Friday, October 31, 2008

ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದದ್ದು

ಬಣ್ಣದ ಟಿವಿ

"ಲೇ ನಾಗೇಶ! ನಿಮ್ಮ ಮನೆಗೆ ಬಣ್ಣದ ಟಿವಿ". ತಂದಿಯೇನ್ಲೆ" ಅಂತ ಗೆಳೆಯ ರಘುಪತಿ ಕೇಳಿದಾಗ ಎದೇನ ಸೆಟೆದು "ಇಂದು ತರಬೇಕ್ಲೆ" ಅಂತ ಹೇಳೋ ಸೋಗು ಮಾತು ನೋಡಿದ್ರೆ ಅವು ನೆಲದ ಮೇಲೆ ಕಾಲಿಡುತ್ತಿಲ್ಲ ಅನ್ನೋದು ಆ ಓಣಿಯವರಿಗೆಲ್ಲ ಗೊತ್ತಿತ್ತು. ನಾಗೇಶನ ಅಪ್ಪ ಇದು ನನ್ನ ಜೀವನದ ಕೊನೆ ಆಸೆಯೋ ಏನೋ, ಸಾಯೋ ಟೈ"ಗೆ ಎರಡು ಹನಿ ನೀರು ಹಾಕೋ ಬದಲು ನನಗೆ ಬಣ್ಣದ ಟಿವಿ". ತಗಂಬಾ ಅಂತಂದಗಿತ್ತು. ನಾಗೇಶನ ಅಪ್ಪ ದಿನಕ್ಕೆ ಒಂದು ಸಾರಿಯಾದರೂ ಬಣ್ಣದ ಟಿವಿ". ತಗಂಬಾ ಅಂತ ಹೇಳದೇ ಇರದ ದಿನವೇ ಇರಲಿಲ್ಲ.
ಇನ್ನು ನಾಗೇಶನ ಪರಿಸ್ಥಿತಿ "ಚಿತ್ರ. ಅವನೊಬ್ಬ ಮೂಡಿ ಹುಡುಗ. ಅವನಿಗೆ ಅನಿಸಿದ್ದನ್ನು ಮಾಡುವವ. "ನಮಗೆ ನಿಲುಕಲಾರದ್ದು ಬಣ್ಣದ ಟಿವಿ". ಈಗ ನಾವು ಅದನ್ನು ತಗಣದು ಆಗಾದಿಲ್ಲ. ಇರೋ ನಮ್ಮ ಮುದ್ದು ಬ್ಲಾಕ್ ಅಂಡ್ ವೈಟ್ ಟಿವಿ".ನೇ ನೋಡೋಣ" ಅಂತ ಅನ್ನೋನು. ತಮ್ಮನ ಓದಿಗೆ ಬಣ್ಣದ ಟಿ.". ಅಡ್ಡಾಗುತ್ತೆ, ಅಪ್ಪನ ಕಣ್ಣು ಹಾಳಾಗುತ್ತೆ, "ಗೆ ಪ್ರತಿಯೊಂದನ್ನು ಮನೆಯ ಉಳಿತಾಯದ ಜೊತೆ ಲೆಕ್ಕ ಹಾಕೋನು ನಾಗೇಶ. ಪಾಪ ಅವರಪ್ಪನಿಗೆ ಮಾತ್ರ ನನ್ನ ಮಗನನ್ನು ಯಾರೋ ಏನೋ ಮಾಟ ಮಾಡಿಸಿಬಿಟ್ಟಿದ್ದಾರೆ. ಅವು ನನ್ನ ಮಾತಿಗೆ ಎಂದೂ ಇಲ್ಲ ಅಂದವನಲ್ಲ. ಇತ್ಲಾಗ ಅವನ್ಯಾಕೆ ಈಗಾಡ್ತಿದ್ದಾನೆ ಅಂತ ಅವರಪ್ಪ ದಿನವೂ ಮರುಗುತ್ತಿದ್ದ.
ಪಾಪ ಆ ಬ್ಲಾಕ್ ಅಂಡ್ ವೈಟ್ ಟಿವಿ". ಮಾತ್ರ ನಾಗೇಶನನ್ನು ಅತಿ ಪ್ರೀತಿಂದ ನೋಡೋದು. ಮನೆಯ ಉಳಿದವರೆಲ್ಲ ಅದರ "ವಿರೂಢಿಗಳೇ. ಆ ಮನೆಯಲ್ಲಿ ನಾಗೇಶ ಒಬ್ಬನೇ ಅದರ ಸಂರಕ್ಷಕ. "ಗೆ ಒಂದು ದಿನ ನಾಗೇಶನ ಅಪ್ಪ ಬಣ್ಣದ ಟಿವಿ". ತರೋ ಲಕ್ಷಣಗಳು ಕಾಣದಾಗ ಆ ಸಿಟ್ನಲ್ಲಿ ಟಿವಿ. ರಿಮೋಟನ್ನು ‌ ಮುರಿದುಹಾಕಿದ್ದ. ಆಗ್ಲಾದ್ರೂ ಮಗ ತಂದಾನೋ ಎಂದು. ಆದರೆ ಆ ಮುದ್ದು ಮುರುಕಲು ಬ್ಲಾಕ್ ಅಂಡ್ ವೈಟ್ ಟಿವಿಯನ್ನು ೧೫೦ ರೂ. ಕೊಟ್ಟು ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬಂದಿದ್ದಾತು.
ಇದರಿಂದ ರ್ರ್ಯಾಶ್ ಆದ ನಾಗೇಶ "ಅಪ್ಪಾ, ಮೊದಲೇ ನಿನಗೆ ಕಣ್ಣು ಸರಿಗಿಲ್ಲ, ಆಪರೇಷನ್ ಮಾಡ್ಸಬೇಕು, ಇನ್ನು ನೀನು ಬಣ್ಣದ ಟಿವಿ". ನೋಡ್‌ಬೇಕೆಂಬ ಚಟ ಬೇರೆ. ಇಂತ ದೊಡ್ಡ ವಯಸ್ಸಲ್ಲಿ ಯಾರಾದ್ರೂ ಮಗ ತಂದೆಯನ್ನು ಪೀಡಿಸುತ್ತಾನೆ, ಆದರೆ ನೀನೇನಪ್ಪಾ ಮಗನನ್ನೇ ಪೀಡಿಸುತ್ತೀ" ಎಂದಾಗ, ನಾಗೇಶನ ಮುಖದಲ್ಲಿ ಅಸಹಾಯಕತೆ ಇತ್ತು. "ಓಗ್ಲೋ ಬಾಡ್ಕೋ ನನಗೆ ಹೇಳಾಕಾ ಬರುತ್ತೀಯ, ತಿರುಗು ಮಾತಾಡ್ತೀಯ, ಬಾ ನಮ್ಮ ಫ್ರೆಂಡ್ ಅಂಜಿನಪ್ಪನ ಮಗ ಇದಾನೆ. ಅವರಪ್ಪ ಕೇಳೋದೇ ಬೇಡ ಮನೆಗೆ ಟಿವಿ". ತಂದುಬಿಟ್ಟ. ಎಷ್ಟು