನೇಲಿ ಬೈದ್ರೂ ನಾನು ಇಲ್ಲಿಗೆ ಬಂದಿದೀನಿ, ಇನ್ನು ಮನೆಗೋದ ಮೇಲೆ ಏನ್ ಕಾದಿದಿಯೋ ಎಂದು ಭಯಪಟ್ಟುಕೊಂಡ. ಇಲ್ಲಿ ಪರಿಸ್ಥಿತಿ ನೋಡಿದ್ರೆ ಒಂದು ರೀತಿ ಇದೆ, ಅಂಬ್ರೀಶ ನೋಡಿದ್ರೆ ಏನೋ ತಡವರಿಸ್ತಿದ್ದಾನೆ... ನನಗೊಂದೂ ತಿಳಿತಿಲ್ಲ. ಸದ್ಯ ಬಿಳಿಯನನ್ನು ದೇ"ಗೆ ಕೊಡದಿಲ್ವಲ್ಲ ಅಂತ ತುಸು ಸಮಾಧಾನಗೊಂಡ.
ಆಗ ಕಾಣ್ಸಿತು ನೋಡಿ "ರೇಶನ ಪ್ರೀತಿಯ 'ಬಿಳಿಯ'. ಇಡೀ ಜನರ ಗುಂಪಿನ ಮಧ್ಯ ತಾನೇ ಮುಖ್ಯಸ್ಥ ಎನ್ನುವಂತೆ ಅಕ್ಕಡಿಕ್ಕಡಿಗೆ ನೋಡ್ತಾ, ನಾನೇ ಇವರಿಗೆಲ್ಲ ಮುಂದಾಳು ಎಂಬ ಠೀ"ಯಲ್ಲಿ ಬಿಳಿಯ ನಡೀತಿದ್ರೆ ರಾಜ ಗಾಂಬಿsರ್ಯ ಹಾಗೇ ಹುಟ್ಟಿಬರ್‍ತಿತ್ತು, ತಾನು ಆಕಾಶದ ಮೇಲೆ ನಡೆಯುತ್ತಿದ್ದೆನೇನೋ ಅನ್ನೋ ರೀತೀಲಿ ನಡಿತಿದ್ದ. ಅವನ ಹಣೆಯ ಮೇಲಿನ ತಿಲಕ, ದೊಡ್ಡ ಹೂ"ನ ಹಾರದ ಮಧ್ಯ ನವವಧು"ನಂತೆ ಕಾಣ್ತಿದ್ದ. ಅವತ್ತು ನಿಜವಾಗ್ಲೂ ತುಂಬ ಸುಂದರವಾಗಿ ಸಿಂಗಾರಗೊಂಡಿದ್ದ ಬಿಳಿಯ. ಬಿಳಿಯನಿಗೆ ಅಲ್ಲಿ ನೆರೆದಿದ್ದ ಹೆಂಗಸ್ರು ದೀಪ ಬೆಳಗ್ತಿದ್ರೆ "ರೇಶನಿಗೆ ಅತೀವ ಸಂತಸ. ಅಲ್ಲೇ ಕುಡಿದಾಡ್ಲೇನಪ್ಪ ಅನ್ನುವಷ್ಟು ಸಂತಸ. ಇದನ್ನೆಲ್ಲ ನೋಡಲು "ರೇಶನಿಗೆ ಎರಡು ಕಣ್ಣು ಸಾಲದು ಅನ್ನೋ ಹಾಗೆ ಕಣ್ಣುರೆಪ್ಪೆ "ಟುಕಿಸ್ದೆ ನೋಡ್ತಿದ್ದ. ಅಷ್ಟು ಸಂತೋಷದಿಂದ ಇದ್ದ "ರೇಶನನ್ನು ನೋಡಿ ನನ್ಗೆ ಒಂದು ಕ್ಷಣ ಕಳ್ಳು ಚುರುಕ್ ಅಂತು.
ಇದನ್ನೆಲ್ಲ ನೋಡ್ತಾ "ಓಹೋ.. ಇದೇನಾ ಹುಲಿಗೆಮ್ಮ ದೇವ್ರು ಮಾಡೋದು ಅಂದ್ರೆ, ನೀವೇನ್ ದೇ"ಗೆ ಕೊಡದಿಲ್ವಲ್ಲ.. ಗುಡಿಗೆ ಕರಕಂಡ ಬಂದು ಪೂಜೆ ಮಾಡೋದು ಅಷ್ಟೆ ತಾನೆ..." ಎಂದು "ರೇಶ ಸಂತಸಪಟ್ಟ. ಇದಕ್ಕೆ ನನ್ನ ಉತ್ತರ "ಉಂ... ಉಂ..." ಎಂದು ಮಾತ್ರ ಉಸುರುತ್ತಿದ್ದೆ. "ನಾ ಬಾಂದ ಬೇರಾವ ಮಾತುಗಳು ಹೊರಬರುತ್ತಿರಲಿಲ್ಲ. ನಾನು ಮನೆಯವರ ಎದ್ರು ಹಾಕಿಕೊಂಡು, ಸಾಲಿ ಬಿಟ್ಟು ಇಲ್ಲಿಗೆ ಬಂದಿದ್ದು ಸಾರ್ಥಕವಾತು ಎಂದು "ರೇಶ ತನ್ನನ್ನು ತಾನು ಸಮರ್ಥಿಸಿಕೊಂಡ. ಬಿಳಿಯನಿಗೆ ಹೂ"ನಹಾರ ಹಾಕಿ ಮಾಡ್ದ ಮೆರವಣಿಗೆ ತನ್ನನ್ನೇ ಮೆರವಣಿಗೆ ಮಾಡ್ದ ಹಾಗಿತ್ತು. ಅವು ಕನಸಲ್ಲಿ ತಾನು ಮತ್ತು ಬಿಳಿಯ ಆಕಾಶದಲ್ಲಿ ತೇಲಾಡಿದ ಹಾಗಿತ್ತು ಅಲ್ಲಿಯ ವಾತಾವರಣ.
ಅಂದು ಮಧ್ಯಾಹ್ನ ಅಲ್ಲಿಗೆ ಬಂದಿದ್ದ ಊರಿನ ಜನರೆಲ್ರೂ ಊಟ ಮಾಡಿದ್ರು. ನಾನು ಮತ್ತು "ರೇಶ ಮಾತ್ರ ಊಟದ ಜಾಗದಿಂದ ಸ್ವಲ್ಪ ದೂರದಲ್ಲಿ ಬೇರೆ ಅಡುಗೆ ಮಾಡಿಸಿದ ಉಗ್ಗಿ, ಅನ್ನ, ಸಾರು, ಪಲ್ಯೆ ಊಟ ಮಾಡಿದ್ವು. ಊಟ ತುಂಬಾ ಚೆನ್ನಾಗಿತ್ತು. ಅವ್ನ ಜೊತೆ ನಾನೂ ಊಟ ಮಾಡ್ದೆ. ಮಾಡ್ತಾ ಮಾಡ್ತಾ ಆಗಾಗ ನನ್ನ ಕಣ್ಣೀರ ಒಂದೊಂದೆ ಹನಿ ಬಾಳೆದೆಲೆ ಮೇಲೆ ಬೀಳುತ್ತಿದ್ದನ್ನು ಕಂಡ "ರೇಶ "ಯಾಕ್ಲೆ.. ಅಂಬ್ರೀಶ ಅಳ್ತೀ, ಸು"ರು, ಊಟ ಮಾಡೋ ಟೈಮಲ್ಲಿ ಯಾಕ್ಲೆ ಅಳ್ತಿ, ನಾನು ಇವತ್ತು ಬಂದಾಗಿಂದ ನೋಡ್ತಿದ್ದೀನಿ ಯಾಕೋ ನೀನು ಸರಿಲ್ಲ. ಒಂಥರ ಇದೀ... ನಮ್ಮ ಬಿಳಿಯನನ್ನು ನೋಡು, ಇವತ್ತು ರಾಜ ರಾಜದ್ದಿಂಗ ಇದಾನೆ, ಅವನನ್ನು ನೋಡಿ ಖುಪಡು" ಎಂದು ಸಮಾಧಾನ ಮಾಡ್ದ. ಬಹುಶಃ ಅವತ್ತೇ ಅವು ಅಷ್ಟು ಖುಂದಿದ್ದದ್ದು.