ಚಂದ ಅಯ್ತೆ, "ರೋ ರಾಜಕುಮಾರ್ ಅದರಲ್ಲಿ ಹ್ಯಾಗೆ ಕಾಣುತ್ತಾನೆ ಗೊತ್ತಾ. ಥೇಟು ಟೆಂಟ್‌ನಾಗ ನೋಡಿದಹಾಗಾಗುತ್ತೆ. ನಮ್ಮದರಲ್ಲಿ ಕಾಣುತ್ತಾನೆ ಒಳ್ಳೆ ಕಪುಗೆ! ಇದು ಇಲ್ಲಿದ್ರೂ ಒಂದೇ ತಿಪ್ಪೇಲಿದ್ರೂ ಒಂದೇ. ಅವರ ಮನ್ಯಾಗ ಟಿವಿ". ನೋಡಿದ ಮ್ಯಾಲಂತೂ ನಾನು ನಿದ್ಧಾರ ಮಾಡೀನಿ. ಇನ್ನು ಮುಂದೆ ನೋಡಿದ್ರೆ ಬಣ್ಣದ ಟಿವಿಯಲ್ಲೇ" ಎಂದು ಅಪ್ಪ ಕಿಡಿಕಾರಿದ. "ಇದೋ ನನ್ನ ಪ್ರೆಂಡ್ ಮನೆಗೇ ಹೊಂಟಿದೀನಿ. ಇವತ್ತು ರಾಜ್‌ಕುಮಾರ್ ಸಿನಿಮಾ ಐತೆ ಎಂದು ತನಗೂ ತನ್ನ ಮನೆಗೆ ಸಂಬಂಧವಿಲ್ಲವೇನೋ ಅನ್ನೋ ರೀತಿ ನಾಗೇಶನ ಅಪ್ಪ ಮನೆಂದ ಹೊರ ಹೊರಟ.
ಇತ್ಲಾಗ ಏನೋ ನನ್ನ ಮನೆಯವರಿಗೆ ಒಳ್ಳೆಯದನ್ನು ಬಯಸೋದು ತಪ್ಪಾಗಿದೆ. ನಮ್ಮಪ್ಪ ನಾನು ಬಣ್ಣದ ಟಿವಿ ತರದೆ ಇದ್ದಿದ್ದಕ್ಕೆ ನನ್ನನ್ನು ವಿಲನ್ ರೀತಿ ನೋಡ್ತಾನೆ. ಅಂಗ್ ಲೆಕ್ಕ ಹಾಕಿದ್ರೆ ನಮ್ಮಮ್ಮನೆ ಎಷ್ಟೋ ವಾಸಿ. ತಂದಿದ್ದನ್ನು ಕುಚ್ ಆಕ್ತಾಳೆ. ಅದೇನೋ ಒಂದೊಂದು ಸಾರಿ ಮನಿ ತಗ, ಮುಂದೆ ನಿಮಗೆ ಒಂದು ಸೂರು ಆಗಲಿ, ಇರೋರು ಇಬ್ಬರು ಮಕ್ಳು. ಇಬ್ರಿಗೆ ಒಂದೊಂದು ಮನೆ ಇರಲಿ. ಮುಂದೆ ಬರೋ ಸೊಸೆಯವರು ನನ್ನ ಬೈಕಂಬಾರ್ದು. ನೀನು ಹೊಸ ಮನೆ ತಗ. ತಮ್ಮನಿಗೆ ಈ ಹಳೇಮನಿನೇ ಕೆಡ" ಹಾಕ್ಸಿದರಾಯ್ತು ಅಂತ ರಾಗ ತೆಗೀತಾಳೆ. ಅಮ್ಮನ ರಾಗ ತಡಕಬೌದು. ಆದರೆ ಅಪ್ಪಂದು ಅಬ್ಬಬ್ಬ! ನನಗೆ ತಡಕಣಕಾಗ್ತಿಲ್ಲ. ಎಲ್ಲಾದ್ರು ಬಡ್ಡಿ ಸಾಲ ಮಾಡಿಯಾದ್ರು ತಂದುಬಿಡ್ಲಾ ಅಂದಕಂಡಿದೀನಿ" ಅಂತ ನಾಗೇಶ ತನ್ನ ಫ್ರೆಂಡ್ ಅಂಬ್ರೇಶನ ಹತ್ತಿರ ಮನದ ಅಳಲನ್ನು ತೋಡಿಕೊಂಡ. 'ತಡಕಲೆ ಯಾಕಂಗ ಅರ್‍ಜೆಂಟ್ ಮಾಡ್ತೀ. ಈ ಸಾರಿ ಬಜೆಟ್‌ನಲ್ಲಿ ಟಿವಿ ರೇಟು ಕಡಿಮೆ ಮಾಡ್ತಾರಂತೆ. ನೋಡುವ, ನಾನೊಂದು ಸ್ವಲ್ಪ ಹಣ ಕೊಡ್ತೀನಿ. ನೀನೊಂದು ಸ್ವಲ್ಪ ಹಣ ಹಾಕಿ ತಂದುಬಿಡು ಅಂದಾಗ ನಾಗೇಶನ ಮನಸು ತಣ್ಣಗಾತು. ಅಬ್ಬ! ಇವತ್ತು ನಾನೇನೋ ಸ್ವಲ್ವ ತಣ್ಣಗೆ ನಿದ್ರೆ ಮಾಡಬೌದು ಅಂತಂದಕ್ಕಂಡ.
"ಅಪ್ಪ ನೋಡು ಟಿವಿ ತಂದಿದ್ದೀನಿ, ಅದೇನೋ ನೋಡುತೀ ನೋಡು. ನೀನು ಬಣ್ಣದ ಟಿವಿಯನ್ನು ನೋಡಬೇಕಂತ ಅವರಿವರ ಮನೆಗೆ ಹೋಗಬ್ಯಾಡ. ನನಗೆ ಅದಿಷ್ಟಾಗಲ್ಲ. ಮನೆಗೆ ತಂದ ಟಿವಿಯ ಪ್ಯಾಕ್ ತರಾತುರಿಯಲ್ಲಿ ಒಡೆದು ಇನ್ನೇನು ಎಲ್ಲ ಸೆಟ್ ಮಾಡಿ 'ಅಪ್ಪ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು ಅಂದಾಗ' ನಾನು ಮಾಡಲ್ಲ ನೀನೇ ಮಾಡು ಅಂತ ಅಪ್ಪ ಹೇಳಿದ. "ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು, ಇಲ್ಲಪ್ಪಾ ನೀನು ಸ್ಟಾರ್‍ಟ್ ಮಾಡು, ಬಟನ್ ಒತ್ತು... ಒತ್ತು... ಒತ್ತು..." ಲೇ ನಾಗೇಶ ಏನು ಕನವರಿಸ್ತಿದಿ, ಎದ್ದೇಳು ಬೆಳಕರಿತು. ಅದೇನು ಅರ್ಧ ಗಂಟೆಂದ ಸ್ಟಾರ್‍ಟ್ ಮಾಡು... ಬಟನ್ ಒತ್ತು... ಅಂತಿದೀಯ ಎಂದು ಅವರಮ್ಮ ಉಸಿರಿದಾಗ, ಸೀದಾ ಎದ್ದು ನಾಗೇಶ ಸರಸರನೇ ಟಿವಿ ರೂಮಿಗೆ ಹೋಗಿ ತನ್ನ ಹಳೆ ಮುದ್ದಾದ ಬ್ಲಾಕ್ ಅಂಡ್ ವೈಟ್ ಟಿವಿ ನೋಡಿ ಪೆಚ್ಚುಮೋರೆಂದ ಬಂದು ಬಾರಲು ಮಲಗಿದ. ನಿದ್ರೆ ಬರುತ್ತಿಲ್ಲ... ಇಷ್ಟೊತ್ತು ಕಂಡದ್ದು ಕನಸಾ? ನನಸಾಗಿದ್ದರೆ ಎಷ್ಟು ಚೆಂದ ಇರುತ್ತಿತ್ತು. ಮನೆಯವರೆಲ್ಲ ಎಷ್ಟು ಸಂತೋಷದಿಂದ್ದರು. ನನ್ನ ಕೈಲಿ ಬಣ್ಣದ ಟಿವಿ ತರಕಾಗುತ್ತಾ? ಈ ಗವರ್‍ನಮೆಂಟ್ ಅದ್ಯಾವಾಗ ಟಿವಿ ರೇಟು ಕಡಿಮೆ ಮಾಡುತ್ತೋ, ನನ್ನ ಫ್ರೆಂಡ್ ಅಂಬ್ರೇಶ ಯಾವಾಗ ದುಡ್ಡು ಕೊಡುಸ್ತಾನೋ, ನಾನ್ಯಾವಾಗ ನನ್ನ ಅಪ್ಪನ ಆಸೆಯನ್ನು ತೀರಿಸ್ತೀನೋ ತಿಳಿಯದು.
ಹಾಗೆ ಲೆಕ್ಕ ಹಾಕಿದ್ರೆ ನಾಗೇಶನಿಗೆ ಬಣ್ಣದ ಟಿವಿ ತರಲು ಅಪೂಟ ಇಷ್ಟಾನೇ ಇದ್ದಿಲ್ಲ. ಅವರ ಫ್ರೆಂಡ್ ಟಿವಿ ತಂದ ಒಂದು ವರ್ಷಕ್ಕೆ ಅವನ ಕಣ್ಣಿಗೆ ಇನ್ನೆರಡು ಕಣ್ಣು (ಚಸ್ಮ) ಬಂದಿದ್ವು. ಆ ರೀತಿ ನನಗೆಲ್ಲಿ ಬಂದುಬಿಡುತ್ತೋ ಅನ್ನೋ ಕಾರಣ ಕೂಡ ಕಾಡುತ್ತಿತ್ತು. ನಾಗೇಶ ನಿಜವಾಗಿಯೂ ಸ್ಫುರದ್ರೂಪಿಯಾಗಿದ್ದ. ಎಲ್ಲರೂ ನನ್ನನ್ನು ನೋಡ್ತಾರೆ. ಆದರೆ ನಾನೇ ಅವರನ್ನು ನೋಡಂಗಿಲ್ಲ, ಮಾತಾಡಕ "ಂಜರಿತೀನಿ ಅಂದ್ಕಂಡಿದ್ದ. ಅವನು ಕೆಲಸ ಮಾಡುತ್ತಿರುವ ಆಪಿsಸ್‌ನ ಗೆಳತಿ ಸೌಮ್ಯ ಕೂಡ 'ನೀನು ಚೆಂದ ಇದಿಯಂತ ಸೊಕ್ಕು ಬಂದಿದೆ.' ಅದ್ಕೆ ನನ್ನ ಜೊತೆ ಮಾತಾಡ್ತಿಲ್ಲ ಅಲ್ವಾ? ಅಂತ ಒಂದು ಸಾರಿ ಅಂದಿದ್ಲು. ಹಾಗಾಗಿ ಅವು ತನ್ನ ಸೌಂದರ್‍ಯಕ್ಕೆ ಸ್ವಲ್ಪ ಜಾಸ್ತೀನೇ ಪ್ರಾಮುಖ್ಯತೆ ಕೊಟ್ಟಿದ್ದ.
ನಾಗೇಶ ಒಂದು ಸಾರಿ ಗುಡಿ ಮುಂದೆ ಕೂತು ಪುರಾಣ ಹೇಳೋ ಸ್ವಾಮಿಗಳು ಬೋಧಿಸುತ್ತ "ನಮಗೆ ಕನಸುಗಳು ಬೀಳೋದು ಯಾವಾಗ ಅಂದ್ರೆ ತನ್ನ ಜೀವನದಲ್ಲಿ ಯಾವುದನ್ನು ಪೂರೈಸಲು ಆಗೋದಿಲ್ಲವೋ, ಅವುಗಳೆಲ್ಲವು ಕನಸಿನಲ್ಲಿ ಬಂದು ಆ ಆಸೆಯನ್ನು ಪೂರೈಸಿಕೊಳ್ಳುತ್ತೆ, ಇಲ್ಲದೆ ಹೋದರೆ ಕನಸಿಗೆ ಒಂದು ಬೆಲೇನೇ ಇರೋಲ್ಲ. ಬೇಕಾದರೆ ನೋಡಿ ಕನಸಲ್ಲಿ ಬರೀ ಕಲ್ಪನೆಗಳೇ ಬಹಳ ಇರುತ್ತೆ ಅಂತಂದ್ರು." ಆಗ ನಾಗೇಶನಿಗೆ ದಿಗ್ಭ್ನ್ರಮೆ. ನಾನು ಬರೀ ಕನಸಲ್ಲಿ ಟಿವಿ ನೋಡಬಾರ್‍ದು, ಹಾಗಾಗಬಾರ್‍ದು. ನಾನು ನಿಜ ಜೀವನದಲ್ಲಿ ಬಣ್ಣದ ಟಿವಿ ತರ್‍ಲೇಬೇಕು ಅಂತ ನಿರ್ಧಾರ ಮಾಡ್ದ. ನಮ್ಮಪ್ಪನ ಮಹದಾಸೆ ಟಿವಿ ತರೋದು. ನನ್ನಿಂದ ಅದು ಸಾಧ್ಯಾನಾ? ಇಲ್ಲ, ನಾನು ಅದು ಎಷ್ಟೇ ಸಾಲವಾಗಲಿ ತರಬೇಕು. ನನ್ನಪ್ಪನ ಆಸೇನೇ ತೀರಿಸ್ಲೇಬೇಕು. ಆದರೆ ಅಷ್ಟು ದುಡ್ಡು ನನ್ನಲ್ಲಿ ಎಲ್ಲಿದ. ಬಣ್ಣದ ಟಿವಿಯೋ ಹನ್ನೆರಡು ಸಾವಿರ ಮತ್ತು ಅದ್ಕಿಂತ ಹೆಚ್ಚು. ನನ್ನಿಂದ ಅಷ್ಟು ಹಣ ಒಟ್ಟಿಗೆ ಕೂಡಿಡಕಾಗಲ್ಲ. ಕೂಡಿಣೋ ಅಂದ್ರೆ ಏನೇನೋ ಅಡ್ಡ ಬಂದು ಖರ್ಚಿಗೆ ದುಡ್ಡು ಬಳಕೆ ಆಗುತ್ತೆ. ಅದಕ್ಕೆ ಪಿಗ್ಮಿ ರಾಗಣ್ಣನಿಗೆ ದಿನ ದುಡ್ಡು ಕಟ್ಟಿದರೆ ಹೇಗಿರುತ್ತೆ ಅಂತ ಯೋಚಿಸಿದ. ನಾನು ಬಣ್ಣದ ಟಿವಿ ತರಬೇಕು, ಅದ್ಕಾಗಿ ನಾನು ದುಡ್ಡು ಕಟ್ಟಿದ್ದಕ್ಕಿಂತ ಜಾಸ್ತೀನೇ ಕೊಡ್ಬೇಕಂತ ಷರತ್ತು ಹಾಕಿ ಪಿಗ್ಮಿ ಕಟ್ಟಲು ಪ್ರಾರಂಭಿಸಿದ. ಹೀಗೆ ನಡಿದಿತ್ತು ಅವನ ತಂದೆಯ ಹಠದ ಪ್ರತಿಫಲದ ಬಣ್ಣದ ಟಿವಿ.
ಇವನು ದಿನಾ ರಾತ್ರಿ ಯೋಚ್ನೆ ಮಾಡೋನು. ನಾನು ಇನ್ನು ಏನು ಬೇರೆ ಕೆಲಸ ಮಾಡಿದ್ರೆ ಟಿ.". ತರಬಹುದು. ಅತ್ಲಾಗ ತಮ್ಮನ ಕಾಟಾನೂ ಜಾಸ್ತಿಯಾಗಿತ್ತು. "ಏನಣ್ಣ ನೀನು ಇನ್ನು ಟಿ.". ತರಲಿಲ್ಲ. ನಮ್ಮ ಫ್ರೆಂಡ್ಸೆಲ್ಲ ಕಲರ್ ಟಿ.". ತಂದ್ರಾ ಅಂತ ಕೇಳ್ತಿದ್ದಾರೆ?" ನೀನು ನೋಡಿದ್ರೆ ಅಂತ... ಶಾಪ ಹಾಕ್ತಿದ್ದ. ಅಸಲು ಈ ನಾಗೇಶ ಟಿ.". "ಷಯದಲ್ಲಿ ಮಾಡಿದ ಒಂದು ದೊಡ್ಡ ತಪ್ಪೇನು ಗೊತ್ತಾ......?!
ನಾಗೇಶ ಬಣ್ಣದ ಟಿ.". ತರಬೇಕೂಂತ ಅಂದುಕೊಂಡಿದ್ದ. ಅವನ ಎರಡು ತಿಂಗಳ ಸಂಬಳ ಇನ್ನು ಬಂದಿದ್ದಿಲ್ಲ. ಆಪಿsಸಿನ ಪಿವಾನ್ ರಘುಪತಿ ಕಲರ್ ಟಿ.". ತಂದು ಬರೀ ಒಂದು ತಿಂಗಳಾಗಿತ್ತು. ನನ್ನ ಮನೆಯ ಹೊಸ ಟಿ." ಕೊಡುತ್ತೀನಿ. ನಿಮಗೆ ಬರುವ ಎರಡು ತಿಂಗಳ ಸಂಬಳ ನನಗೆ ಕೊಡಿ ಸಾರ್, ನನಗೆ ಹಣದ ಅರ್‍ಜೆಂಟ್ ಇದೆ ಎಂದು ಆಸೆ ಹುಟ್ಟಿಸಿದ್ದ. ಇದಕ್ಕೆ ನಾಗೇಶ ಒಪ್ಪಿ ಎರಡು ತಿಂಗಳ ಸಂಬಳ ಒಟ್ಟು ಆರು ಸಾ"ರ ರೂ.ಗಳನ್ನು ಮನೆಗೆ ಕೊಡದೇ ಪಿವಾನ್‌ಗೆ ನಾಗೇಶ ಕೊಟ್ಟಿದ್ದ. ಇನ್ನೇನು ನನಗೆ ಸೋ" ರೇಟ್‌ಗೆ ಹೊಸ ಕಲರ್ ಟಿ.". ಸಿಗುತ್ತಲ್ಲ ಅನ್ನೋ ಖುಯಲ್ಲಿ ತನ್ನ ಸಂತೋಷ ತಡಕಣಲಿಕ್ಕಾಗದೆ ಇಡೀ ಓಣಿಗೆಲ್ಲ ನಾನು ಬಣ್ಣದ ಟಿ.". ತರುತ್ತಿದ್ದೀನೆಂದು ಡಂಗುರ ಹೊಡೆದುಬಿಟ್ಟ. ಅವನ ಮನೆಯಲ್ಲಿ ಈ "ಷಯ ಹೇಳಿದಾಗಂತೂ ಹಬ್ಬದ ವಾತಾವರಣವೇ ಮೂಡಿಬಿಟ್ಟಿತ್ತು. ಮನೆಯಲ್ಲಿದ್ದ ಎಲ್ಲರಿಗೂ ನಿರಂಜನ ಬೇಕರಿಂದ ಪೇಡ ತರಿಸಿ ಸಿ" ಹಂಚಿದ್ದಾತು. ಆದರೆ ಅವನ ಪಿವಾನ್ ರಘುಪತಿ ಮೊದಲೇ ಅತೀ ಸಾಲ ಮಾಡಿ ಅವತ್ತಿನ "ಂದಿನ ದಿನವೇ ಮನೆ ಖಾಲಿ ಮಾಡಿ ಓಡಿಹೋಗ್ಬಿಟ್ಟಿದ್ದ. ಈ "ಷಯ ಕೇಳಿ ಅವನಿಗೆ ದಿಗ್ಭ್ನ್ರಮೆ ಉಂಟಾತು. ನಿಂತಲ್ಲಿ ನಿಲ್ಲಗಾಗ್ತಿಲ್ಲ, ಕುಂತಲ್ಲಿ ಕೂಡಕಾಗ್ತಿಲ್ಲ. ಅವನ ಆಸೆಯ ಕನಸಿನ ಗೋಪುರ ನುಚ್ಚು ನೂರಾಗಿತ್ತು. ಇನ್ನು ನಾನು ಬಣ್ಣದ ಟಿ.".ನ ತರೋದು ಕನಸಿನ ಮಾತೇ, ಬದುಕಲಿಕ್ಕೆ ಕೂಡ ಕುತ್ತು ತಂದುಬಿಟ್ಟನಲ್ಲಾ ಈ ಪಿವಾನ್ ರಘುಪತಿ ಎಂದು ಶಪಿಸಿಕೊಂಡ. ಇದನ್ನು ನಾನು ಯಾರ ಹತ್ರ ಹೇಳಿಕೊಳ್ಳಲಿ. ಅತ್ತ ಹೇಳಿಕೊಳ್ಳೊಕಾಗಲ್ಲ, ಇತ್ತ ಬಿಡೋಕಾಗಲ್ಲ ಅಂದುಕೊಂಡ. ಉಗುಳು ನುಂಗೋ ಹಾಗಿಲ್ಲ, ಬಿಡೋ ಹಾಗಿಲ್ಲ ಹಾಗಿತ್ತು ಅವನ ಪರಿಸ್ಥಿತಿ. ಅವನು ಜೀವನದಲ್ಲಿಯೇ ಮೊದಲಬಾರಿಗೆ ರಾತ್ರಿ ನಿದ್ರಾ ದೇವತೆ ಸಿಟ್ಟಾಗಿದ್ದಳು. ಇನ್ನು ಕಿರಾಣಿಯವರು, ಕರೆಂಟ್ ಬಿಲ್ ಬೇರೇ ಕಟ್ಟಿಲ್ಲ. ಹ್ಯಾಗಪ್ಪ ದೇವರೇ ಅಂತ ತಲೆ ಮೇಲೆ ಕೈ ಹೊತ್ತು ಕೂತ. ನಿದ್ರೆ ಬರ್‍ತಾನೇ ಇಲ್ಲ. ಮನೆಗೆ ಏನೋ ಸುಳ್ಳು ಹೇಳಿ... ಎರಡು ತಿಂಗಳ ಸಂಬಳ ಕೊಡದೇ ಈ ರೀತಿ ಮೋಸಹೋಗಿದ್ದ.
ಇನ್ನು ನನ್ನಿಂದ ಬಣ್ಣದ ಟಿ.". ತರಲು ಆಗದು. ಅದು ನನಗೆ ಕನಸಾಗಿ ಕಂಡಿದ್ದು. ಆದ್ರೆ ಅದು ನಾನು ಕಂಡ ಕನಸು ಬೆಳಗಿನದ್ದೋ, ರಾತ್ರಿಯದ್ದೋ. ಅದು ಬೆಳಗಿನ ಕನಸಾಗಿದ್ರೆ ನನಸಾಗುತ್ತಾ? ಗೊತ್ತಿಲ್ಲ. ನನ್ನಪ್ಪ ತನಗಾಗಿ ಏನೂ ಕೇಳಿದವನಲ್ಲ. ಆದರೆ ಆತನ ಒಂದೇ ಒಂದು ಆಸೆಯನ್ನು ಈಡೇರಿಸ್ದೇ ಹೋದೆನಲ್ಲಾ ಎಂದು ಬಹಳ ಪೇಚಾಡಿದ. ತನ್ನ "ದಿsಯನ್ನು ತಾನೇ ಬೈದುಕೊಂಡ.
ಆಗ ಬಂತು ನೋಡ್ರಿ ದೀಪಾವಳಿ. ದೀಪಾವಳಿ ಹಬ್ಬ ಇನ್ನು ಎರಡು ತಿಂಗಳ ಮುಂಚೆ ತ್ರಿಶಂಕು ಪತ್ರಿಕೆಯಲ್ಲಿ ಜಾ"ರಾತು ಈ ರೀತಿ ಕೊಟ್ಟಿದ್ದರು.
ಕತೆ, ಕವನಗಳಿಗೆ ಅಹ್ವಾನ, ಹೊಸಬರಿಗೆ ಆದ್ಯತೆ.
ಕತೆ
ಪ್ರಥಮ ಬಹುಮಾನ ೧೦,೦೦೦
ದ್ವಿತೀಯ ಬಹುಮಾನ ೫,೦೦೦
ಸಮಾಧಾನಕರ ಬಹುಮಾನ ೧,೦೦೦ರೂ.ಗಳ ಅಂತಿತ್ತು.
ನಾಗೇಶನಿಗೆ ಕತೆ, ಕವನಗಳ ಮೇಲೆ ಸ್ವಲ್ಪ ಹುಚ್ಚು ಇತ್ತು. ಆದರೆ ಎಂದೂ ಅವನು ಬರೆದಿದ್ದಿಲ್ಲ. ಅವನು ತನ್ನ ಹಳೇ ಪ್ರೇಯಸಿಗೆ ಪತ್ರ ಬರೆದದ್ದು ಬಿಟ್ರೆ, ಪತ್ರಿಕೆಯಲ್ಲಿ ಕತೆ, ಕವನಗಳನ್ನು ಓದ್ತಿದ್ದ.
ಈ ರೀತಿ ಇರೋ ಜಾ"ರಾತಿನಲ್ಲಿ ೧೦,೦೦೦ ರೂ.ಗಳು ಅಂತ ಇದ್ದದ್ದು ಅವನ ಮನದಲ್ಲಿ ಅಚ್ಚೊತ್ತಿತ್ತು. ನನ್ನ ಹತ್ತಿರ ೧೦,೦೦೦ ಇದ್ದಿದ್ದರೆ, ಅದರ ಜೊತೆಗೆ ಪಿಗ್ಮಿಯಲ್ಲಿರುವ ಎರಡು ಸಾ"ರ ದುಡ್ಡನ್ನು ಸೇರಿ ಬಣ್ಣದ ಟಿ.". ತರಬಹುದಿತ್ತಲ್ಲ ಅಂತ ಆಸೆಪಟ್ಟ. ಆಗ ಅವನಿಗೆ ತಟ್ಟಂಥ ಹೊಳೆದದ್ದು, ನಾನು ಕತೆ ಬರೆದರೆ ಹೇಗಿರುತ್ತೆ, ಅದಕ್ಕೆ ಹತ್ತು ಸಾ"ರ ಬಹುಮಾನ ಬಂದ್ರೆ ಹೇಗಿರುತ್ತೆ, ಕಷ್ಟುಪಟ್ಟು ದುಡಿದ ದುಡ್ಡಂತು ನಯಾ ಪೈಸೆ ಕೈಗತ್ತಲಿಲ್ಲ. ಸಾಲ ಮಾಡಿ ಕಿರಾಣಿ ಸಾಮಾನು ತರುವಂತಾತು. ನೋಡೋಣ ಇದೊಂದು ರೀತಿ ಪರೀಕ್ಷೆ ಅಂತಂದುಕೊಂಡ.
ಸರಿ ಏನು ಬರೀಬೇಕು. ಯಾವ ಕತೆ ಬರೀಲಿ. ಯಾವ ರೀತಿ ಕತೆ ಬರೆದರೆ ಹತ್ತು ಸಾ"ರ ರೂ. ಬರುತ್ತೆ. ಅವನಿಗೆ ಕತೆಗಿಂತ ಮುಖ್ಯವಾಗಿ ಪ್ರಥಮ ಬಹುಮಾನ ಬರಬೇಕಂದ್ರೆ ಏನು ಮಾಡಬೇಕು ಅಂತ ಯೋಚ್ನೆ ಮಾಡುತ್ತಿದ್ದ. ಹೇಗೆ ಬರೆದರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡಹತ್ತಿದ. "ಗೆ ದಿನಗಳು ಕಳೆಯಲಾರಂಬಿsಸಿದರು. ಆದ್ರೆ ಏನು ಬರೀಬೇಕು ಹೊಳಿತಾನೇ ಇಲ್ಲ. ಒಂದು "ಷಯವಂತೂ ಗೊತ್ತಿತ್ತು ಕುಂ.". ಅವರ ಕತೆಗಳಲ್ಲಿ ಪಾತ್ರಗಳು ನೈಜವಾಗಿರುತ್ತೆ. ಸಮಾಜದ ನೈಜ ಚಿತ್ರಣ ಅವರ ಕತೆಯಲ್ಲಿರುತ್ತೆ. ಅವರ ಹಲವಾರು ಕಥೆಗಳನ್ನ ಓದಿದ್ದ. ಹಾಗೇ ಬರೀಬೇಕು ಅಂತ ತಾನು ನಿರ್ಧಾರ ಮಾಡಿಕೊಂಡ. ಅವನ ಮನದಲ್ಲಿ ಠೊಣ್ಣಿ ಪಾತ್ರ ಮನದಲ್ಲಿ ಓಡಾಡಿಸಲಾರಂಬಿsಸಿತು.