ಊಟವಾದ ಮೇಲೆ ಎಲ್ರೂ ಆಟವಾಡಿದೆವು. ಲಗೋರಿ ಆಟ ಆಡಬೇಕಾದ್ರೆ ಸ್ವಲ್ಪ ದೂರದ ತೆಂಗಿನ ಮರದ ಹತ್ತಿರ ಚೆಂಡು ಹೋಗಿ ಬಿತ್ತು. ಅದನ್ನು ತರ್‍ಲು ಹೋದ "ರೇಶನಿಗೆ ಅಲ್ಲಿ ಟಗರಿನ ರಾಶಿ ರಾಶಿ ಬಿಳಿ ಕೂದಲು ಕಾಣ್ಸಿತು. ಆ ಕೂದಲನ್ನು ನೋಡ್ತಾ 'ಇದು ನಮ್ಮ ಬಿಳಿಯನ ಕೂದಲು ಅಲ್ವಾ?' ಅಂತ ನನ್ನನ್ನು ಪ್ರಶ್ನಿಸಿದಾಗ ಎದೆ ದಸಕ್ಕೆಂದು 'ಅಲ್ಲಲೆ ಇದು ಬೇರೇ ಟಗರಿಂದು ಇರಬೇಕು, ನಮ್ಮ ಬಿಳಿಯಂದಲ್ಲ...' ಅಂತ ಮರೆಸುವ ಪ್ರಯತ್ನ ಮಾಡಿದೆ. ಆಗಂತೂ ಅವು ಕೂಡ್ಲೆ ಲಗೋರಿ ಆಟ ಆಡೋದು ಬಿಟ್ಟು "ಇಲ್ಲ. ಅವನನ್ನು ನಾನು ನೋಡಬೇಕು, ನಾನೇ ಅವನನ್ನು ಸಾಕ್ತಿನಿ, ಅದೆಷ್ಟು ದುಡ್ಡು ಕೊಡಬೇಕೋ ಅಷ್ಟು ದುಡ್ಡು ನಮ್ಮಪ್ಪನಿಂದ ಇಸ್‌ಕೊಡ್ಸಿತ್ತೀನಿ ನನಗೆ ಕೊಟ್ಟುಬಿಡ್ರೋ..." ಎಂದು ಪರಿಪರಿಯಾಗಿ ನನ್ನನ್ನು ಬೇಡಿಕೊಂಡ. ಹೇಗೋ ತಿಂಗಳಿಗೊಮ್ಮೆಯಾದ್ರೆ ನಾವು ಬಿಳಿಯನನ್ನು ನೋಡೋಕೆ ಹೋಗೋಣ ಅಂದಿದ್ದಕ್ಕೆ ಸ್ವಲ್ಪ ಸಮಾಧಾನಗೊಂಡಿದ್ದ. ಆ ದಿನ ಸಾಯಂಕಾಲ ಎಲ್ರೂ ಮನೆಗೆ "ಂತಿರುಗಿದೆವು.
ನಾನು ನಮ್ಮಪ್ಪನಿಗೆ ಎಷ್ಟು ಪರಿಪರಿಯಾಗಿ ಕೇಳಿಕೊಂಡ್ರು ಬಿಳಿಯನನ್ನು ಹುಲಿಗೆಮ್ಮ ದೇ"ಗೆ ಬಲಿಕೊಡೋದು ಬ್ಯಾಡ ಅಂತಂದ್ರೂ ಬಿಡಲಿಲ್ಲ. ಈ "ಷಯ "ರೇಶನಿಗೆ ತಿಳಿದ್ರೆ ಅವನೆಲ್ಲಿ ನನ್ನ ಜೊತೆ ಮಾತಾಡೋದು ಬಿಟ್ಟುಬಿಡ್ತಾನೆ ಏನೋ ಅನ್ನೋ ಒಂದೇ ಕಾರಣಕ್ಕೆ ನಾನು ಬಿಳಿಯನನ್ನು ನಮ್ಮ ಮಾವ ಕರಕಂಡು ಹೋದ್ರು ಅಂತ ಸುಳ್ಳು ಹೇಳಿದ್ದೆ.