ಆಗ ಹೊಳೆತು ಅವನಿಗೆ. ತನ್ನದೇ ನರಳಾಟದ ಕಥಾವಸ್ತು ಬಣ್ಣದ ಟಿ.". ಕಥೆಯ ರ್ಶೀಕೆ ಬರೆದ. ತಾನುಂಡ ಕ" ಅನುಭವಗಳನ್ನ "ನೀನಿನ್ನು ಟಿ.". ತರಲಿಲ್ಲವಾ ಅನ್ನೋ?" ವ್ಯಂಗ್ಯ ಮಾತುಗಳನ್ನು ನೆನೆಸಿಕೊಂಡು ತನ್ನದೇ ಬದುಕಿನ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕತೆ ಬರೆದುಬಿಟ್ಟ. ಬರೆದು ಒಂದು ಬಾರಿ ಓದಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರೇ ನನ್ನ ಈ ಕಥೆಗೆ ಮೊದಲನೇ ಬಹುಮಾನ ಸಿಗೋ ಹಾಗೆ ಮಾಡಪ್ಪ, ನಮ್ಮಪ್ಪನ ಆಸೆಯ ಬಣ್ಣದ ಟಿ.". ತರುವಂತೆ ಮಾಡಪ್ಪ. ನಿನಗೆ ಎರಡು ತೆಂಗಿನಕಾ ಹೊಡಿತೀನಿ ಅಂದು ತಾನು ಬರೆದ ಕತೆಯನ್ನು ಹನುಮಪ್ಪನ ಮುಂದಿಟ್ಟು ಪೂಜೆ ಮಾಡಿ ಆಂಜನೇಯನ ಆಶೀರ್ವಾದದೊಂದಿಗೆ ಪೋಸ್ಟ್ ಮಾಡಿಯೇಬಿಟ್ಟ. ದೀಪಾವಳಿಗೆ ಇನ್ನು ಒಂದು ತಿಂಗಳು ಟೈ"ತ್ತು. ಅದರ ಅನೌನ್ಸ್‌ಮೆಂಟ್ ಸರಿಯಾಗಿ ದೀಪಾವಳಿ ದಿನದಂದು ನಿರ್ಧಾರವಾಗಿತ್ತು.
ನಾಗೇಶನು ತನ್ನ ತಂದೆಗೋಸ್ಕರ ಅಲ್ಲದಿದ್ದರೂ ಆ ಓಣಿಯವರಿಗೋಸ್ಕರ ಟಿ.". ತರಲೇಬೇಕಿತ್ತು. ಯಾಕೆಂದರೆ ಅಷ್ಟು ವ್ಯಂಗ್ಯವಾಗಿ "ಏನಪ್ಪ ನಾಗೇಶ ನಿಮ್ಮ ಮನೆಗೆ ಹೋಗಿದ್ವಿ ತುಂಬಾ ದೊಡ್ಡದಲ್ವಾ? ನಿನ್ನ ಬಣ್ಣದ ಟಿ.".!" ಅನ್ನೋರು. ತರತ್ತೀನಿ ಅಂತ ಡಂಗುರ ಸಾರಿಸಿದ್ಯಲ್ಲ ಅಂತ ಕೊಂಕಿನಿಂದ ಮಾತಾಡೋರು. ಆಗಂತೂ ನಾಗೇಶನ ಮನಸು ಹುಳಿಹುಳಿ. ಒಂದು ಬಣ್ಣದ ಟಿ.".ಗೋಸ್ಕರ ಆತ್ಮಹತ್ಯೆಯೂ ಮಾಡಿಕೊಳ್ಳಬಹುದು ಅಂತ ಗೊತ್ತಾದದ್ದೇ ಆವಾಗ. ಅವನಿಗೆ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ ಅಂತಾನೂ ಕೂಡ ಮನದಲ್ಲಿ ಯೋಚನೆ ಬಂದಿತ್ತು. ಆದರೆ ಸ್ವಲ್ಪ ಭಂಡನೇ ಆಗಿದ್ದ ನಾಗೇಶ. ಇತ್ತ ನಾಗೇಶನ ಅಪ್ಪ ಟಿ.". ತಗಂಡುಬಾ ಅಂತ ಹೇಳೋದನ್ನ ಬಿಟ್ಟುಬಿಟ್ಟಿದ್ದ. ಅಷ್ಟು ರೋಸಿಹೋಗಿತ್ತು ಅವರಪ್ಪನಿಗೆ. ನಾನು ಮನೇನ ಒತ್ತಿ ಇಟ್ಟಾದರೂ ಬಣ್ಣದ ಟಿ.".ನ ತರುತ್ತೀನ್ಲೇ ಅಂತ ಜೋರಾಗಿ ಒದರುತ್ತಿದ್ದ. ಆಗಂತೂ ಅವನ ಮನಸೆಲ್ಲಾ ಚೂರುಚೂರಾಗಿತ್ತು.
ಇನ್ನೇನು ಕೊನೆಗೆ ದೀಪಾವಳಿ ಬಂತು. ಫಲಿತಾಂಶದ ಪ್ರಕಟಣೆ ತ್ರಿಶಂಕು ಪತ್ರಿಕೆಯಲ್ಲಿ ಬಂದಿತ್ತು. ಫಲಿತಾಂಶ ಅಚ್ಚರಿಂದಲೇ ಕೂಡಿತ್ತು. ಆಂಜನೇಯನ ಆಶೀರ್ವಾದದಿಂದಲೋ ಏನೋ ಬಣ್ಣದ ಟಿ.". ಕಥೆಗೆ ಪ್ರಥಮ ಬಹುಮಾನ ಬಂದಿತ್ತು. ಇದನ್ನು ನೋಡಿದ ನಾಗೇಶನಿಗೆ, ತನ್ನನ್ನು ತಾನೇ ನಂಬಲಾಗುತ್ತಿಲ್ಲ. ಸಮಾರಂಭಕ್ಕೆ ಆಹ್ವಾನ ಬಂದಿತ್ತು. ೧೦,೦೦೦ ಜೊತೆಗೆ ಸನ್ಮಾನ ಕೂಡ!