ಒಂದು ವಾರ ಕಳೆದಿತ್ತು. ಆಗ್ಲೆ "ರೇಶನ ಕಾಟ ನನಗೆ ಜಾಸ್ತಿಯಾಗಿತ್ತು. ಬಿಳಿಯನನ್ನು ನೋಡಲು ಯಾವತ್ತು ಹೋಗಣ, ಇಂಥ ದಿನ ಹೋಗಣ.... ಈ ಐತ್ವಾರ ಹೋಗಣ.. ಅಂತ ಮೇಲಿಂದ ಮೇಲೆ ನನ್ನ ತಲೆ ತಿಂತಿದ್ದ. ಸಾಲಿಗೆ ರಜಾ ದಿನ ಬಂದ್ರೆ ಸಾಕು ನಾನು "ರೇಶನಿಗೆ ಕಾಣದೆ ಹಾಗೆ ಬಚ್ಚಿಕೊಳ್ಳುತ್ತಿದ್ದೆ... ಮನೇಲಿ ನಾನಿದ್ರೂ... ಇಲ್ಲ.. ಎಂದು ಮನೆಯವರು ಹೇಳಿಕಳಿಸ್ತಿದ್ರು. ಇವನಿಗೆ 'ಇರುವ' "ಷಯವನ್ನು ಹೇಗೆ ಹೇಳೋದು ಅನ್ನೋದೆ ನನ್ಗೆ ಯಕ್ಷಪ್ರಶ್ನೆಯಾಗಿತ್ತು.
ಒಂದು ಸೋಮವಾರ ಸಂತೇಲಿ ಹುಲಿಗೆಮ್ಮ ದೇ"ಗೆ ಬಂದ ಜನ ಮಾತಾಡ್ತಾ ನಾಗೇಶಪ್ಪ ಹುಲಿಗೆಮ್ಮ ದೇವ್ರ ಊಟ ತುಂಬಾ ಚೆನ್ನಾಗಿತ್ತು. ಆ ಬಿಳಿ ಟಗರು ನಲವತ್ತೈದು ಕೆ.ಜಿ. ಬಂತಂತೆ, ಅದನ್ನು ತುಂಬಾ ಚೆನ್ನಾಗಿ ಮೇಸಿದ್ರೂಂತ ಕಾಣುತ್ತೆ ಇಡೀ ಊರಿಗೆ ಸಾಕಾಗುವಷ್ಟರಮಟ್ಟಿಗೆ ಚೆನ್ನಾಗಿ ತಿಂದ್ರು ಅಂತ ಮಾತಾಡಿಕೊಳ್ಳುತ್ತಿದ್ರು. ಇದನ್ನು ಕೇಳಿದಕೂಡ್ಲೆ "ರೇಶನಿಗೆ ದೀಗ್ಬ್ನ್ರಮೆ. ಆಗ ಅ"ಗೆ ತಲೆಗೆ ಆಕಾಶನೇ ಕಳಚಿಬಿದ್ದ ಅನುಭವ.
ಅಷ್ಟೆ, ಎಚ್ಚರವಾಗಿ ನೋಡ್ತಾನೆ, ಅವು ಮನೆಯಲ್ಲಿ ಇದಾನೆ. ಅವ್ರಪ್ಪ "ಇದ್ದಕ್ಕಿದ್ದ ಹಾಗೆ ಸಂತೇಲಿ ತಿರುಗಿಬಿದ್ದುಬಿಟ್ಟೆಯಂತೆ ಯಾಕ್ಲೆ "ರೇಶ ಎಂದು ಕೇಳ್ದಾಗ, ಅವು ಮರು ಉತ್ತರಿಸದೆ "ಅಪ್ಪ.. ಅಪ್ಪಾ... ಬಿಳಿಯನನ್ನು ಸಾಸಿದ್ರಂತೆ ಹೌದಾ" ಅಂತ ಪ್ರಶ್ನೆ ಮಾಡ್ದ. 'ಹೌದಪ್ಪ', ಅದಕ್ಕೇ ನಾನು ಹೇಳಿದ್ದು ಆ ರೀತಿ ದೇವ್ರು ಮಾಡೋ ಕಡೆಗೆಲ್ಲ ನೀನು ಹೋಗಬಾರದೆಂದು. ಅಂದ್ರೆ ಅದನ್ನು ಸಾಸಿ ಅಲ್ಲಿಗೆ ಬಂದ ಜನ ಎಲ್ರೂ ನನ್ನ ಬಿಳಿಯನನ್ನು ತಿಂದ್ರಾ? ಅಂತ ಪ್ರಶ್ನೆ ಮೇಲೆ ಪ್ರಶ್ನೆ ಮಾಡ್ತಿದ್ರೆ ಅವ್ನ ಎಲ್ಲ ಪ್ರಶ್ನೆಗಳಿಗೆ ಅವ್ರಪ್ಪ "ಹೌದು", "ಉಂ.. ಉಂ.." ಅನ್ನುವ ಉತ್ತರ ಮಾತ್ರ ಬರ್‍ತಿತ್ತು. ಅವ್ನ ಎಲ್ಲ ಪ್ರಶ್ನೆಗಳಿಗೆ ಸುಮ್ಮನೆ ತಲೆ ಅಲ್ಲಾಡಿಸುತ್ತಿದ್ದ ಅವ್ರಪ್ಪ. ಆಗಂತೂ ಅ"ಗೆ ಮತ್ತೊಮ್ಮೆ ದಿಗ್ಬ್ನ್ರಮೆ. ನಾನು ಈಗ ಕೇಳ್ತಿರೋ "ಷಯ ಕನಸು ಇರಬಹುದಾ ಎಂಬ ಆಶಾಭಾವನೆಂದ ತನ್ನನ್ನು ತಾನು ಜೋರಾಗಿ ಕಪಾಳಕ್ಕೆ ಒಡಕಂಡ. ತನ್ನ ಮಾರಿ ಕೆಂಪಾಯ್ತು... ಇಲ್ಲ... ಇಲ್ಲ... ಇದು ಕನಸಲ್ಲ... ನನ್ನ ಬಿಳಿಯನನ್ನು ಸಾಸಿಬಿಟ್ರಾ.... ತುಂಡ್‌ತುಂಡ್ ಮಾಡಿ ತಿಂದುಬಿಟ್ರಾ... ಅಂತ ಜೋರಾಗಿ ಕೂಗಿಕೊಂಡ, ಏದುಸಿರಿನಿಂದ ಅಪ್ಪಾ..ಪ್ಪಾ... ಬಿಳಿಯನನ್ನು ಕೊಲ್ಲಬೇಕು ಅಂತ ಯಾಕ್ ಅನಸ್ತಪ್ಪಾ... ಅವನನ್ನು ನೋಡಿದ್ರೆ ನನ್ನ ತಮ್ಮ ಇದ್ದಂಗೆ ಇದಾನೆ ಅಂತ ಅವರಿಗೇಕೆ ಅನಿಸಲಿಲ್ಲಪ್ಪಾ..... ಅವ್ರು ನನ್ನ ಬಿಳಿಯನನ್ನು ತಿಂದ್ರಾ... ಅಥವಾ ನನ್ನನ್ನೇ ತಿಂದ್ರಾ... ಎಂದರಚುತ್ತಾ.... ಅಳ್ತಾ....ಅಳ್ತಾ... ಎಚ್ಚರತಪ್ಪಿ ಮತ್ತೆ ಬಿದ್ದುಬಿಟ್ಟ.
* * *
ಅಂದಿನಿಂದ "ರೇಶ ಯಾರ ಹತ್ರಾನೂ ಜಾಸ್ತಿ ಮಾತಾಡ್ತಿದ್ದಿಲ್ಲ. ಸದಾ ಒಬ್ಬನೇ ಮಂಕಾಗಿರುತ್ತಿದ್ದ. ಬರೀ ಮನಸಲ್ಲೇ ಮಾತಾಡಿಕೊಳ್ಳುತ್ತಿದ್ದ. ಅ"ಗೆ ತನ್ನ ಪ್ರೀತಿಯ ಬಿಳಿಯನನ್ನು ತಿಂದ ಜನರನ್ನು ದುರುಗುಟ್ಟಿ ನೋಡ್ತಿದ್ದ. ಆ ಜನ್ರ ಎದ್ರು ನಿಂತು ಅವ್ರ ಹೊಟ್ಟೆ ನೋಡ್ತಿದ್ದ, ಅವ್ರ ಬಾ ನೋಡ್ತಿದ್ದ. ಇವರೆಲ್ಲ ಮನುಷ್ಯರಾ ಅಂತ ಮನಸಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದ. ತಿಂದೋರಿಗೆಲ್ಲ "ಡಿ ಶಾಪ ಹಾಕ್ತಿದ್ದ. ಇವರೆಲ್ಲ ನನ್ನ ಬಿಳಿಯನನ್ನು ತಿಂದುಬಿಟ್ರಾ, ಈ ಸಮಾಜದಲ್ಲಿ ತಾನು ಹುಚ್ಚನೋ ಇಲ್ವೆ, ಜನ ಹುಚ್ರೋ ಅನ್ನೋ ರೀತಿ ನೋಡ್ತಿದ್ದ. ಇ"ಗೆ ತಿನ್ನಾಕ ಬೇರೇ ಏನೂ ಸಿಗಲಿಲ್ವಾ.... ನನ್ನ ಬಿಳಿಯನೇ ಬೇಕಾಗಿದ್ನಾ.. ಅಂತ ನೊಂದುಕೊಂಡ.