ಸಭೆಗೆ ಪ್ರಥಮ ಪ್ರಶಸ್ತಿ ಕಥೆ "ಜೇತ ಕಥೆಗಾರ ನಾಗೇಶ ಅವರು ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಬೇಕೆಂದು ನುಡಿದಾಗ, ನಾಗೇಶನು ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತು ಕೈಂದ ನಮಸ್ಕರಿಸಿ, ವೇದಿಕೆಯಲ್ಲಿರುವ ಎಲ್ರಿಗೂ ನಮಸ್ಕಾರ. ದಯ"ಟ್ಟು ನನ್ನನ್ನು ಕಥೆಗಾರನೆನ್ನಬೇಡಿ. ಯಾಕೆಂದ್ರೆ ನಾನು ಕಥೆಗಾರನಲ್ಲ. ನಾನು ಮುಂದೆ ಕಥೆಗಾರನಾಗುವೆನೇನೋ ತಿಳಿಯದು. ಪರಿಸ್ಥಿತಿ ನನ್ನ ಬದುಕನ್ನು ಹಾಗೆ ಕತೆಗಾರನನ್ನಾಗಿ ಮಾಡಿಸಿತ್ತು. ಅದು ನಿಮಗೆ ಕತೆಯಾಗಿರಬಹುದು. ಆದರೆ ಅದು ನನ್ನ ವಾಸ್ತವ ಜೀವನದ ಘಟನೆ. ನನಗೆ ದಯ"ಟ್ಟು ೧೦,೦೦೦ ಜೊತೆಗೆ ಸನ್ಮಾನ ಮಾಡುವುದು ಬೇಡ. ಸನ್ಮಾನದ ಖರ್ಚಿಗೆ ತಗಲುವ ಹಣವನ್ನು ಕೊಡಿ. ನಾನು ಈ ಕಥೆಯನ್ನು ಬರೆಯಲು ಬೇರೆ ಏನೂ ಕಾರಣವಲ್ಲ. ಮುಖ್ಯ ಕಾರಣ ಈ ಬಣ್ಣದ ಟಿ.".ಯೇ. ಈ ಬಣ್ಣದ ಟಿ.". ನನ್ನನ್ನು ಚಿತ್ರ"ಂಸೆ ಮಾಡಿದೆ, ಪಡಬಾರದ ಕಷ್ಟಗಳನ್ನು, ನರಳಾಟವನ್ನು ಕೊಟ್ಟಿದೆ. ಮನೆಯಲ್ಲಿ ತಣ್ಣಗೆ ನಿದ್ದೆ ಮಾಡಲು ಅನುವು ಮಾಡಿಕೊಟ್ಟಿಲ್ಲ. ಸುಖವಾದ ನಿದ್ರೆ ಮಾಡಿ ಎಷ್ಟೋ ದಿನಗಳೇ ಆಗಿವೆ. ನನ್ನ ಪ್ರೀತಿಸುವ ಮನೆಯವರೇ ನನ್ನನ್ನು ಶತ್ರು"ನಂತೆ ನೋಡ್ತಿದ್ದಾರೆ. ನಾನು ಎಷ್ಟು ಬೇಗವೋ ಅಷ್ಟುಬೇಗ ಬಣ್ಣದ ಟಿ.". ಮನೆಗೆ ತೆಗೆದುಕೊಂಡು ಹೋಗ್ಬೇಕು. ನಾನು ಕೂಡಲೇ ಈ ನರಳಾಟದಿಂದ ಮುಕ್ತನಾಗ್ಬೇಕು. ನಾನು ಮುಂದೆ ಖಂಡಿತ ಕತೆಗಾರನಾಗಲಾರೆ. ಆದರೆ ವಾಸ್ತವ ಬದುಕು ಯಾರನ್ನು ಕೂಡ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ನಾನು ಒಂದು ಉತ್ತಮ ನಿರ್ದಶನ, ಅದಕ್ಕೆ ನಾನೊಂದು ಉದಾಹರಣೆ ಅಷ್ಟೆ. ಅಂತ ಹೇಳಿ ತನ್ನ ಮಾತು ಮುಗಿಸಿದ.
ಸಮಾರಂಭದಲ್ಲಿ ಕೊಟ್ಟ ಹತ್ತು ಸಾ"ರದ ಜೊತೆಗೆ ಕೊಟ್ಟ ಎರಡು ಸಾ"ರ ರೂ.ಗಳೊಂದಿಗೆ ಟಿ.". ಅಂಗಡಿಗೆ ಹೋಗಿ ಬಣ್ಣದ ಟಿ.". ಮನೆಗೆ ತಂದು ಪ್ಯಾಕ್ ಓಪನ್‌ಮಾಡಿ ಅಪ್ಪನ ಕೈಂದ "ಸ್ಟಾರ್‍ಟ್ ಮಾಡು... ಬಟನ್ ಒತ್ತು..." ಅಂತ ಅಂದಾಗ ನನಗೆ ಮತ್ತೆ ಇದು ಕನಸಾ ಅಂತಾ ತನ್ನನ್ನು ತಾನೇ ಚಿವುಟಿ ಕೊಂಡ, ಸಮಾಧಾನವಾಗ್ಲಿಲ್ಲ ಮನೆಯಲ್ಲಿದ್ದ ಎಲ್ಲರನ್ನು ಚೂಟಿದ. ಇದು ನಿಜ. ಕನಸಲ್ಲ. ನಿಜವಾಗಿಯೂ ಕನಸಲ್ಲ....
ನನ್ನ ಬದುಕಿನ ನರಳಾಟದ ಬಣ್ಣದ ಟಿ.". ಕಥೆಗೆ ಬಂದ ಹಣದಿಂದಲೇ ನಾನು ಬಣ್ಣದ ಟಿ.". ತಂದ ಹಾಗಾತು. ಇದನ್ನೇ ನಾನು ಅನುಭ"ಸಿದ್ದು, ಬಣ್ಣದ ಟಿ.". ಜೀವನದ ಅಸಹನೆಯ ಸಂಕೇತ ಎಂದು ಮತ್ತೊಮ್ಮೆ ತನ್ನನ್ನು ತಾನು ಚಿವುಟಿಕೊಂಡು ನೋಡಿದ. ಇದು ನನಸಾ? ಎಂದು ತನ್ನನ್ನೇ ತಾನು ಮತ್ತೆ ಪ್ರಶ್ನೆ ಮಾಡಿಕೊಂಡ. ಯಾಕೆಂದರೆ ನಂಬಲಿಕ್ಕೆ ಇನ್ನೂ ಕೂಡ ಆಗುತ್ತಿಲ್ಲ. ಹಾಗಂತ ಮನದಲ್ಲಿ ಮಂಡಿಗೆ ತಿನ್ನುತ್ತಾ ಮನೆಯ ಮೂಲೆಯಲ್ಲಿ ಕೂತ. ಬಣ್ಣದ ಟಿ.". ಮುಂದೆ ಗುಂಪುಕೂಡಿದ್ದ ಮನೆಯವರೆಲ್ಲರು, ಮತ್ತೊಂದು ಮೂಲೆಯಲ್ಲಿ ತನ್ನ ಮುದ್ದು ಬ್ಲಾಕ್ ಅಂಡ್ ವೈಟ್ ಟಿ.". ನೀನು ನನಗೆ ಮೋಸ ಮಾಡ್ದೆ, ನನ್ನನ್ನು ದೂರ ಮಾಡ್ದೆ. ಕೊನೆಗೂ ನೀನು ಕೂಡ ನನ್ನ ದ್ವೇಸಿದೆ ಅಂತ ಪೆಚ್ಚುಮೋರೆಂದ ನೋಡಿದ ಹಾಗಿತ್ತು!?