ಈ ಮುದಿಯ ನನ್ನ ಬಿಳಿಯನ ಚೆಂದನೆಯ ಕಾಲು ತಿಂದ್ನಾ? ಈ ದಾಂಡಿಗ ನನ್ನ ಬಿಳಿಯನ ಸುಂದರ ಮುಖವನ್ನು ತಿಂದ್ನಾ? ಈ ಕುಂಟ ನನ್ನ ಬಿಳಿಯನ ತೊಡೆ ತಿಂದ್ನಾ? ಈ ಹೆಣ್ಮಗ್ಳು ನನ್ನ ಬಿಳಿಯನ ಹೊಟ್ಟೆ ತಿಂದ್ಳಾ? ಅಂತ ಮನದಲ್ಲೇ ಬೈದುಕೊಳ್ತಿದ್ದ. ನನ್ನ ತಂದೆಯನ್ನು ನೋಡಿದಾಗ್ಲಂತೂ ಹಲ್ಲು ಕಡಿತಾ.. ಒಳ್ಳೆ "ಲನ್ ರೀತಿ ನೋಡ್ತಿದ್ದ. ಕೊನೆಪಕ್ಷ ತನ್ನ ಪ್ರೀತಿಯ ಬಿಳಿಯನ ಸಮಾದಿs ಮಾಡಲು ಈ ಜನ ಅನುವು ಮಾಡಿಕೊಡಲಿಲ್ಲ ಅಂತ ನೊಂದುಕೊಂಡ. ಅಂದಿನಿಂದ ಇಂದಿನವರೆಗೂ ಅವನ ವರ್ತನೆ "ಗೇ ಇದೆ. ಅವು ಜನರನ್ನು ನೋಡುವ ರೀತಿ ಪ್ರಶ್ನಾರ್ಹವಾಗಿದೆ. ಸದಾ ಒಂಟಿಯಾಗಿರುತ್ತಾನೆ. ನನ್ನನ್ನು ಮತ್ತು ನನ್ನ ಫ್ರೆಂಡ್ರೆಲ್ಲ ಮಾತಾಡಿಸೋದು ಬಿಟ್ಟು ಎಷ್ಟೋ ತಿಂಗಳಾಗಿ ಹೋಗಿತ್ತು.
ಕೊನೆಗೆ ಎಲ್ಲೋ, ಯಾರೋ ಮಹಾನುಭಾವ "ಪ್ರಕೃತಿಯ ನಿಯಮ ಇರೋದೆ "ಗೆ. ಒಬ್ಬರನ್ನು ಸಾಸಿ ಇನ್ನೊಬ್ಬರು ಜೀ"ಸುವುದೇ ಬದುಕು, ಒಬ್ಬರನ್ನು ಸಾಸದಿದ್ದರೆ ಇನ್ನೊಬ್ಬ ಬಂದು ನನ್ನ ಸಾಸುತ್ತಾನೆ ಇಲ್ಲವೇ ಹಸಿ"ನಿಂದ ಸಾಯುತ್ತಾನೆ, ಒಂದು ಪ್ರಾಣಿಯನ್ನು ಸಾಸಿ ಇನ್ನೊಂದು ಪ್ರಾಣಿ ಬದುಕುವುದೆ ಪ್ರಕೃತಿಯ ನೀತಿ" ಎಂದು ತಿಳಿಹೇಳಿದಾಗ್ಲೂ "ರೇಶ ಮಾತ್ರ ಬದಲಾಗಲಿಲ್ಲ. ಹಾಗೇ ಮಂಕಾಗಿಹೋದ.
"ನಾನು ಪ್ರಪಂಚದಲ್ಲಿ ಬದುಕಿದ್ದು ಸತ್ತ ಪ್ರಾಣಿಯಂತೆ. ನನ್ನ ಬಿಳಿಯನನ್ನು ಈ ಊರಿನ ಜನರೆಲ್ಲ ಸಾಸಿದ್ದಾರೆ. ಅಂದ್ರೆ ನನ್ನನ್ನೇ ಇವರೆಲ್ಲ ಸಾಸಿ ತಿಂದುಬಿಟ್ರಾ?" ಎಂದು "ರೇಶ ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದ...
ಅ"ಗೆ ಉತ್ತರ ಸಿಕ್ಕೀತಾ..... ಗೊತ್ತಾಗ್ಲಿಲ್ಲ.....

No comments:

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2