4 comments:

shivu.k said...

ಶರಣ ಬಸವರವರೆ,

ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಹೀಗೆ ಬರುತ್ತಿರಿ... ನನ್ನ ಮತ್ತೊಂದು ಬ್ಲಾಗ್ "ಕ್ಯಾಮೆರಾ ಹಿಂದೆ" ಅದಕ್ಕೂ ಬೇಟಿಕೊಡಿ ಅದರಲ್ಲಿ ನನ್ನ ಫೇವರೇಟ್ ಲೇಖನಗಳಿವೆ ಬರುತ್ತಿರಲ್ಲ !
ನಾನು ನಿದಾನವಾಗಿ ಬ್ಲಾಗಿಗೆ ಬಂದು ನಿಮ್ಮ ಲೇಖನಗಳನ್ನು ಓದುತ್ತೇನೆ.!

ಶರಣು ಹಂಪಿ said...

thanks... nimma a magu photo nan computerna wallpaper agide... adannu balisabahuda.. gurugale...?

nan kathegal bagge onchuru Kharavada pratikriye nedteeri alwa...!

Anonymous said...

hai..blog chenda maadidiya maaraaya . nudi habbada photogalu chenda eve. keep it up-arunjoladakudligi

ಡಾ.ಅರುಣ್ ಜೋಳದ ಕೂಡ್ಲಿಗಿ said...

hai..ninna blog chenda ede maaraaya.-arun jolad

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2